ರಾಮಕೃಷ್ಣ ವಿ. ಹೊಸೂರು. | |
---|---|
![]() ೨೦೧೪ ರಲ್ಲಿ ಭಾರತದ ಮಾಜಿ ರಾಷ್ಟಪತಿ ಪ್ರಣಬ್ ಮುಖೆರ್ಜೀಯವರಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ಪ್ರೊಫೆಸರ್ ಹೊಸೂರು | |
Born | ೧೬ ಮೇ ೧೯೫೩ |
Occupation | ಬಯೋಫಿಸಿಕಲ್ ವಿಜ್ಞಾನಿ |
Spouse | ಮೇಧಾವಿನಿ ಹೊಸೂರು |
Children | ಪವನ್ ಹೊಸೂರು(ಮಗ) ಕೀರ್ತಿ ಹೊಸೂರು ರೈ(ಮಗಳು) |
Awards | ಪದ್ಮಶ್ರೀ ಬ್ರೂಕರ್ ಯಂಗ್ ಸೈಂಟಿಸ್ಟ್ ಅವಾರ್ಡ್ , ಐಎನ್ಎಸ್ಎ ಯಂಗ್ ಸೈಂಟಿಸ್ಟ್ ಮೆಡಲ್ , ಬಿ.ಎಮ್.ಬಿರ್ಲಾ ಪ್ರಶಸ್ತಿ , ಸೊಸೈಟಿ ಫಾರ್ ಕ್ಯಾನ್ಸರ್ ರಿಸರ್ಚ್ ಅವಾರ್ಡ್ , ಜೆ.ಸಿ.ಬೋಸ್ ನ್ಯಾಷನಲ್ ಫೆಲೋಶಿಪ್ , ಪ್ರೊ.ಜಿ.ಎನ್.ರಾಮಚಂದ್ರನ್ ಚಿನ್ನದ ಪದಕ , ಆಚಾರ್ಯ ಪ್ರಫುಲ್ಲ ಚಂದ್ರ ರೈ ಮೆಮೊರಿಯಲ್ ಅವಾರ್ಡ್ , ಫೆಲೋ ಆಫ್ ಇಂಟರ್ನ್ಯಾಷನಲ್ ಸೊಸೈಟಿ ಆಫ್ ಮ್ಯಾಗ್ನೆಟಿಕ್ ರೆಸೊನೆನ್ಸ್ |
ಪ್ರೊಫೆಸರ್ ರಾಮಕೃಷ್ಣ ವಿಜಯಾಚಾರ್ಯ ಹೊಸೂರು(೧೬ ಮೇ ೧೯೫೩) ರವರು ಭಾರತೀಯ ಬಯೋಫಿಸಿಕಲ್ ವಿಜ್ಞಾನಿ . ಇವರು ಪರಮಾಣು ಮ್ಯಾಗ್ನೆಟಿಕ್ ರೆಸೋನೆನ್ಸ್ ಮತ್ತು ಆಣ್ವಿಕ ಬಯೋಫಿಸಿಕ್ಸ್ ಕ್ಷೇತ್ರಗಳಲ್ಲಿನ ಪರಿಣತಿಗೆ ಹೆಸರುವಾಸಿಯಾಗಿದ್ದಾರೆ .[೧] [೨] [೩]ಭಾರತ ಸರಕಾರವು ೨೦೧೪ ರಲ್ಲಿ , ಭಾರತದ ನಾಲ್ಕನೇ ಅತ್ಯುನ್ನತ ಪುರಸ್ಕಾರವಾದ ಪದ್ಮಶ್ರೀ ಪ್ರಶಸ್ತಿಯನ್ನು ಹೊಸೂರವರ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳಿಗಾಗಿ ನೀಡಿ ಗೌರವಿಸಲಾಯಿತು.[೪]
ರಾಮಕೃಷ್ಣ ವಿ. ಹೊಸೂರು ರವರು ೧೬ ಮೇ ೧೯೫೩ ರಂದು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಜನಿಸಿದರು . [೫]
ರಾಮಕೃಷ್ಣ ವಿಜಯಾಚಾರ್ಯ ಹೊಸೂರು ರವರು
ಹೊಸೂರು ರವರು ಆಗಸ್ಟ್ ೧೯೭೮ ರಲ್ಲಿ ಟಿಐಎಫ್ಆರ್ ನಲ್ಲಿ ಸೇರ್ಪಡೆಯಾಗುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು . ೧೯೮೬ ರಲ್ಲಿ , ಅವರು ರೀಡರ್ನ ಹುದ್ದೆಗೆ ಟಿಐಎಫ್ಆರ್ ಅನ್ನು ಸೇರಿಕೊಂಡರು . ಐದು ವರ್ಷಗಳ ನಂತರ , ಅವರು ಅಸೋಸಿಯೇಟ್ ಪ್ರಾಧ್ಯಾಪಕರಾಗಿ ಮತ್ತು ೧೯೯೬ ರಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು . ಅವರು ೨೦೦೩ ರಿಂದ ರಾಸಾಯನಿಕ ವಿಜ್ಞಾನ ಇಲಾಖೆಯಲ್ಲಿ ಟಾಟಾ ಇನ್ಸ್ಟಿಟ್ಯೂಟ್ ನ ಹಿರಿಯ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ . ಇವರು ೨೦೦೨ ರಿಂದ ೨೦೦೪ ರವರೆಗೆ ಇನ್ಸ್ಟಿಟ್ಯೂಟ್ ನ ವಿಜಿಲೆನ್ಸ್ ಅಧಿಕಾರಿ ಆಗಿದ್ದರು ಮತ್ತು ೨೦೦೨ ರಿಂದ ಇಲ್ಲಿಯವರೆಗೂ ಹೈ ಫೀಲ್ಡ್ ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೊನೆನ್ಸ್ ನ ರಾಷ್ಟ್ರೀಯ ಸೌಲಭ್ಯಕ್ಕಾಗಿ ಸಂಚಾಲಕರಾಗಿದ್ದಾರೆ . ರಾಮಕೃಷ್ಣ ಹೊಸೂರು ರವರು ಮದುವೆಯಾಗಿದ್ದು , ಇಬ್ಬರು ಮಕ್ಕಳಿದ್ದಾರೆ ಮತ್ತು ಅವರ ಕುಟುಂಬವು ಮುಂಬೈನಲ್ಲಿ ವಾಸ ಮಾಡುತ್ತಿದ್ದಾರೆ . [೭]