ಭಾರತದ ಕೃಷಿಯಲ್ಲಿ ನಿಯಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯುವ ಕೃಷಿ ವಿಧಾನಗಳನ್ನು ಉತ್ತೇಜಿಸಲು ಭಾರತ ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಯೋಜನೆಯೇ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ[೧]. ಈ ಯೋಜನೆಗಾಗಿ ೨೦೧೫ - ೧೬ ರ ಸಾಲಿನ ಬಜೆಟ್ ನಲ್ಲಿ ೫೩೩ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಬಜೆಟ್ ನಲ್ಲಿ ಈ ಮೊತ್ತದ ಹಣ ಮೀಸಲಿಡುವ ಬಗ್ಗೆ ನಿರ್ಧಾರವಾಗಿದ್ದು ೨೦೧೫ ರ ಜುಲೈ ೧ ರಂದು ನಡೆದ ಸಂಪುಟ ಸಮಿತಿಯ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ, ಆ ಸಭೆಯ ಅಧ್ಯಕ್ಷತೆಯನ್ನು ಭಾರತದ ಪ್ರಧಾನಮಂತ್ರಿಗಳಾದ ಶ್ರೀ. ನರೇಂದ್ರ ಮೋದಿಯವರು ವಹಿಸಿದ್ದರು[೨].
ಈ ಯೋಜನೆಗೆ ಐದು ವರ್ಷಗಳ (೨೦೧೫-೧೬ ರಿಂದ ೨೦೧೯-೨೦) ಅವಧಿಗೆ ಸುಮಾರು ೫೦೦೦೦ ಕೋಟಿ ರೂಪಾಯಿ ವೆಚ್ಚ ಮಾಡಲು ಅನುಮೋದನೆ ದೊರೆಯಿತು. ಈ ಯೋಜನೆಯ ಮುಖ್ಯ ಅಂಶಗಳು,
ಇದಿಷ್ಟೇ ಅಲ್ಲದೆ ಈ ಯೋಜನೆಯು ಆಡಳಿತ ವ್ಯವಸ್ಥೆಯಲ್ಲಿನ ಮಂತ್ರಿಗಳನ್ನು, ಸರ್ಕಾರಿ ಸಚಿವಾಲಯಗಳನ್ನು, ಸಂಘ ಸಂಸ್ಥೆಗಳನ್ನು, ಸಂಶೋಧನೆ ಹಾಗು ಹಣಕಾಸು ಸಂಸ್ಥೆಗಳನ್ನು ಒಡಗೂಡಿಸಿಕೊಂಡು ಕೃಷಿ ನೀರಾವರಿಗೆ ಸಂಬಂಧ ಪಟ್ಟಂತೆ ವಿಶೇಷ ವಿಧಾನಗಳನ್ನು ಹಾಗು ಮಾದರಿಗಳನ್ನು ವಿನ್ಯಾಸ ಪಡಿಸಿ ಅವುಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ನೀರಿನ ಪೋಲು ತಡೆಯುವುದು ಹಾಗು ಮಳೆ ನೀರಿನ ಬಳಕೆ ಮಾಡಿಕೊಳ್ಳುವಂತೆ ಉತ್ತೇಜಿಸುವುದು ಕೃಷಿ ಸಿಂಚಾಯಿ ಯೋಜನೆಯ ಬಹು ಮುಖ್ಯ ಜವಾಬ್ದಾರಿಯು ಹಾಗು ಗುರಿಯೂ ಆಗಿದೆ. ಎಲ್ಲ ರಂಗಗಳಲ್ಲೂ ನೀರಿನ ನಿಯಮಿತ ಬಳಕೆಯಾಗಿ ನೀರಿಗೆ ತಗಲುವ ವೆಚ್ಚ ಕಡಿತಗೊಳಿಸುವ ಮೂಲಕ ಆದಾಯ ವೃದ್ಧಿಗೆ ಮುಂದಾಗುವುದೇ ಈ ಯೋಜನೆಯ ಆಕಾಂಕ್ಷೆಯಾಗಿದೆ.
ಮೋರ್ ಕ್ರಾಪ್ ಪರ್ ಡ್ರಾಪ್ ' ಪ್ರತೀ ಹನಿಗೆ ಹೆಚ್ಚು ಬೆಳೆ' ಎನ್ನುವ ಸಂದೇಶವನ್ನು ಇಟ್ಟುಕೊಂಡು ಯೋಜನೆಯನ್ನು ಜಾರಿ ಮಾಡಲಾಗಿದೆ[೩].