ಎಸ್.ಕೆ.ಪೊಟ್ಟೆಕ್ಕಾಟ್ | |
---|---|
ಜನನ | ಕೊಟ್ಟುಳಿ ಕೋಝಿಕೋಡ್, ಕೇರಳ, ಭಾರತ | ೧೪ ಮಾರ್ಚ್ ೧೯೧೩
ಮರಣ | August 6, 1982 ಕೇರಳ, ಭಾರತ | (aged 69)
ವೃತ್ತಿ | ಅಧ್ಯಾಪಕ, ಕಾದಂಬರಿಕಾರ, ಪ್ರವಾಸಕಥನ ಲೇಖಕ, ಎಂ.ಪಿ |
ಪ್ರಕಾರ/ಶೈಲಿ | ಕಾದಂಬರಿ, ಪ್ರವಾಸಕಥನ,ಸಣ್ನ ಕಥೆಗಳು,ನಾಟಕ,ಪ್ರಬಂಧ,ಕವನ |
ಪ್ರಮುಖ ಕೆಲಸ(ಗಳು) | ಒರು ದೇಶತಿಂಟೆ ಕಥಾ, ಒರು ತೆರುವಿಂಟೆ ಕಥಾ,"ನಾದನ್ ಪ್ರೇಮಮ್ |
ಪ್ರಮುಖ ಪ್ರಶಸ್ತಿ(ಗಳು) | ಜ್ಞಾನಪೀಠ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ |
ಎಸ್.ಕೆ.ಪೊಟ್ಟೆಕ್ಕಾಟ್(ಮಾರ್ಚ್ 14, 1913 –ಅಗಸ್ಟ್ 6, 1982) ಪ್ರಸಿದ್ಧ ಮಲಯಾಳಮ್ ಲೇಖಕ.ಇವರು ಸುಮಾರು ೬೦ ಪುಸ್ತ್ಕಕಗಳನ್ನು ಬರೆದಿದ್ದು,ಇದರಲ್ಲಿ ಕಾದಂಬರಿ,ಕವನ ಸಂಕಲನ,ಪ್ರವಾಸ ಕಥನ,ಸಣ್ಣ ಕಥೆಗಳು ಒಳಗೊಂಡಿವೆ.ಇವರಿಗೆ ೧೯೭೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೦ರಲ್ಲಿ ಇವರ ಕೃತಿ "ಒರು ದೇಶತಿಂಟೆ ಕಥಾ" ಎಂಬ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ[೧] ದೊರೆತಿದೆ.೧೯೮೨ರಲ್ಲಿ ಕಲ್ಲಿಕೋಟೆ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ.[೨] ಇವರ ಕೃತಿಗಳು ಹಲವಾರು ಭಾರತೀಯ ಭಾಷೆಗಳಿಗೆ ಅಲ್ಲದೆ ಆಂಗ್ಲ, ರಶಿಯನ್, ಇಟಾಲಿಯನ್,ಜರ್ಮನ್ ಮುಂತಾದ ಭಾಷೆಗಳಿಗೆ ಕೂಡಾ ಅನುವಾದ ಆಗಿವೆ.