ಕಾಯಸ್ಥ ಅಥವಾ ಕಾಯಸ್ಥ್ (ಹಿಂದಿ:कायस्थ) ಎಂಬುದು ಭಾರತದ ಒಂದು ಜಾತಿ/ಜನಾಂಗೀಯ-ಗುಂಪಾಗಿದೆ. ಅವರು ಒಂದು ವೈದಿಕ ದೇವರ ನೇರ ವಂಶಸ್ಥರು ಎಂಬಂತೆ ಧಾರ್ಮಿಕ ಗ್ರಂಥಪಾಠಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಏಕೈಕ ಒಳಪಂಗಡವಾಗಿದ್ದಾರೆ ಮತ್ತು ಚಿತ್ರಾಂಶಿ/ದೇವಪುತ್ರ[೧] ಎಂದೂ ಕರೆಯಲಾಗುವ ಪೂರ್ವಜನನ್ನು ಪೂಜಿಸುವ ಹಿಂದೂಧರ್ಮದ ಏಕೈಕ ಒಳಪಂಗಡವಾಗಿದ್ದಾರೆ. ವೇದಗಳು ಮತ್ತು ಪುರಾಣಗಳಲ್ಲಿ ಹೇಳಲಾಗಿರುವಂತೆ ಅವರು ಒಂದು ಇಬ್ಬಗೆಯ-ಜಾತಿ ಸ್ಥಾನಮಾನವನ್ನು, ಅಂದರೆ ಬ್ರಾಹ್ಮಣ ಹಾಗೂ ಕ್ಷತ್ರಿಯ ಜಾತಿಗಳ ಸ್ಥಾನಮಾನವನ್ನು ಹೊಂದಿದ್ದಾರೆ. ಮುಖ್ಯವಾಗಿ ಉತ್ತರ ಭಾರತದಾದ್ಯಂತ ಹರಡಿಕೊಂಡಿರುವ ಅವರು, ಬರಹಗಾರಿಕೆಯನ್ನು ಪ್ರಾಚೀನ ವೃತ್ತಿಯನ್ನಾಗಿ ಹೊಂದಿದ್ದ ಬ್ರಾಹ್ಮಣರ ಒಂದು ಉಪ-ಒಳಪಂಗಡವಾಗಿದ್ದಾರೆ. [೨] [೩] [೪] [೫]
ಈ ಅಧಿಕಾರವಂತ ವರ್ಗ ಹಾಗೂ ವಾಸ್ತವಿಕ ಪುರೋಹಿತರ ವರ್ಗದ ನಡುವಿನ ಪ್ರಮುಖ ವ್ಯತ್ಯಾಸಗಳು ಕಾಶ್ಮೀರ ರಾಜ್ಯದಲ್ಲಿ ಸುಮಾರು ೧೫೦೦ ವರ್ಷಗಳ ಹಿಂದೆ ಶುರುವಾಯಿತು. ಅಧಿಕಾರದ ದುರುಪಯೋಗ ನಡೆಯುತ್ತಿರುವುದರ ಕುರಿತು ಅಲ್ಲಿ ಪ್ರತಿಯೊಬ್ಬರೂ ಮತ್ತೊಬ್ಬರ ಮೇಲೆ ಸೂಚಿಸಿ ಆರೋಪಿಸುತ್ತಿದ್ದರು.[೬] [೭]
ಅತ್ಯಂತ ಪ್ರಾಚೀನವಾಗಿರುವ ಪುರಾಣಗಳು, ಸ್ಮೃತಿಗಳು ಹಾಗೂ ಶೃತಿಗಳಲ್ಲಿ ಕಾಯಸ್ಥರು ವಿವರಿಸಲ್ಪಟ್ಟಿದ್ದಾರೆ:
ಬ್ರಹ್ಮದೇವನ ಕಾಯದಿಂದ ಅವನು ಉದ್ಭವಿಸಿದ್ದರಿಂದಾಗಿ, ಅವನನ್ನು ಭೂಮಿಯ ಮುಖದ ಮೇಲಿನ ಹಲವಾರು ಗೋತ್ರಗಳ ಕಾಯಸ್ಥನೆಂದು ಕರೆಯಲಾಯಿತು."
ನೀನು ನನ್ನ ದೇಹದಿಂದ ಉದ್ಭವಿಸಿರುವೆಯಾದ್ದರಿಂದ ನಿನ್ನನ್ನು ಕಾಯಸ್ಥ ಎಂದು ಕರೆಯಲಾಗುತ್ತದೆ ಮತ್ತು ಪ್ರಪಂಚದಲ್ಲಿ ನೀನು ಚಿತ್ರಗುಪ್ತ ಎಂಬ ಹೆಸರಿನಿಂದ ಪ್ರಸಿದ್ಧನಾಗುತ್ತೀಯ. ಓ ನನ್ನ ಮಗನೇ, ಮನುಷ್ಯರ ಗುಣ ಮತ್ತು ಅವಗುಣಗಳನ್ನು ನಿಷ್ಕರ್ಷಿಸುವ ಉದ್ದೇಶಕ್ಕಾಗಿರುವ ನ್ಯಾಯದ ದೇವರ ಪ್ರದೇಶದಲ್ಲಿ ನಿನ್ನ ಆವಾಸಸ್ಥಾನವು ಯಾವಾಗಲೂ ಇರಲಿ.
(ಮನುಷ್ಯರ ದೇಹಗಳಲ್ಲಿ ಗುಟ್ಟಾಗಿರಿಸಲ್ಪಟ್ಟಿರುವ ಎಲ್ಲಾ ಪಾಪಗಳು ಮತ್ತು ಸದ್ಗುಣಗಳನ್ನು ಅಲ್ಲಿ ಧರ್ಮರಾಜ, ಚಿತ್ರಗುಪ್ತ, ಶ್ರವಣ ಮತ್ತು ಇತರರು ನೋಡುತ್ತಾರೆ).
ಕ್ಷತ್ರಿಯ ಎಂಬ ಪದದಡಿಯಲ್ಲಿ, ಕಾಯಸ್ಥರು ಕ್ಷತ್ರಿಯರು ಎಂದು ಹೇಳುತ್ತದೆ. ಚಿತ್ರಗುಪ್ತ ಸ್ವರ್ಗದಲ್ಲಿ ಆಳ್ವಿಕೆ ನಡೆಸುತ್ತಿದ್ದ ಮತ್ತು ಅವನ ಕುಟುಂಬದ ಬೆಳಕಾಗಿದ್ದ ಅವನ ಮಗ ಚಿತ್ರರಥನು ಸಮರ್ಥನಾಗಿದ್ದ ಮತ್ತು ಹೆಸರುವಾಸಿಯಾದ ಸಾಹಸಕಾರ್ಯಗಳನ್ನು ಮಾಡಿದವನಾಗಿದ್ದ. ಆತ ಅಲಹಾಬಾದ್ ಸಮೀಪದಲ್ಲಿದ್ದ ಚಿತ್ರಕೂಟದ ರಾಜನಾಗಿ ಸುದೀರ್ಘ ಕಾಲದವರೆಗೆ ಭೂಮಿಯ ಮೇಲೆ ರಾಜ್ಯಭಾರ ನಡೆಸಿದ. ಶಬ್ದ-ಕಲ್ಪದ್ರುಮದಲ್ಲಿ ’ಕ್ಷತ್ರಿಯ’ ಎಂಬ ಪದದಡಿಯಲ್ಲಿ ಮೇರು ತಂತ್ರ ವು ನಮೂದಿಸಿರುವ ವಿವರಣೆಯೂ ಇದೇ ಅಭಿಪ್ರಾಯವನ್ನು ಬೆಂಬಲಿಸುತ್ತದೆ.
ನ್ಯಾಯಾಲಯದ ದಂಡಾಧಿಕಾರಿಗಳು ಮತ್ತು ನ್ಯಾಯಾಧೀಶರಾಗಿರುವ ದಂಡ-ಧೃತರು ಧರ್ಮಜ್ಞರಾಗಿರಬೇಕು, ಕಾನೂನು ಮತ್ತು ಉತ್ತಮ ಆಡಳಿತದಲ್ಲಿ ಪರಿಣತಿಯನ್ನು ಪಡೆದಿರುವ ವ್ಯಕ್ತಿಗಳಾಗಿರಬೇಕು, ಅವರು ಬರಹಗಾರಿಕೆಯ ಕಲೆಯಲ್ಲಿ ಪರಿಣತಿ ಪಡೆದಿರುವ ಕಾಯಸ್ಥರಾಗಿರಬೇಕು.
ಇದು ತನ್ನ ಅಧಿಕಾರಿಯಿಂದ ದಾಖಲಿಸಲ್ಪಡುವಂತೆ ಅವನು (ರಾಜ) ಕ್ರಮತೆಗೆದುಕೊಳ್ಳಬೇಕು; ಆ ಅಧಿಕಾರಿಯು ಯುದ್ಧ ಮತ್ತು ಶಾಂತಿಯ ಹೊಣೆ ಹೊತ್ತವನಾಗಿರಬೇಕೇ (ಅಂದರೆ ಓರ್ವ ಕಾಯಸ್ಥನಾಗಿರಬೇಕು) ಹೊರತು ಮತ್ತಾರೂ ಆಗಿರಬಾರದು.
ಕಾಯಸ್ಥರು (ಹುಟ್ಟಿನಿಂದ) ಮೂರು ಬಗೆಗಳಲ್ಲಿದ್ದಾರೆ ಮತ್ತು ಒಟ್ಟಾರೆಯಾಗಿ ನಾಲ್ಕು ಬಗೆಗಳ ಕಾಯಸ್ಥರು ಅಸ್ಥಿತ್ವದಲ್ಲಿದ್ದಾರೆ:
೧. ಚಿತ್ರಗುಪ್ತ ಕಾಯಸ್ಥರು (ಬ್ರಹ್ಮ ಕಾಯಸ್ಥ ಅಥವಾ ಕಾಯಸ್ಥ ಬ್ರಾಹ್ಮಣ).[೮] ಜಾತಿ-ಸ್ಥಾನಮಾನ:ಬ್ರಾಹ್ಮಣ; ಬಹುತೇಕ ಪ್ರಾಚೀನ ವೈದಿಕ ಸಾಹಿತ್ಯದಲ್ಲಿ 'ಕಾಯಸ್ಥ' ಎಂಬ ಪದವು ಸಾಮಾನ್ಯವಾಗಿ ಈ ಒಳಪಂಗಡಕ್ಕೆ ಉಲ್ಲೇಖಿಸುತ್ತದೆ. ಅನ್ಯಥಾ ಉಲ್ಲೇಖಿಸದ ಹೊರತು ಈ ಲೇಖನದಲ್ಲಿ ಇನ್ನು ಮುಂದೆ 'ಕಾಯಸ್ಥ' ಎಂಬುದು ಚಿತ್ರಗುಪ್ತ ಕಾಯಸ್ಥರಿಗೆ ಸಂಬಂಧಪಟ್ಟಿರುತ್ತದೆ.[೨][೩]
೨. ಚಂದ್ರಸೇನೀಯ ಕಾಯಸ್ಥ ಪ್ರಭು (ಹೈಯಾಯ ಕುಟುಂಬದಿಂದ ಬಂದಿರುವ- ರಾಜನ್ಯ ಕ್ಷತ್ರಿಯ ಕಾಯಸ್ಥರು) ಜಾತಿ-ಸ್ಥಾನಮಾನ:ಕ್ಷತ್ರಿಯ,
೩. ಸಮ್ಮಿಶ್ರ ಸಂಬಂಧದ ಕಾಯಸ್ಥರು. ಜಾತಿ-ಸ್ಥಾನಮಾನ:ಕ್ಷತ್ರಿಯ ಅಥವಾ ಹಿಂದೂ ಶಾಸ್ತ್ರಗಳ ಕಾನೂನಿನ ಅನುಸಾರವಾಗಿರುವ ಇತರರು ಮತ್ತು
೪. ಹೆಸರು ಅಥವಾ ವೃತ್ತಿಯ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಕಾಯಸ್ಥರು (ಹುಟ್ಟಿನಿಂದಲ್ಲ). ಜಾತಿ-ಸ್ಥಾನಮಾನ: ಆ ಗುಂಪಿನ ಇತಿಹಾಸದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಪ್ರದೇಶಗಳೊಂದಿಗೆ ಇದು ಬದಲಾಗಬಹುದು
ಕಾಯಸ್ಥರು ತಮ್ಮ ವಂಶಾನ್ವೇಷಣೆಯನ್ನು ಪ್ರಭು ಚಿತ್ರಗುಪ್ತನಿಂದ ಜಾಡುಹಿಡಿದು ಪತ್ತೆಮಾಡುತ್ತಾರೆ. ಬ್ರಹ್ಮದೇವನು ನಾಲ್ಕು ವರ್ಣಗಳನ್ನು (ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಮತ್ತು ಶೂದ್ರರು) ಸೃಷ್ಟಿಸಿದ ನಂತರ, ಯಮನು (ಧರ್ಮರಾಜ) ಬ್ರಹ್ಮದೇವನ ಮುಂದೆ ಕೋರಿಕೆಯೊಂದನ್ನು ಸಲ್ಲಿಸಿ, ಮನುಷ್ಯರ ಒಳ್ಳೆಯ ಮತ್ತು ಕೆಟ್ಟ ಕೆಲಸಗಳೆರಡನ್ನೂ ದಾಖಲಿಸುವಲ್ಲಿ ಮತ್ತು ನ್ಯಾಯವನ್ನು ಅನುಷ್ಠಾನಕ್ಕೆ ತರುವಲ್ಲಿ ತನಗೆ ನೆರವಾಗಬೇಕೆಂದು ಕೇಳಿಕೊಂಡ.
ಧರ್ಮಗ್ರಂಥಗಳ ಅನುಸಾರ, ಬ್ರಹ್ಮದೇವನು ೧೧,೦೦೦ ವರ್ಷಗಳವರೆಗೆ ಧ್ಯಾನಸ್ಥನಾದ ಮತ್ತು ತನ್ನ ಕಣ್ಣುಗಳನ್ನು ಅವನು ತೆರೆದಾಗ, ಒಂದು ಲೇಖನಿ ಹಾಗೂ ಶಾಯಿ-ಕುಡಿಕೆಯನ್ನು ಹಿಡಿದುಕೊಂಡಿರುವ, ಮತ್ತು ತನ್ನ ಸೊಂಟಕ್ಕೆ ಸುತ್ತುವರಿದ ಒಂದು ಕತ್ತಿಯನ್ನು ಹೊಂದಿರುವ ವ್ಯಕ್ತಿಯನ್ನು ನೋಡಿದ. ಅವನನ್ನು ಕುರಿತು ಬ್ರಹ್ಮದೇವನು ಹೀಗೆಂದ: "ನೀನು ನನ್ನ ದೇಹದಿಂದ (ಕಾಯ) ಸೃಷ್ಟಿಸಲ್ಪಟ್ಟಿರುವೆ; ಆದ್ದರಿಂದ ನಿನ್ನ ವಂಶಸ್ಥರು ಕಾಯಸ್ಥರೆಂದೇ ಹೆಸರನ್ನು ಪಡೆಯಲಿ. ನೀನು ನನ್ನ ಮನಸ್ಸಿನಲ್ಲಿ (ಚಿತ್ರ) ಮತ್ತು ರಹಸ್ಯವಾಗಿ (ಗುಪ್ತ) ಸೃಷ್ಟಿಸಲ್ಪಟ್ಟಿರುವೆ; ಆದ್ದರಿಂದ ಚಿತ್ರಗುಪ್ತ ಎಂಬ ಹೆಸರಿನಿಂದಲೂ ನೀನು ಕರೆಯಲ್ಪಡುವಂತಾಗಲಿ.ಬ್ರಹ್ಮನು ನಂತರದಲ್ಲಿ ಅವನಿಗೆ ನ್ಯಾಯವನ್ನು ಒದಗಿಸುವ ಮತ್ತು ಧರ್ಮವನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ನೀಡುವ ಅಧಿಕಾರವನ್ನು ವಹಿಸಿದ. ಈ ರೀತಿಯಾಗಿ, ಕಾಯಸ್ಥರಿಗೆ ಬ್ರಾಹ್ಮಣ/ಕ್ಷತ್ರಿಯ ಎಂಬ ಒಂದು ಇಬ್ಬಗೆಯ ಜಾತಿಯನ್ನು ಪ್ರದಾನ ಮಾಡಲಾಯಿತು.
ಚಿತ್ರಗುಪ್ತನ ಪುರಾಣಕಥೆಗಳಲ್ಲಷ್ಟೇ ಅಲ್ಲದೇ ವೇದಗಳಲ್ಲಿಯೂ ಸಹ ಅವನು ಮಹೋನ್ನತ ರಾಜನೆಂದೇ ಉಲ್ಲೇಖಿಸಲ್ಪಟ್ಟಿದ್ದರೆ, ಉಳಿದವರು "ರಾಜಕರು" ಅಥವಾ ಸಣ್ಣ ರಾಜರೆಂದು ಕರೆಸಿಕೊಂಡಿದ್ದಾರೆ.
चित्र इद राजा राजका इदन्यके यके सरस्वतीमनु ।
पर्जन्य इव ततनद धि वर्ष्ट्या सहस्रमयुता ददत ॥ [೧೦]
ಗರುಡ ಪುರಾಣದಲ್ಲಿ ಚಿತ್ರಗುಪ್ತನನ್ನು ಹಸ್ತಾಕ್ಷರವನ್ನು ನೀಡುವ ಮೊದಲ ಮನುಷ್ಯ ಎಂದೇ ಸಂಬೋಧಿಸಲಾಗುತ್ತದೆ.
"ಚಿತ್ರಗುಪ್ತ ನಮಸ್ತುಭ್ಯಂ ವೇದಾಕ್ಷರದಾತ್ರೆ" (ಅಕ್ಷರಗಳನ್ನು ನೀಡುವ ಚಿತ್ರಗುಪ್ತನಿಗೆ ಪ್ರಣಾಮ)
ಬಲಿಹರಣ ಅಥವಾ ನೈವೇದ್ಯವನ್ನು ಅರ್ಪಿಸುವುದಕ್ಕೆ ಮುಂಚಿತವಾಗಿ ಚಿತ್ರಗುಪ್ತನನ್ನು ಪ್ರಾರ್ಥನೆ ಅಥವಾ ಆವಾಹನೆ ಮಾಡಬೇಕೆಂದು ಋಗ್ವೇದವು ಸೂಚಿಸುತ್ತದೆ.
ಶ್ರಾದ್ಧ ಅಥವಾ ಇತರ ಆಚರಣೆಗಳನ್ನು ನೆರವೇರಿಸುವಾಗ ಧರ್ಮರಾಜನ ಸ್ವರೂಪದಲ್ಲಿ (ನ್ಯಾಯದ ಪ್ರಭು) ಚಿತ್ರಗುಪ್ತನಿಗೆ ಮಾಡಬೇಕಾದ ಒಂದು ವಿಶೇಷ ಪ್ರಾರ್ಥನೆ ಅಥವಾ ಆವಾಹನೆಯೂ ಇದೆ.
"ಓಂ ತತ್ ಪುರುಷಾಯ ವಿದ್ಮಹೇ ಚಿತ್ರಗುಪ್ತ ಧೀಮಹಿ ತೇನ ಲೇಖ ಪ್ರಚೋದಯಾತ್."
ಪುರೋಹಿತರು ಶ್ರೀ ಚಿತ್ರಗುಪ್ತನಿಗೆ ಪ್ರಣಾಮವನ್ನೂ ಸಲ್ಲಿಸುತ್ತಾರೆ:
"ಯಮಮ್ ಧರ್ಮರಾಜ್ಯ ಚಿತ್ರಗುಪ್ತಾಯ ವೈ ನಮಃ."
ನವಗ್ರಹಗಳಲ್ಲಿ ಒಂದಾದ ಕೇತುವಿಗೆ ಪ್ರಭು ಚಿತ್ರಗುಪ್ತನು ಅಧಿದೇವತೆಯಾಗಿದ್ದಾನೆ, ಮತ್ತು ಚಿತ್ರಗುಪ್ತನನ್ನು ಯಾರು ಪೂಜಿಸುತ್ತಾರೋ ಅವರು ಏಳಿಗೆಯನ್ನು ಹೊಂದುತ್ತಾರೆ. ಅಷ್ಟೇ ಅಲ್ಲ, ಕೇತುವಿನ ಹಾದುಹೋಗುವ ಅವಧಿ ಅಥವಾ ಸಂಕ್ರಮಣ ಕಾಲದಲ್ಲಿ ಕಂಡುಬರುವ ಕೆಟ್ಟ ಪ್ರಭಾವಗಳೂ ಸಹ ಚಿತ್ರಗುಪ್ತನ ಪೂಜೆಯಿಂದ ಶಮನಗೊಳ್ಳುತ್ತವೆ. ಯಮಾದ್ವಿತೀಯದಂದು ಶ್ರೀ ಚಿತ್ರಗುಪ್ತಜಿಯವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ ಮತ್ತು ಇದೇ ದಿನದಂದು ಚಿತ್ರಗುಪ್ತಜಯಂತಿ ಪೂಜೆಯನ್ನು ನೆರವೇರಿಸಲಾಗುತ್ತದೆ. ಯಮರಾಜ ಮತ್ತು ಚಿತ್ರಗುಪ್ತಜಿಯವರಿಗೆ ಸಂಬಂಧಿಸಿದ ಧಾರ್ಮಿಕ ಆಚರಣೆಗಳನ್ನು ನೆರವೇರಿಸುವ ವಿಶೇಷಹಕ್ಕುಗಳು ಕಾಯಸ್ಥರಿಂದ ಕಾದಿರಿಸಲ್ಪಟ್ಟಿವೆ. ಇವುಗಳ ಪೈಕಿ, ಚಿತ್ರಗುಪ್ತಜಯಂತಿ ಪೂಜೆಯು ಅತ್ಯಂತ ಮುಖ್ಯವಾದ ಪೂಜೆಗಳಲ್ಲಿ ಒಂದೆನಿಸಿಕೊಂಡಿದೆ. ಈ ಯಜ್ಞದ ಹಿರಿಮೆಯೇನೆಂದರೆ, ಇದನ್ನು ಯಾರು ನೆರವೇರಿಸುತ್ತಾರೋ ಅವರು ತಮ್ಮ ಕರ್ಮಗಳ ದಾಖಲೆಯಲ್ಲಿ ಏನನ್ನೇ ಹೊಂದಿರಲಿ, ಅವರಿಗೆ ನರಕದ ಶಿಕ್ಷೆಗಳನ್ನು ನೀಡದೆ ಬಿಟ್ಟುಬಿಡಲಾಗುತ್ತದೆ.
ಇದಕ್ಕೆ ಸಂಬಂಧಿಸಿದ ಪ್ರಾಚೀನ ಕಥೆ/ಕಥಾ ಈಗ ಹೇಳಲ್ಪಡುತ್ತದೆ[೧೧]. ಬಹಳ ಕಾಲದ ಹಿಂದೆ ಓರ್ವ ಶಕ್ತಿವಂತ ರಾಜನಿದ್ದ. ರಾಜರುಗಳ ಪರಮೋಚ್ಚ ರಾಜನಾಗುವ ತನ್ನ ಮಹತ್ವಾಕಾಂಕ್ಷೆಯಿಂದಾಗಿ ಅವನು ಇಡೀ ಪ್ರಪಂಚವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದ್ದ. ಅವನ ಕ್ರೂರ ಕಾರ್ಯಗಳ ಕಥೆಗಳು ಪ್ರಪಂಚದ ಮೂಲೆಮೂಲೆಗಳಲ್ಲೂ ಹಬ್ಬಿದ್ದವು. ಅವನ ಕಾರ್ಯಗಳು ನಿಕೃಷ್ಟವಾದವು ಮತ್ತು ಅತಿರೇಕದ್ದು ಎಂದು ಪ್ರತಿಯೊಬ್ಬರಿಗೂ ಗೊತ್ತಿದ್ದರಿಂದಾಗಿ, ಅವನ ಕುರಿತಾಗಿ ಹೃದಯದಲ್ಲಿದ್ದ ಅತೀವವಾದ ಭಯ-ಭಕ್ತಿಗಳೊಂದಿಗೆ ಜನರು ಅವನ ಹೆಸರನ್ನು ಉಚ್ಚರಿಸುತ್ತಿದ್ದರು. ಸೌರಾಷ್ಟ್ರದ ರಾಜನಾಗಿದ್ದ ಅವನ ಹೆಸರು ಸುದಾಸ್. ತನ್ನ ರಾಜಧಾನಿಯಾದ ಸೌರಾಷ್ಟ್ರದಿಂದ ಆತ ತನ್ನ ಬೃಹತ್ ಸಾಮ್ರಾಜ್ಯವನ್ನು ಒಂದು ವಜ್ರಮುಷ್ಟಿಯ ಹಿಡಿತದೊಂದಿಗೆ ಆಳುತ್ತಿದ್ದ. ಆತನು ಅತ್ಯಂತ 'ಅಧರ್ಮೀಯರ' (ಸನಿಹದ ಅರ್ಥ: 'ಧರ್ಮವಿರೋಧಿ ಮತ್ತು ಧರ್ಮದ ಹೊಸ್ತಿಲನ್ನು ದಾಟುವವ') ಪೈಕಿ ಒಬ್ಬನೆನಿಸಿಕೊಂಡಿದ್ದ ಹಾಗೂ 'ಪಾಪ'ವನ್ನು (ಸನಿಹದ ಅರ್ಥ: 'ಪಾತಕಗಳು') ಎಸಗುವ ದುಷ್ಕರ್ಮಿಯಾಗಿದ್ದ. ತಮ್ಮ ರಾಜನು ಪಾಪಗಳಿಂದ ತುಂಬಿದ ತನ್ನ ಜೀವನದಲ್ಲಿ ಒಂದೇ ಒಂದು 'ಪುಣ್ಯ'ದ ಕಾರ್ಯವನ್ನೂ ಮಾಡಿಲ್ಲ ಎಂಬ ಅಭಿಪ್ರಾಯ ವ್ಯಾಪಕವಾಗಿದ್ದ ಅವನ ರಾಜ್ಯದ ತುಂಬೆಲ್ಲಾ ಹಬ್ಬಿತ್ತು. ಈ ರಾಜನಿಗೆ ಬೇಟೆಯಾಡುವುದೆಂದರೆ ಅಚ್ಚುಮೆಚ್ಚಿನ ವಿಷಯವಾಗಿತ್ತು. ಒಮ್ಮೆ ಹೀಗೆಯೇ ಬೇಟೆಯ ವಿಹಾರಕ್ಕೆ ಅವನು ತೆರಳಿದ್ದಾಗ, ಕಾಡಿನೊಳಗೆ ಅವನು ಕಳೆದುಹೋದ. ಅಲ್ಲಿಂದ ಹೊರಗೆಬರುವ ದಾರಿಗಾಣದೆ ಆತ ದಿಕ್ಕುತಪ್ಪಿದ, ಮತ್ತು ಯಾವುದೇ ಬಗೆಯ ಭಯದ ಕುರಿತು ಅರಿವಿರದ ಆತ, ತನ್ನ ಕಾಡುಗಳು ಹೇಗಿರಬಹುದೆಂದು ನೋಡಲು ನಿರ್ಧರಿಸಿದ. ಕಾಡುಗಳನ್ನು ಆಳವಾಗಿ ಒಳಹೊಕ್ಕು ಪರಿಶೋಧಿಸುತ್ತಿರುವಾಗ ಉತ್ತರದ ದಿಕ್ಕಿನಿಂದ ನಿಶ್ಚಿತವಾದ 'ಮಂತ್ರಗಳ' ಶಬ್ದಗಳು ಬರುತ್ತಿರುವುದನ್ನು ಅವನು ಕೇಳಿಸಿಕೊಂಡ. ಮಂತ್ರಗಳು ಯಾವ ಸ್ಥಳದಲ್ಲಿ ಜಪಿಸಲ್ಪಡುತ್ತಿದ್ದವೋ ಆ ಸ್ಥಳದೆಡೆಗೆ ಅವನು ತನ್ನ ಪ್ರಯಾಣವನ್ನು ಮುಂದುವರಿಸಿದ. ಅಲ್ಲಿ ಒಂದಷ್ಟು ಬ್ರಾಹ್ಮಣರು ಯಜ್ಞಕಾರ್ಯವನ್ನು ನೆರವೇರಿಸುತ್ತಿರುವುದು ಅವನ ಕಣ್ಣಿಗೆ ಬಿತ್ತು. ಇದಕ್ಕೆ ಸಾಕ್ಷಿಯೆನ್ನುವಂತೆ ಒಂದಷ್ಟು ಜನಸಾಮಾನ್ಯರು ಕುಳಿತುಕೊಂಡು ಅದನ್ನು ನೋಡುತ್ತಿದ್ದರು. ತನ್ನ ಒಪ್ಪಿಗೆಯಿಲ್ಲದೆಯೇ ಪೂಜೆಯೊಂದು ಆಚರಿಸಲ್ಪಡುತ್ತಿರುವುದನ್ನು ಕಂಡು ರಾಜ ತನ್ನ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡ. ತನ್ನ ಗುಡುಗಿನಂಥ ಧ್ವನಿಯಲ್ಲಿ ಅವನು ಹೀಗೆ ಹೇಳಿದ:
“ನಾನು ಸುದಾಸ್ ರಾಜ, ರಾಜರ ರಾಜ. ಮೂರ್ಖ ಜನರೇ ನನಗೆ ನಮಸ್ಕಾರ ಮಾಡಿ. ನೀವೆಲ್ಲಾ ಯಾರು ಮತ್ತು ನೀವೆಲ್ಲಾ ಇಲ್ಲಿ ಏನು ಮಾಡುತ್ತಿದ್ದೀರಿ? ನನಗೆ ನಿಮ್ಮಿಂದ ಉತ್ತರ ಬೇಕು."
ಪುರೋಹಿತರ ಗುಂಪು ತನ್ನಪಾಡಿಗೆ ತಾನು ಮಂತ್ರಗಳನ್ನು ಜಪಿಸುತ್ತಲೇ ಇತ್ತು ಮತ್ತು ಕೋಪಗೊಂಡಿದ್ದ ರಾಜನ ಕಡೆಗೆ ಯಾವುದೇ ಗಮನವನ್ನು ನೀಡಲಿಲ್ಲ. ಇವೆಲ್ಲಾ ನಡೆಯುತ್ತಿರುವಾಗ ಸ್ವಲ್ಪ ದೂರದಲ್ಲಿ ಕುಳಿತು ನೆರವೇರಿಸಲ್ಪಡುತ್ತಿದ್ದ ಯಜ್ಞಕ್ಕೆ ಸಾಕ್ಷಿಯಾಗಿದ್ದ ಜನರು ರಾಜನ ಭಯದಿಂದಾಗಿ ಬಾಯಿಮುಚ್ಚಿಕೊಂಡಿದ್ದರು. ಪುರೋಹಿತರಿಂದ ತೀರಾ ಕಡೆಗಣಿಸಲ್ಪಟ್ಟಿದ್ದಕ್ಕೆ ತನ್ನ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡ ರಾಜ, ಪುರೋಹಿತನ ತಲೆಗೆ ಹೊಡೆಯಲು ಕತ್ತಿಯನ್ನು ಹೊರಗೆಳೆದ. ಇದನ್ನು ನೋಡಿದ ಅವರ ಪೈಕಿಯ ಅತ್ಯಂತ ಕಿರಿಯ ಪುರೋಹಿತ ಎದ್ದುನಿಂತು ಹೀಗೆ ಹೇಳಿದ:
“ನಿಲ್ಲು! ಸುದಾಸ್ ರಾಜ, ನಿಲ್ಲು! ಈ ಅವಕಾಶವನ್ನು ಒಂದು ದುರ್ಘಟನೆಯಾಗಿ ತಿರುಗಿಸಬೇಡ. ನೀನು ಖಂಡನೆಗೆ ಒಳಗಾಗುವುದರ ಬದಲು ಉಳಿಸಲ್ಪಡಬೇಕು ಎಂದೇ ನಿನ್ನನ್ನು ಇಲ್ಲಿಗೆ ಕಳಿಸಲಾಗಿದೆ."
ಈ ಮಾತುಗಳನ್ನು ಕೇಳುತ್ತಿದ್ದಂತೆ ರಾಜನಲ್ಲಿ ಆಸಕ್ತಿಯುಂಟಾಗಿ, ಅವನು ಹೀಗೆ ಹೇಳಿದ: "ಏಯ್ ಚಿಕ್ಕ ಹುಡುಗಾ, ನೀನು ವಯಸ್ಸಿಗೆ ಮೀರಿದ ಮಹಾನ್ ಧೈರ್ಯ ಹಾಗೂ ಜ್ಞಾನವನ್ನು ಹೊಂದಿರುವೆ. ನೀನು ಈಗಷ್ಟೇ ಹೇಳಿದ್ದನ್ನು ಸ್ವಲ್ಪ ವಿವರಿಸಿ ಹೇಳುತ್ತೀಯಾ?”
ಆ ಕಿರಿಯ ಪುರೋಹಿತ ರಾಜನನ್ನು ಕುರಿತು ಹೀಗೆ ಹೇಳಿದ, “ಓ ಸುದಾಸ್, ನಿನ್ನನ್ನು ನೀನು ರಾಜರ ರಾಜನೆಂದು ಕರೆದುಕೊಳ್ಳುತ್ತೀಯ: ನಿನ್ನದು ಎಂಥಾ ತಪ್ಪುಗ್ರಹಿಕೆಯಪ್ಪಾ! ನೀನು ಸತ್ತಾಗ ನಿನ್ನನ್ನು ಎಂಥಾ ಶಿಕ್ಷೆಗೆ ಗುರಿಮಾಡಲಾಗುತ್ತದೆಯೆಂದರೆ, ನಿನ್ನ ಅಹಂಕಾರವೆಲ್ಲಾ ತೆಳುವಾದ ಗಾಳಿಯಲ್ಲಿ ಕಣ್ಮರೆಯಾಗಿಹೋಗುತ್ತದೆ. ಈ ಜನರೆಲ್ಲಾ ಯಾರು, ಅವರೆಲ್ಲಾ ಏನನ್ನು ಮಾಡುತ್ತಿದ್ದಾರೆ, ನನ್ನ ಈ ಮಾತುಗಳ ಉದ್ದೇಶವೇನು ಎಂಬುದನ್ನು ತಿಳಿದುಕೊಳ್ಳುವ ಬಯಕೆ ನಿನಗಿದ್ದರೆ, ನನ್ನ ಮಾತನ್ನು ಕೇಳು:
ನಾವು ಚಿತ್ರಗುಪ್ತ ಪ್ರಭುವಿನ ಮಕ್ಕಳು. ಅವನನ್ನು ಮಹಾನ್ ಋಗ್ವೇದವು ನಿಜವಾದ ರಾಜರ ರಾಜನೆಂದು ಕರೆಯುತ್ತದೆ, ಮತ್ತು ಅವನಿಗೆ ಸಿಕ್ಕಿರುವ ಆ ಬಿರುದನ್ನು ಕದಿಯುವಷ್ಟು ಯೋಗ್ಯತೆ ನಿನಗಿಲ್ಲ. ನಾವು ಕಾಯಸ್ಥರು. ನಮ್ಮ ಪ್ರಭುವಾದ ಯಮರಾಜ ಹಾಗೂ ನಮ್ಮ ಮೂಲಜನಕನಾದ ಚಿತ್ರಗುಪ್ತ ಮಹಾರಾಜನಿಗಾಗಿ ಈ ಯಮಾದ್ವಿತೀಯದ ಮಹಾನ್ ದಿನದಂದು ನಾವು ಯಜ್ಞವನ್ನು ಮಾಡುತ್ತಿದ್ದೇವೆ. ಓ ಸುದಾಸ್ ರಾಜನೇ, ಯಾರು ಈ ಪೂಜೆಯನ್ನು ಮಾಡುತ್ತಾರೋ, ಅವರನ್ನು ನರಕದ ಶಿಕ್ಷೆಗಳಿಂದ ಬಿಟ್ಟುಬಿಡಲಾಗುತ್ತದೆ.
ನಿನ್ನ ನಿಕೃಷ್ಟವಾದ ಜೀವಮಾನದಲ್ಲಿ ನೀನು ಮಾಡಿರುವ ಎಲ್ಲಾ ಪಾಪಗಳ ದಾಖಲೆಯನ್ನೂ ಚಿತ್ರಗುಪ್ತಜಿ ಹೊಂದಿದ್ದಾರೆ! ನೀನು ಯಮರಾಜ ಹಾಗೂ ಚಿತ್ರಗುಪ್ತಜಿಯವರಿಗೆ ಶರಣಾಗತನಾದರೆ, ನೀನು ನರಕದಿಂದ ವಿಮುಕ್ತಿಯನ್ನು ಪಡೆಯಬಲ್ಲೆ. ಈ ಪ್ರಪಂಚದಲ್ಲಿರುವ ಯಾವುದನ್ನೂ ಕೂಡ ಅವನಿಂದ ಮುಚ್ಚಿಡಲು ಸಾಧ್ಯವಿಲ್ಲ. ಅವನೊಬ್ಬನೇ ನಿನ್ನನ್ನು ಉಳಿಸಬಲ್ಲ. ಒಂದು ಕೈನಲ್ಲಿ ವಿಮೋಚನೆಯಿದೆ ಹಾಗೂ ಮತ್ತೊಂದು ಕೈನಲ್ಲಿ ನರಕವಿದೆ. ಬಾ, ನಮ್ಮೊಂದಿಗೆ ಸೇರಿಕೋ, ಇಲ್ಲವೇ ನಮ್ಮೆಲ್ಲರನ್ನೂ ಕೊಲ್ಲು.”
ರಾಜ ದಿಗ್ಭ್ರಮೆಗೊಂಡ ಮತ್ತು ಒಂದು ವಶೀಕರಣ ಸ್ಥಿತಿಯಲ್ಲಿರುವವನಂತೆ ಆ ಕಿರಿಯ ಪುರೋಹಿತನನ್ನು ಹಿಂಬಾಲಿಸಿದ. ನಂತರ ಆತ ಸಂಪೂರ್ಣ ಭಕ್ತಿ ಹಾಗೂ ಕರಾರುವಾಕ್ಕಾದ ಪೂಜಾವಿಧಾನದೊಂದಿಗೆ ಪೂಜೆಯನ್ನು ಕೈಗೊಂಡ. ಅದಾದ ನಂತರ ಅವನು 'ಪ್ರಸಾದ'ವನ್ನು ಸ್ವೀಕರಿಸಿದ ಮತ್ತು ಇತರ ಜನರೊಂದಿಗೆ ತನ್ನ ರಾಜ್ಯಕ್ಕೆ ಮರಳಿದ.
ಕಾಲವು ಸರಿಯುತ್ತಿದ್ದಂತೆ ಯಮದೂತರು ಅವನನ್ನು ತಮ್ಮೊಂದಿಗೆ ಯಮಲೋಕಕ್ಕೆ ಕರೆದುಕೊಂಡುಹೋಗುವ ದಿನವು ಬಂದೇಬಿಟ್ಟಿತು. ಯಮದೂತರು ರಾಜನ ಆತ್ಮವನ್ನು ಸರಪಳಿಗಳಲ್ಲಿ ಕಟ್ಟಿಕೊಂಡು ಯಮರಾಜನ ಆಸ್ಥಾನಕ್ಕೆ ಎಳೆದುಕೊಂಡುಹೋದರು. ರಕ್ತಸುರಿಸುತ್ತಿದ್ದ ಮತ್ತು ಜೀರ್ಣಾವಸ್ಥೆಯಲ್ಲಿದ್ದ ರಾಜನು ಯಮರಾಜನ ಆಸ್ಥಾನವನ್ನು ತಲುಪಿದಾಗ, ಚಿತ್ರಗುಪ್ತ ಪ್ರಭುವು ಅವನು ಮಾಡಿದ ಕರ್ಮಗಳ ಪುಸ್ತಕವನ್ನು ತೆರೆದು ಯಮರಾಜನಿಗೆ ಈ ರೀತಿಯಲ್ಲಿ ಹೇಳಿದ: "ಓ ಮಹಾನ್ ಯಮರಾಜನೇ, ಇವನ ಪ್ರಕರಣದಲ್ಲಿ ನಾನು ಇವನ ಜೀವನದ ತುಂಬೆಲ್ಲಾ ಪಾಪಕರ್ಮಗಳನ್ನೇ ಮಾಡಿದ್ದಾನೆ; ಇಷ್ಟಾಗಿಯೂ ಈ ರಾಜ ತನ್ನ ಜೀವಿತಕಾಲದಲ್ಲಿ ನಮ್ಮ ಯಜ್ಞವನ್ನು ಮಾಡಿದ್ದಾನೆ? ಕಾರ್ತೀಕ ಶುಕ್ಲ ದ್ವಿತೀಯದಂದು ಇವನು ಸಂಪೂರ್ಣ ಶ್ರದ್ಧಾಭಕ್ತಿಗಳೊಂದಿಗೆ ಮತ್ತು ಸೂಕ್ತವಾದ ವಿಧಾನದಲ್ಲಿ ಪೂಜೆಯನ್ನು ಮಾಡಿದ್ದಾನೆ. ಆ ದಿನದಂದು ಇವನು ನಮ್ಮ ಹಾಗೂ ನಿಮ್ಮ 'ವ್ರತ'ವನ್ನು ನೆರವೇರಿಸಿದ್ದಾನೆ. ಅಲ್ಲಿಂದೀಚೆಗೆ ಅವನ ಎಲ್ಲಾ 'ಪಾಪಗಳೂ' ತೊಡೆದುಹಾಕಲ್ಪಟ್ಟಿವೆ ಮತ್ತು ಧರ್ಮದ ನಿಯಮಗಳ ಪ್ರಕಾರ, ಅವನನ್ನು ನರಕಕ್ಕೆ ಕಳುಹಿಸಲಾಗುವುದಿಲ್ಲ." ಈ ರೀತಿಯಲ್ಲಿ ರಾಜನು ನರಕಕ್ಕೆ ಹೋಗದಂತೆ ಉಳಿದುಕೊಂಡ ಮತ್ತು ಇಂದಿನವರೆಗೂ ಚಿತ್ರಗುಪ್ತ ಜಯಂತಿ ಪೂಜೆಯನ್ನು ಯಾರೇ ನೆರವೇರಿಸಿದರೂ ನರಕದ ಶಿಕ್ಷೆಗಳಿಂದ ಅವರು ಬಿಡುಗಡೆಯನ್ನು ಹೊಂದುತ್ತಾರೆ.
ಚಿತ್ರಗುಪ್ತ ಪ್ರಭುವನ್ನು ಪ್ರತಿಷ್ಠಾಪಿಸಿರುವ ಹಲವಾರು ದೇವಾಲಯಗಳು ಭಾರತದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ದಕ್ಷಿಣ ಭಾರತದಲ್ಲಿ ಇವೆ. ಅವುಗಳ ಪೈಕಿ ಅತ್ಯಂತ ಪ್ರಸಿದ್ಧವಾಗಿರುವ ದೇವಾಲಯವು ಭಾರತದ ತಮಿಳುನಾಡು ರಾಜ್ಯದ ಕಾಂಚೀಪುರಂನಲ್ಲಿ [೨] Archived 2003-06-27 ವೇಬ್ಯಾಕ್ ಮೆಷಿನ್ ನಲ್ಲಿ. ನೆಲೆಗೊಂಡಿದೆ.
ಚಿತ್ರಗುಪ್ತಜಿಯವರ ಪ್ರಾಚೀನ ದೇವಾಲಯಗಳ ಪೈಕಿ ಒಂದು ಖಜುರಾಹೋದಲ್ಲಿ ಸ್ಥಾಪಿಸಲ್ಪಟ್ಟಿದೆ. ಈ ದೇವಾಲಯದ ಚಿತ್ರಗಳನ್ನು http://chitraguptvanshi.wetpaint.comನಲ್ಲಿ ಕಾಣಬಹುದು.
ಶ್ರೀ ಚಿತ್ರಗುಪ್ತಜಿಯವರು ದೇವಿ ನಂದನಿ ಮತ್ತು ದೇವಿ ಶೋಭಾವತಿ ಎಂಬಿಬ್ಬರನ್ನು ಮದುವೆಯಾಗಿ, ದಿವ್ಯವಾಗಿರುವ ಹನ್ನೆರಡು ಗಂಡುಮಕ್ಕಳನ್ನು ಪಡೆದರು. ಈ ೧೨ ಗಂಡುಮಕ್ಕಳು ಬ್ರಹ್ಮ ಕಾಯಸ್ಥರ ೧೨ ಪ್ರಮುಖ ಶಾಖೆಗಳನ್ನು ಪ್ರಾರಂಭಿಸಿದರು.
ಬ್ರಹ್ಮ ಕಾಯಸ್ಥರ ೧೨ ವಂಶಸ್ಥರೆಂದರೆ:
ಈ ಹನ್ನೆರಡು ಉಪ-ಜಾತಿಗಳು ಮತ್ತೆ ಅಲ್ ಗಳಾಗಿ ವಿಭಜಿಸಲ್ಪಟ್ಟಿವೆ. ವಂಶ ವೊಂದು ಒಬ್ಬ ರಾಜ, ಒಬ್ಬ ಋಷಿ ಅಥವಾ ಓರ್ವ ದೇವತೆ ಯಿಂದ ಹುಟ್ಟಿಕೊಳ್ಳುತ್ತದೆ ಮತ್ತು ಅದು ಬೆಳೆದಂತೆ ಸ್ವತಃ ಹಲವಾರು ಶಾಖೆಗಳಾಗಿ ಅದು ವಿಭಜಿಸಲ್ಪಡುತ್ತದೆ. ತಾವು ಭೇಟಿಯಾದ ಪ್ರದೇಶಗಳು ಹಾಗೂ ಸನ್ನಿವೇಶಗಳನ್ನು ಅವಲಂಬಿಸಿ ಈ ಸಂತತಿಯವರು ತಮ್ಮದೇ ಸ್ವಂತದ ಉಪ-ವಂಶವನ್ನು ಕಟ್ಟಲು ಶುರುಮಾಡಿದರು. ಅದೇ ವೇಳೆಗೆ ಮೂಲ (ಮುಖ್ಯ)ವಂಶಕ್ಕೆ ಅಧೀನವಾಗಿರುವುದನ್ನು ಅವರು ಅಂಗೀಕರಿಸಿದರು. ಈ ಉಪ-ವಂಶಗಳು ತಮ್ಮ ಹೆಸರುಗಳಿಗೆ ನಿರ್ದಿಷ್ಟವಾದ ನಾಮಪದಗಳನ್ನು ಸೇರಿಸುತ್ತವೆ, ಹಾಗೂ ಚಿತ್ರಗುಪ್ತ ವಂಶಕ್ಕೆ (ಚಿತ್ರಾಂಶಿ) ಸಂಬಂಧಿಸಿ ಹೇಳುವುದಾದರೆ ಅವನ್ನು ಅಲ್ ಗಳು ಎಂದು ಕರೆಯಲಾಗುತ್ತದೆ (ಸೂಚನೆ: ೧೨ ಮುಖ್ಯ ಉಪ-ಜಾತಿಗಳು ಅಂಗೀಕರಿಸಲ್ಪಟ್ಟ ವಿಭಾಗಗಳಾಗಿದ್ದು, ೧೨ ಗಂಡುಮಕ್ಕಳ ಕುಟುಂಬದ ಮೇಲೆ ಅವು ಆಧರಿಸಿವೆ, ಅವುಗಳನ್ನು ಅಲ್ ಗಳು ಎಂದು ಕರೆಯಲಾಗುವುದಿಲ್ಲ, ಅವುಗಳ ಮುಂದುವರಿದ ವಿಭಾಗಗಳೇ ಅಲ್ ಗಳು ಆಗಿವೆ).
ಅಲ್ ಎಂಬುದನ್ನು ಗೋತ್ರ ಎಂಬುದಾಗಿ ತಪ್ಪಾಗಿ ಗ್ರಹಿಸಬಾರದು ಅಥವಾ ಗೊಂದಲಪಟ್ಟುಕೊಳ್ಳಬಾರದು. ಗೋತ್ರ ಎಂಬುದು ಓರ್ವ ವೈದಿಕ ಋಷಿಯ ಹೆಸರಿನಲ್ಲಿ ಇರುತ್ತದೆ. ಈತನು ಓರ್ವ ಗುರು, ರಾಜಗುರು ಅಥವಾ ಆ ವಂಶದ ಮೂಲಜನಕನಾಗಿರಬಹುದು. ಒಂದು ವಂಶಕ್ಕೆ ಸಂಬಂಧಿಸಿದ ಗೋತ್ರವು ಎಲ್ಲ ಸಮಯದಲ್ಲೂ ಒಂದೇ ಆಗಿರುತ್ತದೆ. ಕಾಯಸ್ಥ ರಿಗೆ ಸಂಬಂಧಿಸಿ ಹೇಳುವುದಾದರೆ ಅವರದು ಕಾಶ್ಯಪ ಗೋತ್ರವಾಗಿದೆ. ಈ ರೀತಿಯಾಗಿ, ಓರ್ವ ವಂಶಜನು ಅವನ ಗೋತ್ರದಿಂದ ಮತ್ತು ಅಲ್ನಿಂದ ಗುರುತಿಸಲ್ಪಡಬಹುದು ಅಥವಾ ಪರಿಚಿತನಾಗಬಹುದು (ಕುಲ ಎಂಬ ಪದವನ್ನು ಅಲ್ ಎಂಬ ಪದದ ಜಾಗದಲ್ಲಿ ಹಲವುಬಾರಿ ಬಳಸಲಾಗುತ್ತದೆಯಾದರೂ, ಕುಲ ಎಂಬುದು ಹೆಚ್ಚು ವಿಸ್ತೃತವಾದ ಅರ್ಥವನ್ನು ಹೊಂದಿದೆ).ಅಲ್ ಗಳು ಸಾವಿರಾರು ಸಂಖ್ಯೆಯಲ್ಲಿ ಇರಬಹುದು ಮತ್ತು ೧೨ ಮುಖ್ಯ ಉಪ-ಜಾತಿಗಳ ಪೈಕಿ ಒಂದರೊಂದಿಗೆ ಕೂಡಿಸಿ ಹೆಸರಿಗೆ ಅದನ್ನು ಸೇರಿಸಬೇಕಾಗುತ್ತದೆ. ಈ ನಿಯಮದ ಅರಿವಿನ ಕೊರತೆಯಿದೆಯಾದ್ದರಿಂದ ಬಹುಪಾಲು ಜನರು ೧೨ ಮುಖ್ಯ ಉಪ-ಜಾತಿಗಳಲ್ಲಿ ತಮ್ಮ ವಂಶನಾಮಗಳು ನಮೂದಿಸಿರುವುದನ್ನು ಕಾಣದ ಸನ್ನಿವೇಶ ನಿರ್ಮಾಣವಾಗಿದೆ.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(July 2008) |
ನಿರ್ದಿಷ್ಟವಾದ ಉಪ-ಜಾತಿಗಳೊಳಗೇ ವಿವಾಹವಾಗುವುದಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ, ಕಾಯಸ್ಥರು ಕುಟುಂಬದ ಅನ್ಯಗೋತ್ರ ವಿವಾಹ ಮತ್ತು ಜಾತಿ ಸಗೋತ್ರ ವಿವಾಹವನ್ನು ಆಚರಿಸುತ್ತಾರೆ. ಒಂದೇ ಆಲ್ಗೆ ಸೇರಿದ ವ್ಯಕ್ತಿಗಳು AL (ಅಲ್ ಎಂಬುದರ ಕುರಿತು ಮೇಲೆ ನೀಡಿರುವ ಒಂದು ವ್ಯಾಖ್ಯಾನವನ್ನು ನೋಡಿ) ಅಂತರವಿವಾಹ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ, ಅದೇ ವೇಳೆಗೆ ಅದೇ ಜಾತಿಯ ಮತ್ತು ಭಿನ್ನಭಿನ್ನ ಅಲ್ಗಳ ವ್ಯಕ್ತಿಗಳು ಮಾಡಿಕೊಳ್ಳಬಹುದು. ಇದಕ್ಕೊಂದು ನಿದರ್ಶನವನ್ನು ನೀಡಬೇಕೆಂದರೆ, ಸ್ರೀವಾಸ್ತವ ಉಪ-ಜಾತಿಗೆ ಮತ್ತು ಪಾಂಡೆ ಅಲ್ಗೆ ಸೇರಿದ ವ್ಯಕ್ತಿಗಳು ಸ್ರೀವಾಸ್ತವ ಉಪ-ಜಾತಿಯ ಮತ್ತೋರ್ವ ಪಾಂಡೆಯನ್ನು ಮದುವೆಯಾಗುವುದಿಲ್ಲ. ಆದರೆ, ಸ್ರೀವಾಸ್ತವ ಉಪ-ಜಾತಿಯ ಮತ್ತೊಂದು ಅಲ್ಗೆ ಸೇರಿರುವ ವ್ಯಕ್ತಿಗಳನ್ನು ಮದುವೆಯಾಗಬಹುದು.
ಓರ್ವ ಪೂರ್ವಜನಾದ ಶ್ರೀ ಚಿತ್ರಗುಪ್ತಜಿಯನ್ನು ಪೂಜಿಸುವುದು ಮತ್ತು ಲೇಖನಿಗಳು, ಕಾಗದಗಳು ಹಾಗೂ ಪುಸ್ತಕಗಳನ್ನು ಪೂಜಿಸುವ ಒಂದು ಕ್ರಿಯಾವಿಧಿ ಶಾಸ್ತ್ರವಾದ ಕಲಮ್-ದವಾತ್ ಪೂಜೆ ಯ ಆಚರಣೆಯಿಂದಾಗಿ ಕಾಯಸ್ಥರು ಇತರ ಹಿಂದೂ ಜಾತಿಗಳಿಂದ ಅನನ್ಯವಾಗಿ ಕಂಡುಬರುತ್ತಾರೆ. ಈ ಎರಡೂ ಆಚರಣೆಗಳನ್ನು ಯಮ ದ್ವಿತೀಯದಂದು ಆಚರಿಸಲಾಗುತ್ತದೆ. ಇದು ಬ್ರಹ್ಮ ಪ್ರಭುವಿನಿಂದ ಶ್ರೀ ಚಿತ್ರಗುಪ್ತಜಿ ಸೃಷ್ಟಿಸಲ್ಪಟ್ಟ ದಿನವಾಗಿದೆ. ಅಷ್ಟೇ ಅಲ್ಲ, ಇದು ಯಮರಾಜನು ತನ್ನ ಕರ್ತವ್ಯಗಳಿಂದ ಬಿಡುಗಡೆಗೊಂಡ ಹಾಗೂ ಈ ವಿರಾಮದ ಅವಧಿಯನ್ನು ತನ್ನ ಸೋದರಿ ದೇವಿ ಯಮುನಾಳನ್ನು ಭೇಟಿಮಾಡಲು ಬಳಸಿದ ದಿನವಾಗಿದೆ; ಆದ್ದರಿಂದ ಈ ದಿನದಂದು ಇಡೀ ವಿಶ್ವವು ಭೈಯ್ಯಾ ದೂಜ್ ಎಂದು ಆಚರಿಸುತ್ತದೆ ಮತ್ತು ಕಾಯಸ್ಥರು ಈ ದಿನವನ್ನು ಶ್ರೀಚಿತ್ರಗುಪ್ತಜಯಂತಿ, ಅಂದರೆ, ತಮ್ಮ ಮೂಲಜನಕನ 'ಹುಟ್ಟುಹಬ್ಬ'ವಾಗಿ ಆಚರಿಸುತ್ತಾರೆ. ಕಾಯಸ್ಥರು "ಪೂರ್ವಜನನ್ನು-ಪೂಜಿಸುವ" ಹಿಂದೂಧರ್ಮದ ಏಕೈಕ ಒಳಪಂಗಡ ಎನಿಸಿಕೊಳ್ಳುವ ಏಕಮಾತ್ರ ವಿಶಿಷ್ಟತೆಯನ್ನು ಹೊಂದಿದ್ದಾರೆ.
ಭಾರತದಲ್ಲಿನ ಇತರ ಎಲ್ಲಾ ಜಾತಿಗಳ ಪೈಕಿ, ಕಾಯಸ್ಥರು ಇತರ ಜಾತಿಗಳೊಂದಿಗೆ ಸುಲಭವಾಗಿ ಬೆರೆಯುವ ಜಾತಿ ಎನಿಸಿಕೊಂಡಿದ್ದಾರೆ. ಮುಸ್ಲಿಮರು ಭಾರತಕ್ಕೆ ಬಂದಾಗ ಅವರು ಮಾಡಿದ್ದು ಇದನ್ನೇ. ಇದೇ ರೀತಿಯ ಆಧುನಿಕ ಉದಾಹರಣೆಗಳನ್ನು ನೀಡಬೇಕೆಂದರೆ, ಭಾರತದಿಂದ ಆಚೆಯಿರುವ ಕಾಯಸ್ಥರು ತಮ್ಮ ತಮ್ಮಲ್ಲೇ ಬೆರೆಯುವುದಕ್ಕಿಂತ ಹೆಚ್ಚಾಗಿ ಇತರ ಜಾತಿಗಳೊಂದಿಗೆ ಬೆರೆಯುತ್ತಾರೆ. ಈ ವಿಶ್ವಮಾನವ ದೃಷ್ಟಿಕೋನವು ಈ ಜಾತಿಯ ಸದಸ್ಯರನ್ನು ಪ್ರತ್ಯೇಕವಾಗಿರಿಸುತ್ತದೆ, ಮತ್ತು ಶಿಕ್ಷಣಕ್ಕೆ ನೀಡಲಾದ ಅಪ್ರತಿಮ ಮಹತ್ವದ ಜೊತೆಗೆ, ಬದಲಾಗುತ್ತಿರುವ ಕಾಲದಲ್ಲಿನ ಅವರ ಯಶಸ್ಸಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾರಣವಾಗಿದೆ.[ಸೂಕ್ತ ಉಲ್ಲೇಖನ ಬೇಕು]
ಕಾಯಸ್ಥರು ತಮ್ಮ ಹಾಸ್ಯಪ್ರಜ್ಞೆ ಮತ್ತು ಬುದ್ಧಿ-ಚಾತುರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಕಾರಣವೇನೇ ಇರಲಿ, ಒಂದು ಉತ್ತಮ ಅಭಿರುಚಿಯ ನಗುವಿಲ್ಲದೆ ಕಾಯಸ್ಥರು ಹಾಗೇ ಸುಮ್ಮನೇ ಇರಲಾರರು. ತಮಾಷೆಯ ಸ್ವಭಾವದ ಅನೇಕ ಜನರು ಹಾಗೂ ವಿದೂಷಕರನ್ನು ತೀರಾ ಹತ್ತಿರದಿಂದ ಅವಲೋಕಿಸಿದಾಗ, ಹೆಚ್ಚಿನ ಸಂದರ್ಭಗಳಲ್ಲಿ ಅವರು ಕಾಯಸ್ಥರಾಗಿರುವುದು ಕಂಡುಬರುತ್ತದೆ. ಇತರರು ಅವರನ್ನು ತಮ್ಮ ದ್ವೇಷದ ವಸ್ತುವಾಗಿ ಕಾಣುತ್ತಾರೆ. UP ಮತ್ತು ಬಿಹಾರದಲ್ಲಿ 'ಲಾಲಾಜಿ ನಗೆಹನಿಗಳು' ಎಂದೇ ಚಿರಪರಿಚಿತವಾಗಿರುವ ನಗೆಹನಿಗಳ ಒಂದು ಸರಣಿಗೆ ಕಾಯಸ್ಥರು ವಸ್ತು-ವಿಷಯವಾಗಿದ್ದಾರೆ. ಪಂಜಾಬ್ ಮತ್ತು NCRಗಿಂತ ಭಿನ್ನವಾಗಿ, "ಲಾಲಾಜಿ" ಎಂಬ ಪದವು UP ಹಾಗೂ ಬಿಹಾರದಲ್ಲಿರುವ ಕಾಯಸ್ಥರಿಗಾಗಿ ಪ್ರತ್ಯೇಕವಾಗಿ ಬಳಸಲ್ಪಡುತ್ತದೆ. ತೀಕ್ಷ್ಣವಾದ ಬುದ್ಧಿ-ಚಾತುರ್ಯ, ಗಮನಸೆಳೆಯುವಲ್ಲಿನ ಎಂದಿಗೂ ಹಸಿದಿರುವ ಬಯಕೆ ಮತ್ತು ಹಿಂಸೆಯಿಂದ ಸಂಪೂರ್ಣವಾಗಿ ದೂರವುಳಿದಿರುವುದು ಇವುಗಳಿಂದ ಲಾಲಾಜಿಯ ಪಾತ್ರವು ನಿರೂಪಿಸಲ್ಪಟ್ಟಿದೆ. ಗುಪ್ತ, ಪಾಂಡೆ, ಗಜೋಧರ್ನಂಥ ಇತರ ಪಾತ್ರಗಳನ್ನೂ ಸಹ ಲಾಲಾಜಿಯ ನಗೆಹನಿಗಳು ಸಾಮಾನ್ಯವಾಗಿ ಒಳಗೊಂಡಿರುತ್ತವೆ. ಕಾರಣಗಳೇನೇ ಇರಲಿ, ಕಾಗೆಯು ಹಲವು ವೇಳೆ ಇಂಥ ನಗೆಹನಿಗಳಲ್ಲಿ ಸೇರಿಕೊಂಡಿರುತ್ತದೆ.
ಉದಾಹರಣೆಗೆ:
ಲಾಲಾಜಿಯು ಒಂದು ಹಳ್ಳದೊಳಗೆ ಬೀಳುತ್ತಾನೆ. ಪಕ್ಕದಲ್ಲೇ ಹಾದುಹೋಗುತ್ತಿದ್ದ ಗುಪ್ತ ಲಾಲಾಜಿಯನ್ನು ಕಂಡು ಕೇಳುತ್ತಾನೆ: "ಲಾಲಾಜಿ ಹಾತ್ ದೀಜಿಯೇ"(ನನಗೆ ನಿಮ್ಮ ಕೈಯನ್ನು ನೀಡಿ). ಲಾಲಾಜಿಯು ಸುಮ್ಮನೇ ನಿಲ್ಲುತ್ತಾನೆ.
ಆಗ ಅಲ್ಲಿಗೆ ಬರುವ ಪಾಂಡೆ ಹೇಳುತ್ತಾನೆ: "ಅರೇ ಗುಪ್ತ, ಹಾತ್ ದೀಜಿಯೇ ನಹೀ ಹಾತ್ ಲೀಜಿಯೇ ಬೋಲೋ"(ತನ್ನ ಕೈಯನ್ನು ನೀಡುವಂತೆ ಅವನನ್ನು ಕೇಳಬೇಡ, ನಿನ್ನ ಕೈಯನ್ನು ತೆಗೆದುಕೊಳ್ಳಲುಬ ಅವನಿಗೆ ಹೇಳು).
ಮತ್ತೊಂದು:
ಕಾಯಸ್ಥನೊಬ್ಬ ಒಂದು ಕಾಗೆಯನ್ನು ಹಿಡಿದ ಮತ್ತು ಅದರ ಕುತ್ತಿಗೆಯನ್ನು ಕಚ್ಚುವವನಿದ್ದ. 'ನಿನ್ನ ಜಾತಿ ಯಾವುದು' ಎಂದು ಕಾಗೆಯು ಅವನನ್ನು ಕೇಳಿತು. ತುಂಬಾ ಹೊತ್ತು ಯೋಚಿಸಿದ ಕಾಗೆಯು, "ಕಾ_ಯಸ್ಥ್" ಎಂದು ಹೇಳಲು ಇವನು ತನ್ನ ಬಾಯನ್ನು ತೆರೆಯಬೇಕಾಗುತ್ತದೆ ಎಂದು ಭಾವಿಸಿತ್ತು. ಆದರೆ ಕಾಯಸ್ಥ ಹೇಳಿದ: 'ಲಾಲಾ'.
ಕಾಯಸ್ಥ ಮಂತ್ರಿಗಳು ಹಿಂದೂ ಪುರಾಣದಲ್ಲಿ ನಮೂದಿಸಲ್ಪಟ್ಟಿದ್ದಾರೆ. ರಘುವಂಶಿಗಳಿಗಿಂತ ಮುಂಚಿತವಾಗಿ, ಅಯೋಧ್ಯಾ ರಾಜ್ಯವು ಚಿತ್ರಗುಪ್ತನ ವಂಶಸ್ಥರಾದ ಮಾಥುರ್ ಆಡಳಿತಗಾರರಿಂದ ಆಳಲ್ಪಡುತ್ತಿತ್ತು.
"ಕಾಯಥ್" ಅಥವಾ ವರ್ತಮಾನ ಕಾಲದ ಬರಹಗಾರರ ಆನುವಂಶಿಕ ಜಾತಿಯಿಂದ ಪ್ರತಿನಿಧಿಸಲ್ಪಟ್ಟಿರುವ ಕಾಯಸ್ಥರು ಮೂಲತಃ ಒಂದು ಉಪ-ಸೇನಾವರ್ಗವನ್ನು ರೂಪಿಸಿದರು.[13] ಭಾರತದ ಮಾನವಚರಿತ್ರೆಯ ಸಮೀಕ್ಷಾ ಇಲಾಖೆಯು ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಕೈಗೊಂಡ ಒಂದು ಸಮೀಕ್ಷೆಯು ತೀರ್ಮಾನಕ್ಕೆ ಬಂದ ಪ್ರಕಾರ, ಮೌರ್ಯರ ಅವಧಿಯಲ್ಲಿ ಕಾಯಸ್ಥ ಸಮುದಾಯದ ಜನರು ಆಡಳಿತಗಾರರಾಗಿಯೂ ಕೂಡ ಪ್ರಭಾವಿಗಳಾಗಿದ್ದರು. ಅಷ್ಟೇ ಅಲ್ಲ, ಹಿಂದೂ ರಾಜರು ಕಾಯಸ್ಥರಿಗೆ ಜಮೀನುಗಳನ್ನು ಮಂಜೂರುಮಾಡುತ್ತಿದ್ದರು ಎಂಬುದಕ್ಕೆ ಅನೇಕ ಪುರಾವೆಗಳು ಕಂಡುಬಂದಿವೆ. ಇದು ಕೇವಲ ಒಂದು ನಿರ್ದಿಷ್ಟ ಜಾತಿಯಿಂದ ಅನುಭವಿಸಲ್ಪಡುತ್ತಿದ್ದ ಆಚರಣಾ ವ್ಯವಸ್ಥೆಯಾಗಿತ್ತು. ಮೇಲಾಗಿ, ಹಿಂದೂ ರಾಜರ ಆಳ್ವಿಕೆಯಡಿಯಲ್ಲಿ ಸಂಸ್ಕೃತವು ಸಂಸ್ಥಾನದ ಭಾಷೆಯಾಗಿದ್ದಾಗ ಕಾಯಸ್ಥರಿಗೆ ಈ ಬಗೆಯ ಸ್ಥಾನಮಾನ ದೊರೆತಿದ್ದು ತಾರ್ಕಿಕವಾಗಿಯೇ ಕಾಣುತ್ತದೆ.
ಸುಮಾರು ೭ನೇ ಶತಮಾನದಲ್ಲಿ [೧೪] ಕಾಶ್ಮೀರಿ ರಾಜಕೀಯ ವಲಯದಲ್ಲಿ ಕಾಯಸ್ಥರು ಅತ್ಯಂತ ಪ್ರಭಾವಿ ಜಾತಿಗಳಲ್ಲಿ ಒಬ್ಬರೆನಿಸಿಕೊಂಡಿದ್ದರು (ಉಲ್ಲೇಖ: ರಾಜತರಂಗಿಣಿ).ಕಾಯಸ್ಥರು ರಾಜರಾಗಿ, ವಿತ್ತಪರಿಣಿತರಾಗಿ ಮತ್ತು ಸಲಹೆಗಾರರಾಗಿದ್ದರೆಂದು ವಿವರಿಸಲ್ಪಟ್ಟಿರುವುದನ್ನು ಈ ಸಾಹಿತ್ಯ ಮತ್ತು ಸಮಕಾಲೀನ ಸಂಸ್ಕೃತ ಸಾಹಿತ್ಯದಲ್ಲಿ ನಾವು ಕಾಣಬಹುದು. ಕಾಶ್ಮೀರದ ಕಾಯಸ್ಥ ರಾಜವಂಶದ ಪೈಕಿ ಲಲಿತಾದಿತ್ಯ ಮುಕ್ತಪೀಡಾ ಎಂಬಾತ ಓರ್ವ ವೈಭವಪೂರ್ಣ ರಾಜನಾಗಿದ್ದ.
ಪ್ರಾಚೀನ ಅವಧಿಯ ಬಹುಭಾಗದ ಅವಧಿಯಲ್ಲಿ ಕಾಯಸ್ಥರಿಂದ ಬಳಸಲ್ಪಟ್ಟಿರುವ ಹಲವಾರು ಹಸ್ತಾಕ್ಷರಗಳಿಗೆ ಸಂಬಂಧಿಸಿದಂತೆ ಕೇವಲ ಪಾಠವನ್ನು ಊಹಿಸಬಹುದು. ಆದರೆ ಬ್ರಾಹ್ಮಿ ಲಿಪಿಯು ನಿಸ್ಸಂಶಯವಾಗಿ ವ್ಯಾಪಕವಾಗಿ ಬಳಕೆಯಲ್ಲಿತ್ತು ಮತ್ತು ಸ್ವತಃ ಭಗವಾನ್ ಚಿತ್ರಗುಪ್ತನಿಂದ ನೀಡಲ್ಪಟ್ಟಿರುವಂತೆ ಈ ಲಿಪಿಯು ವೇದಗಳ ಲಿಪಿಯಾಗಿಯೂ ಅನೇಕಬಾರಿ ಮೆಚ್ಚುಗೆಗೆ ಒಳಗಾಗಿತ್ತು.
ಕಲಿಯುವಿಕೆ ಮತ್ತು ಸಮಾಜೋ-ಆರ್ಥಿಕ ಸ್ಥಾನಮಾನ ಈ ಎರಡಕ್ಕೂ ಸಂಬಂಧಿಸಿದಂತೆ ಕಾಯಸ್ಥ ಜಾತಿಯು ಹೊಂದಿದ್ದ ಆಕರ್ಷಣೆ ಅಥವಾ ಒಲವು, ಭಾರತದಲ್ಲಿ ಭಿನ್ನಭಿನ್ನವಾದ ಸಾಮ್ರಾಜ್ಯಗಳು ಸ್ಥಾಪನೆಯಾಗಿದ್ದರಿಂದ ಕಂಡುಬಂದ ಬದಲಾಗುತ್ತಿದ್ದ ಆಡಳಿತಾತ್ಮಕ ಕಾರ್ಯನೀತಿಗಳು ಹಾಗೂ ಅಧಿಕೃತ ಭಾಷೆಗಳಲ್ಲಿ ಸದರಿ ಸಮುದಾಯವು ಪರಿಣತಿಯನ್ನು ಬೆಳೆಸಿಕೊಳ್ಳುವಲ್ಲಿ ಅವಕಾಶ ಮಾಡಿಕೊಟ್ಟಿತು ಮತ್ತು ನಿರ್ದೇಶಿಸಿತು. ಪರ್ಷಿಯನ್, ಟರ್ಕಿಷ್, ಅರೇಬಿಕ್ ಮತ್ತು ನಂತರದಲ್ಲಿ ಇಸ್ಲಾಮಿಕ್ ಭಾರತದಲ್ಲಿನ ಉರ್ದುವಿಗೆ ಸಂಬಂಧಿಸಿದ ಪಾರಿಭಾಷಿಕ ಪದಗಳನ್ನು ಈ ಸಮುದಾಯವು ಕಲಿತುಕೊಂಡಿತು ಮತ್ತು ರೂಪಿಸಿತು. ಮುಖ್ಯವಾಗಿ, ಈ ಸಮುದಾಯವು ಹಣಕಾಸು ನೀತಿ, ನ್ಯಾಯಶಾಸ್ತ್ರ ಹಾಗೂ ತೆರಿಗೆ ವಿಧಿಸುವಿಕೆಯ ವಿಷಯಗಳಲ್ಲಿ ಸಾಮ್ರಾಜ್ಯ-ವ್ಯಾಪಿ ಆಡಳಿತಾತ್ಮಕ ಪರಿಪಾಠಗಳನ್ನು ಸೃಷ್ಟಿಸಿತು, ನಿರ್ವಹಿಸಿತು ಮತ್ತು ಅಭಿವೃದ್ಧಿಪಡಿಸಿತು.
ಪರ್ಸೋ-ಅರೇಬಿಕ್ ಲಿಪಿಯು ಈ ಅವಧಿಯ ಸಮಯದಲ್ಲಿ ಪ್ರಮುಖವಾಗಿ ಬಳಸಲ್ಪಟ್ಟ ಲಿಪಿಯಾಗಿತ್ತು.
ಗಮನಾರ್ಹವಾದ ಉದಾಹರಣೆಗಳಲ್ಲಿ ರಾಜಾ ತೋದರರ ಮಲ್[೧೫] ಸೇರಿದ್ದಾನೆ. ಈತ 'ಭಾಗವತ ಪುರಾಣ'ವನ್ನು ಪರ್ಷಿಯಾ ಭಾಷೆಗೆ[೧೬] ಅನುವಾದಿಸಿದ. ಮುಘಲ್ ಸಾಮ್ರಾಜ್ಯದ[೧೭] ಅವಧಿಯಲ್ಲಿ 'ಕಂದಾಯ ಪದ್ಧತಿ'ಯನ್ನು ಸಂಸ್ಥಾಪಿಸಿ ಅದಕ್ಕೊಂದು ಸೂಕ್ತವಾದ ಆಕಾರವನ್ನು ಕೊಟ್ಟ ಅಕ್ಬರ್ ಸಾಮ್ರಾಟನ ಆಸ್ಥಾನದಲ್ಲಿದ್ದ 'ನವರತ್ನಗಳ' ಪೈಕಿ ರಾಜಾ ತೋದರಮಲ್ ಒಬ್ಬನಾಗಿದ್ದ.
ಈ ಬಗೆಯ ಪಾತ್ರನಿರ್ವಹಣೆಗಳು ಇಷ್ಟಕ್ಕೇ ನಿಲ್ಲದೇ ವಸಾಹತು ಯುಗಕ್ಕೂ ಮುಂದುವರಿಯಿತು. ಈ ಅವಧಿಯಲ್ಲಿ ಅನೇಕ ಕಾಯಸ್ಥರು ಇಂಗ್ಲಿಷ್ ಭಾಷೆಯನ್ನು ಕಲಿಯುವಲ್ಲಿ ಮೊದಲಿಗರೆನಿಸಿಕೊಂಡಿದ್ದೇ ಅಲ್ಲದೇ, ನಾಗರಿಕ ನೌಕರರು, ತೆರಿಗೆ ಅಧಿಕಾರಿಗಳು, ಕಿರಿಯ ಆಡಳಿತಾಧಿಕಾರಿಗಳು, ಶಿಕ್ಷಕರು, ಕಾನೂನು ಸಹಾಯಕರು ಮತ್ತು ನ್ಯಾಯವಾದಿಗಳಾಗುವಲ್ಲಿಯೂ ಮೊದಲಿಗರೆನಿಸಿಕೊಂಡರು. ಈ ಕಾಲದ ಅವಧಿಯಲ್ಲಿ, ಕಾಯಸ್ಥ ಸಮುದಾಯದ ಸದಸ್ಯರು (ಇತರ ಸಮುದಾಯಗಳಿಗಿಂತ ಹೆಚ್ಚಾಗಿ) ಇಂಗ್ಲಂಡ್ನಲ್ಲಿ ಶೈಕ್ಷಣಿಕ ತರಬೇತಿಯನ್ನು ಪಡೆಯಲು ಮುಂದಾದರು ಮತ್ತು ಬ್ರಿಟಿಷ್ ಭಾರತದಲ್ಲಿನ ಸ್ಥಳೀಕರಿಗೆ ತಲುಪಲು ಸಾಧ್ಯವಾಗಿದ್ದ ಉನ್ನತಮಟ್ಟದ ಸ್ಥಾನಮಾನಗಳಿಗೆ ಅನೇಕ ಸಂದರ್ಭಗಳಲ್ಲಿ ಏರಿದರು. ವಿದೇಶಗಳಲ್ಲಿದ್ದ ಭಾರತೀಯ ವಿದ್ಯಾರ್ಥಿಗಳ ಪೈಕಿ ಅವರ ಪಾಲು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಇದ್ದುದರ ಪರಿಣಾಮವಾಗಿ, ಮತ್ತು ಜನಾಂಗದ ಸ್ಥಾನಮಾನದ ಕಾರಣದಿಂದಾಗಿ ಅನೇಕರು ಮುನ್ನಡೆಯ ತುತ್ತತುದಿಯನ್ನು ಏರಿದ್ದರಿಂದಾಗಿ, ಭಾರತದಲ್ಲಿನ ಬ್ರಿಟಿಷ್ ಆಳ್ವಿಕೆಯನ್ನು ಪ್ರಶ್ನಿಸಿದ ಆರಂಭಿಕ ರಾಜಕೀಯ ಗುಂಪುಗಳಲ್ಲಿ ಸಮುದಾಯದ ಸದಸ್ಯರು ನಿರ್ಣಾಯಕ ಪಾತ್ರಗಳನ್ನು ವಹಿಸಿದರು.
ಈ ಕಾಲದ ಅವಧಿಯಲ್ಲಿ ಕೈಥಿ ಲಿಪಿಯನ್ನು ಬಳಸಲಾಯಿತು. ಸ್ವತಃ ಈ ಲಿಪಿಯ ಹೆಸರೇ ಅದರ ಸೃಷ್ಟಿಕರ್ತರಾದ ಕಾಯಸ್ಥರ ಕುರಿತು ಒಂದು ಅತ್ಯಂತ ಸ್ಪಷ್ಟವಾದ ಉಲ್ಲೇಖವನ್ನು ನೀಡುತ್ತದೆ. ಇದರಿಂದಾಗಿ ಕಾಯಸ್ಥರು ಮಧ್ಯಯುಗದ ಅವಧಿಯಲ್ಲಿ ಅನೇಕ ವೇಳೆ "ಕಾಯಥ್" ಎಂದು ಉಲ್ಲೇಖಿಸಲ್ಪಡುತ್ತಿದ್ದರು. ತಮ್ಮ ಹೆಸರಿನೊಂದಿಗೆ ಸಂಬಂಧವಿರುವ 'ಕೈಥಿ' ಎಂಬ ಲಿಪಿಯನ್ನು ಹೊಂದುವುದರ ಒಂದು ಅನನ್ಯ ವೈಲಕ್ಷಣ್ಯವನ್ನು ಕಾಯಸ್ಥರು ಹೊಂದಿದ್ದಾರೆ. ಕೈಥಿಯು (ಮುಂಚಿತವಾಗಿ ಇದು ಕಾಯತಿ, ಕಾಯಥಿ ಅಥವಾ ಕಾಯಸ್ಥಿ ಎಂದೂ ಪರಿಚಿತವಾಗಿತ್ತು) ದೇವನಾಗರಿಯನ್ನು ಹೋಲುವಂತಿದ್ದು, ಉತ್ತರ ಭಾರತದಲ್ಲಿನ ಕಾಯಸ್ಥರಿಂದ ಮುಖ್ಯವಾಗಿ ಬಳಸಲ್ಪಟ್ಟಿತು. ಈಗ ಇದು ತನ್ನದೇ ಆದ ಯೂನಿಕೋಡ್ನ್ನು ಹೊಂದಿದೆ. ಅಷ್ಟೇ ಅಲ್ಲ, ರಾಷ್ಟ್ರೀಯ ಲಿಪಿಯಾಗುವಲ್ಲಿನ ಸ್ಪರ್ಧೆಯಲ್ಲಿ ಈ ಲಿಪಿಯು ಪ್ರಮುಖ ಸ್ಪರ್ಧಿಯಾಗಿತ್ತು, ಆದರೆ ಜನಸಮುದಾಯಕ್ಕೆ ಗೊತ್ತಿಲ್ಲ ಎಂಬ ಕಾರಣಕ್ಕಾಗಿ ಹಿಂದುಳಿಯಬೇಕಾಯಿತು.
ಸ್ವಾತಂತ್ರ್ಯಾನಂತರದ ಭಾರತಕ್ಕೆ ತಮ್ಮನ್ನು ಹೊಂದಿಸಿಕೊಳ್ಳುವಲ್ಲಿ ಅನೇಕ ಕಾಯಸ್ಥರು ಯಶಸ್ಸನ್ನು ಕಂಡರು. ನಾಗರಿಕ ನೌಕರರು, ಅಧಿಕಾರಿಶಾಹಿ ವ್ಯವಸ್ಥೆಯಲ್ಲಿನ ಅಧಿಕಾರಿಗಳು ಮತ್ತು ವಕೀಲರಾಗಿ ಮಾರ್ಪಡುವಲ್ಲಿನ ಅವರ ಸಾಧನೆಯು ಇದಕ್ಕೆ ಸಾಕ್ಷಿಯಾಗಿತ್ತು. ಉನ್ನತ ಶಿಕ್ಷಣದ ವಲಯದೊಂದಿಗೆ ಈ ಸಮುದಾಯವು ಹೊಂದಿದ್ದ ಸಾಂಪ್ರದಾಯಿಕ ಸಂಬಂಧವೂ ಸಹ ೧೯೭೦ರ ಮತ್ತು ೧೯೮೦ರ ದಶಕಗಳಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ ಸಮುದಾಯವು ದೊಡ್ಡ ಪ್ರಮಾಣದಲ್ಲಿ ವಲಸೆಹೋಗಲು ಕಾರಣವಾಯಿತು. ಸಮುದಾಯದ ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಅವಕಾಶಗಳನ್ನು ಅರಸಿಹೊರಟಿದ್ದು ಇದಕ್ಕೆ ಕಾರಣವಾಯಿತು. ಗಮನಾರ್ಹವಾದ ಉದಾಹರಣೆಗಳಲ್ಲಿ ಇವರು ಸೇರಿದ್ದಾರೆ: ಮೊಟ್ಟಮೊದಲ ಭಾರತದ ರಾಷ್ಟ್ರಪತಿಯಾದ Dr. ರಾಜೇಂದ್ರ ಪ್ರಸಾದ್, ಮೂರನೇ ಪ್ರಧಾನ ಮಂತ್ರಿಯಾದ ಲಾಲ್ ಬಹದ್ದೂರ್ ಶಾಸ್ತ್ರಿ, ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರಾದ ಸ್ವಾಮಿ ವಿವೇಕಾನಂದ, ಸ್ವಾತಂತ್ರ್ಯ ಹೋರಾಟಗಾರರಾದ ಸುಭಾಷ್ ಚಂದ್ರ ಬೋಸ್ ಮತ್ತು ಚಲನಚಿತ್ರ-ತಾರೆ ಅಮಿತಾಬ್ ಬಚ್ಚನ್.
ಡಾ. ರಾಜೇಂದ್ರ ಪ್ರಸಾದ್ ಭಾರತ ಗಣರಾಜ್ಯದ ಮೊಟ್ಟಮೊದಲ ರಾಷ್ಟ್ರಪತಿ ಎನಿಸಿಕೊಂಡರು.ಡಾ. ಗಣೇಶ್ ಪ್ರಸಾದ್ [೧೮] (U.P.ಯ ಬಲ್ಲಿಯಾ ಎಂಬಲ್ಲಿ ೧೮೭೬ರ ನವೆಂಬರ್ ೧೫ರಂದು ಜನನ) ಒಂದು ಅನುಕೂಲಸ್ಥ ಕಾಯಸ್ಥ್ ಕುಟುಂಬಕ್ಕೆ ಸೇರಿದವರಾಗಿದ್ದರು. ಡಾ. ಸಂಪೂರ್ಣಾನಂದ ಎಂಬುವವರು ಒಂದು ಸಾಹಿತ್ಯಿಕ ವ್ಯಕ್ತಿಯಾಗಿರುವುದರ ಜೊತೆಗೆ, U.P.ಯ ಮೊದಲ ಮುಖ್ಯಮಂತ್ರಿ ಮತ್ತು ರಾಜಾಸ್ತಾನದ ರಾಜ್ಯಪಾಲರಾಗಿದ್ದರು. ಜಯಪ್ರಕಾಶ್ ನಾರಾಯಣ್ರವರು ಇಂದಿರಾಗಾಂಧಿಯವರನ್ನು ಕೆಳಗಿಳಿಸಿದರು, ಸುಭಾಸ್ ಚಂದ್ರ ಬೋಸ್ರವರು ಸೈನ್ಯಯೋಗ್ಯ ರೀತಿಯಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿದರು. ಶಾಂತಿ ಸ್ವರೂಪ್ ಭಟ್ನಾಗರ್, ಸತ್ಯೇಂದ್ರ ನಾಥ್ ಬೋಸ್ ಮತ್ತು ಜಗದೀಶ್ ಚಂದ್ರ ಬೋಸ್ ಮೊದಲಾದವರು ಪ್ರಸಿದ್ಧ ವಿಜ್ಞಾನಿಗಳಾಗಿದ್ದರು. ಮುನ್ಷಿ ಪ್ರೇಮ್ ಚಂದ್, ಹರಿವಂಶ್ ರಾಯ್ ಬಚ್ಚನ್, ಓರ್ವ ಸ್ವಾತಂತ್ರ್ಯ ಹೋರಾಟಗಾರರಾದ ಸತ್ಯೇಂದ್ರ ಚಂದ್ರ ಮಿತ್ರ, ರಘುಪತಿ ಸಹಾಯ್ "ಫಿರಾಕಿ" ಗೋರಖ್ಪುರಿ, ಡಾ. ವೃಂದಾವನ್ ಲಾಲ್ ವರ್ಮಾ, ಡಾ. ರಾಮ್ ಕುಮಾರ್ ವರ್ಮಾ, ಮಹಾದೇವಿ ವರ್ಮಾ, ಕಮಲಾ ಚೌಧರಿ, ಡಾ. ಧರಮ್ ವೀರ್ ಭಾರತಿ ಮತ್ತು ಭಗವತಿ ಚರಣ್ ವರ್ಮಾ ಇವರೇ ಮೊದಲಾದವರು ಪ್ರಖ್ಯಾತ ಸಾಹಿತಿಗಳಾಗಿದ್ದರು. ಸ್ವಾಮಿ ವಿವೇಕಾನಂದ ಮತ್ತು ಮಹರ್ಷಿ ಮಹೇಶ್ ಯೋಗಿಯವರು ದಾರ್ಶನಿಕರಾಗಿದ್ದರು. ಅಲಕ್ ಕುಮಾರ್ ಸಿನ್ಹಾ ಭಾರತದ ಮೊಟ್ಟಮೊದಲ ಆರಕ್ಷಕ ಪ್ರಧಾನ-ಇನ್ಸ್ಪೆಕ್ಟರ್ ಆಗಿದ್ದರು.[೧೯]S.K. ಸಿನ್ಹಾ, PVSM, ನೇಪಾಳಕ್ಕೆ ಭಾರತದ ರಾಯಭಾರಿಯಾಗಿ, ಅಸ್ಸಾಂನ ರಾಜ್ಯಪಾಲರಾಗಿ ಹಾಗೂ ಜಮ್ಮು & ಕಾಶ್ಮೀರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.[೨೦] ಅಮಿತಾಬ್ ಬಚ್ಚನ್ ಹಾಗೂ ಶತ್ರುಘನ್ ಸಿನ್ಹಾರಂಥ ಕಲಾವಿದರು ಚಲನಚಿತ್ರ ಪ್ರಪಂಚದಲ್ಲಿ ಉತ್ಕೃಷ್ಟತೆಯನ್ನು ಮೆರೆದಿದ್ದಾರೆ; ರಾಜು ಶ್ರೀವಾಸ್ತವ ಹಾಸ್ಯಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ; ಮುಕೇಶ್, ಸೋನು ನಿಗಮ್ ಸಂಗೀತ ಪ್ರಪಂಚದಲ್ಲಿ ಪ್ರಸಿದ್ಧರಾಗಿದ್ದಾರೆ. ನಿರ್ಮಲ ಶ್ರೀವಾಸ್ತವ (ಈಕೆ ಶ್ರೀ ಮಾತಾಜಿ ನಿರ್ಮಲಾ ದೇವಿ ಎಂದು ಪ್ರಸಿದ್ಧರು) ಒಂದು ಹೊಸ ಧಾರ್ಮಿಕ ಆಂದೋಲನವಾದ ಸಹಜ ಯೋಗದ ಸಂಸ್ಥಾಪಕಿಯಾಗಿದ್ದಾರೆ. ಅಂಬರೀಶ್ ಶ್ರೀವಾಸ್ತವ[೨೧] ಓರ್ವ ಪ್ರಖ್ಯಾತ ವಾಸ್ತುಶಿಲ್ಪೀಯ ಎಂಜಿನಿಯರ್ ಅಷ್ಟೇ ಅಲ್ಲದೇ ಓರ್ವ ಪ್ರಖ್ಯಾತ ಕವಿಯಾಗಿದ್ದಾರೆ[೨೨]; Q&A (ಈ ಕೃತಿಯನ್ನು ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರವಾದ "ಸ್ಲಂಡಾಗ್ ಮಿಲಿಯನೇರ್" ಆಗಿ ರೂಪಾಂತರಿಸಲಾಯಿತು) ಹಾಗೂ ಸಿಕ್ಸ್ ಸಸ್ಪೆಕ್ಟ್ಸ್ನ ಲೇಖಕರಾದ ವಿಕಾಸ್ ಸ್ವರೂಪ್ ವೃತ್ತಿಪರ ಭಾರತೀಯ ರಾಜತಾಂತ್ರಿಕರಾಗಿದ್ದು, ಅಲಹಾಬಾದ್ನ ಒಂದು ಪ್ರಖ್ಯಾತ ಕಾಯಸ್ಥ ಕುಟುಂಬದಿಂದ ಬಂದವರಾಗಿದ್ದಾರೆ. ೨೦ನೇ ಶತಮಾನದ ಕೆಲವೊಂದು ಪ್ರಭಾವೀ ಹಾಗೂ ಉದಾರವಾದಿ ಕಾಯಸ್ಥ ದೇವ-ಮಾನವರಲ್ಲಿ, ಸ್ವಾಮಿ ಪ್ರಭುಪಾದ(ಹರೇ ಕೃಷ್ಣ ಆಂದೋಲನ-ISKCON), ಮಹರ್ಷಿ ಮಹೇಶ್ ಯೋಗಿ(ಅತೀಂದ್ರಿಯ ಧ್ಯಾನ), ಶ್ರೀ ಅರಬಿಂದೋ(ಸಮಗ್ರ ಯೋಗ), ಪರಮಹಂಸ ಯೋಗಾನಂದ('ಆಟೋಬಯಾಗ್ರಫಿ ಆಫ್ ಎ ಯೋಗಿ' ಖ್ಯಾತಿ ಮತ್ತು ಕ್ರಿಯಾ ಯೋಗ) ಮತ್ತು ಸ್ವಾಮಿ ವಿವೇಕಾನಂದ(ವೇದಾಂತ) ಮೊದಲಾದವರು ಸೇರಿದ್ದಾರೆ.
{{cite web}}
: Check date values in: |date=
(help)
{{cite news}}
: Unknown parameter |trans_title=
ignored (help)CS1 maint: unrecognized language (link)
{{cite book}}
: Cite has empty unknown parameter: |Rashtreey Kavi Sangam Nirdeshika 2010=
(help); Missing or empty |title=
(help); Unknown parameter |line=
ignored (help)