ಮಂಗಳೂರು ಹಂಚುಗಳು' ಕರ್ನಾಟಕದ ಮಂಗಳೂರಿನಲ್ಲಿ ತಯಾರಿಕೆಯಾಗುವ ಹಂಚಿನ ಒಂದು ವಿಧ. ಈ ಹಂಚುಗಳನ್ನು ಜರ್ಮನ್ ಮಿಷನರಿಗಳು ೧೮೬೫ರಲ್ಲಿ ಮೊದಲಿಗೆ ಪರಿಚಯಿಸಿದರು. ಮಂಗಳೂರು ಹಂಚುಗಳು ಸ್ಪ್ಯಾನಿಶ್ ಮತ್ತು ಇಟಾಲಿಯನ್ ವಾಸ್ತುಶೈಲಿಯ ಭಾಗವಾಗಿದೆ.[೧]
ಈ ಹಂಚುಗಳು ಭಾರತದ ಪಶ್ಚಿಮ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರಕ್ಕೆ ಸೇರಿದವು. ಆದ್ದರಿಂದ ಅವುಗಳನ್ನು ಟೈಲ್ ಫ್ಯಾಕ್ಟರಿ ತಯಾರಕರು ಮಂಗಳೂರು ಹಂಚುಗಳೆಂದು ಹೆಸರಿಸಿದರು.
೧೮೬೫ರಲ್ಲಿ ಬಾಸೆಲ್ ಮಿಷನ್ ಸಂಸ್ಥೆಯ ಜರ್ಮನ್ ಮಿಷನರಿ ಪ್ಲೆಬ್ಸ್ಟ್ ಮೊದಲ ಟೈಲ್ ಕಾರ್ಖಾನೆಯನ್ನು ಸ್ಥಾಪಿಸಿದರು. ಸ್ಥಳೀಯವಾಗಿ ಬಾಸೆಲ್ ಮಿಷನ್ ಟೈಲ್ ಫ್ಯಾಕ್ಟರಿ ಎಂದು ಉಲ್ಲೇಖಿಸಲಾಗುತ್ತದೆ.[೨] ಇದು ಭಾರತದ ಮೊದಲ ಟೈಲ್ ಫ್ಯಾಕ್ಟರಿಯಾಗಿದೆ. ಇದು ಮಂಗಳೂರಿನ ಮೋರ್ಗಾನ್ಸ್ ಗೇಟ್ ಬಳಿಯ ನೇತ್ರಾವತಿ ನದಿಯ ದಡದಲ್ಲಿದೆ. ಇದಕ್ಕೆ ಈಗ "ಕಾಮನ್ವೆಲ್ತ್ ಟ್ರಸ್ಟ್ ಲಿಮಿಟೆಡ್" ಎಂಬ ಹೆಸರಿದೆ. ಉಳ್ಳಾಲ ಸೇತುವೆಯಿಂದ ೧೦೦ಮೀ(೦.೧೦ ಕಿಮೀ) ದೂರದಲ್ಲಿದೆ. ಈ ಹಂಚುಗಳು ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದಲ್ಲಿನ ಸರ್ಕಾರಿ ಕಟ್ಟಡಗಳಿಗೆ ಶಿಫಾರಸು ಮಾಡುತ್ತಿದ್ದ ಏಕೈಕ ಹಂಚುಗಳು.[೧][೩] ವಿಶ್ವ ಪಾರಂಪರಿಕ ತಾಣವಾದ ಛತ್ರಪತಿ ಶಿವಾಜಿ ಟರ್ಮಿನಸ್ ಮಂಗಳೂರು ಹಂಚುಗಳನ್ನು ಹೊಂದಿದೆ. ಆಲ್ಬುಕರ್ಕ್ ಟೈಲ್ ಫ್ಯಾಕ್ಟರಿ ಪ್ರಾರಂಭವಾದ ನಂತರ ಮಂಗಳೂರಿಗರು ಮಂಗಳೂರು ಹಂಚುಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡರು. ಈ ಕಾರ್ಖಾನೆಯಲ್ಲಿ ಉತ್ಪಾದಿಸಿದ ಹಂಚುಗಳಿಗೆ ಭಾರತೀಯ ಉಪಖಂಡ ಮತ್ತು ಪೂರ್ವ ಆಫ್ರಿಕಾದಾದ್ಯಂತ ಹೆಚ್ಚಿನ ಬೇಡಿಕೆಯಿತ್ತು. ೧೯೦೦ರ ದಶಕದಲ್ಲಿ ಮಂಗಳೂರಿನಲ್ಲಿ ಸುಮಾರು ೨೫ಟೈಲ್ ಕಾರ್ಖಾನೆ ಆರಂಭಗೊಂಡವು. ೧೯೯೪ರರಲ್ಲಿ ೭೫ ಟೈಲ್ ಕಾರ್ಖಾನೆಗಳು ಮಂಗಳೂರಿನಲ್ಲಿದ್ದವು. ಈ ಹಂಚುಗಳ ಜೊತೆಗೆ ಕಾರ್ಖಾನೆಗಳು ಸುತ್ತುಗಳು, ಸುಣ್ಣಕಲ್ಲು ಮತ್ತು ಇಟ್ಟಿಗೆಗಳಂತಹ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಿದರು.
ಮಂಗಳೂರಿನ ಪ್ರಮುಖ ಟೈಲ್ ಕಾರ್ಖಾನೆಗಳು:
ಮಣ್ಣನ್ನು ಸಂಗ್ರಹಿಸಿದ ಬಳಿಕ ಒಂದು ಅಚ್ಚು ಇರಿಸಲಾಗುತ್ತದೆ ಮತ್ತು ಅದನ್ನು ನಿಖರವಾಗದ ಮಾಪನಕ್ಕೆ ಕತ್ತರಿಸಲಾಗುತ್ತದೆ. ಆಕಾರ ಹೊಂದಿರುವ ಮಣ್ಣಿನ ಭಾಗವನ್ನು ಕಾರ್ಖಾನೆಯ ಲೋಗೋ ಇರುವ ಮತ್ತೊಂದು ಯಂತ್ರದ ಮೇಲೆ ಇರಿಸಲಾಗುತ್ತದೆ. ಕೊನೆಗೆ ಆ ಯಂತ್ರವು ಅದನ್ನು ಟೈಲ್ ಆಗಿ ಆಕಾರಗೊಳಿಸುತ್ತದೆ.
ಬೇಸಿಗೆಯಲ್ಲಿ ಈ ಹಂಚಗಳು ತಂಪಾಗಿರುತ್ತವೆ. ಇವುಗಳನ್ನು ಅಡುಗೆಕೋಣೆಗಳ ಛಾವಣಿಗೆ (ಹೊಗೆಯಿಂದ ತಪ್ಪಿಸಿಕೊಳ್ಳಲು) ಮತ್ತು ಸ್ನಾನಗೃಹಗಳಿಗೆ ಬಳಸುತ್ತಾರೆ. ಈ ಮಣ್ಣಿನ ಹಂಚುಗಳನ್ನು ತೀವ್ರ ಶಾಖದ ಅಡಿಯಲ್ಲಿ ಜೋಡಿಸಲಾಗಿರುವುದರಿಂದ, ಬೆಂಕಿಯ ಹಾನಿಯ ನಿಯಂತ್ರಣವನ್ನು ಬಮಾಡುತ್ತದೆ. ಜೇಡಿಮಣ್ಣಿನ ಹಂಚುಗಳು ಸಾಮಾನ್ಯವಾಗಿ ಬಿಳಿ, ಹಳದಿ, ಕಿತ್ತಳೆ ಅಥವಾ ಕಂದು ಬಣ್ಣದಲ್ಲಿರುತ್ತವೆ. ಈ ಹಂಚುಗಳನ್ನು ಆದ್ಯತೆಗೆ ತಕ್ಕಂತೆ ಶೈಲಿ ಹಾಗೂ ಬಣ್ಣಗಳಲ್ಲಿ ಬದಲಾಯಿಸಬಹುದು.ಮಣ್ಣಿನ ಹಂಚುಗಳು ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಹಂಚುಗಳಲ್ಲಿರುವ ಇತರ ವಸ್ತುಗಳನ್ನು ಕೈಯಿಂದ ತೆಗೆದುಹಾಕಲಾಗುತ್ತದೆ. ಇದನ್ನು ಒಂದು ಗೂಡಿನಲ್ಲಿ ಜೇಡಿಮಣ್ಣಿನ ಹಂಚಿನ ಸಾಂದ್ರತೆ ಸಮಯ ಮತ್ತು ತಾಪಮಾನಕ್ಕೆ ಸರಿಯಾಗಿ ಬಿಸಿ ಮಾಡಲಾಗುತ್ತದೆ..[೪]