ಕೆ. ಪರಶರನ್ | |
---|---|
ಚಿತ್ರ:K Parasaran.jpg | |
ರಾಜ್ಯಸಭೆ (ನಾಮನಿರ್ದೇಶಿತ) ಸಂಸದ | |
In office ೨೯ ಜೂನ್ ೨೦೧೯ – ೨೮ ಜೂನ್ ೨೦೧೮ | |
ತಮಿಳುನಾಡು ನ ಅಡ್ವೊಕೇಟ್ ಜನರಲ್ | |
In office ೧೯೭೬–೧೯೭೭ | |
Preceded by | ಗೋವಿಂದ ಸ್ವಾಮಿನಾಧನ್ |
Succeeded by | ವಿ.ಪಿ ರಾಮನ್ |
Personal details | |
Born | 9 October 1927 |
ಕೆ.ಪರಶರನ್ (ಜನನ ೯ ಅಕ್ಟೋಬರ್ ೧೯೨೭) ಇವರು ಭಾರತದ ವಕೀಲರು. ಇವರು ೧೯೭೬ ರಲ್ಲಿ ರಾಷ್ಟ್ರಪತಿ ಆಳ್ವಿಕೆಯಲ್ಲಿ ತಮಿಳುನಾಡಿನ ಅಡ್ವೊಕೇಟ್ ಜನರಲ್ ಆಗಿದ್ದರು. ನಂತರ ೧೯೮೩ ಮತ್ತು ೧೯೮೯ ರ ನಡುವೆ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಅಡಿಯಲ್ಲಿ ಭಾರತದ ಅಟಾರ್ನಿ ಜನರಲ್ ಆಗಿದ್ದರು. ಇವರಿಗೆ ೨೦೦೩ ರಲ್ಲಿ ಪದ್ಮಭೂಷಣ್ ಮತ್ತು ೨೦೧೧ ರಲ್ಲಿ ಪದ್ಮವಿಭೂಷಣ್ ಪ್ರಶಸ್ತಿ ನೀಡಲಾಯಿತು. ಜೂನ್ ೨೦೧೨ ರಲ್ಲಿ ಇವರು ಭಾರತದ ಸಂಸತ್ತಿನ ಮೇಲ್ಮನೆಯ ರಾಜ್ಯಸಭೆಗೆ ಆರು ವರ್ಷಗಳ ಅವಧಿಗೆ ಅಧ್ಯಕ್ಷೀಯ ನಾಮನಿರ್ದೇಶನವನ್ನು ಪಡೆದರು.[೧][೨][೩]
ಅಯೋಧ್ಯೆಯ ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ವಕೀಲ ಪರಶರನ್, ರಾಮ್ ಲಲ್ಲಾ ವಿರಾಜ್ಮಾನ್ ಪರವಾಗಿ ತೀರ್ಪು ಪಡೆಯಲು ಪ್ರಮುಖ ಪಾತ್ರ ವಹಿಸಿದ್ದಾರೆ.
ತಮಿಳುನಾಡಿನ ಶ್ರೀರಂಗಮ್ ನಲ್ಲಿ ಜನಿಸಿದ ಪರಶರನ್ ಅವರು ವಕೀಲ ಕೇಶವ ಅಯ್ಯಂಗಾರ್ ಅವರ ಪುತ್ರ. ಇವರು ಬಿ.ಎಲ್ ( ಬಿಎ. ಎಲ್ ಎಲ್ ಬಿ ) ಅನ್ನು ಕಲಿಯುತ್ತಿರುವಾಗ, ಇವರಿಗೆ ಶ್ರೀ ನ್ಯಾಯಮೂರ್ತಿ ಸಿ.ವಿ. ಕುಮಾರಸ್ವಾಮಿ ಶಾಸ್ತ್ರಿ ಸಂಸ್ಕೃತ ಪದಕ ಮತ್ತು ಹಿಂದೂ ಕಾನೂನಿನಲ್ಲಿ ನ್ಯಾಯಮೂರ್ತಿ ಶ್ರೀ ವಿ.ಭಶ್ಯಂ ಅಯ್ಯಂಗಾರ್ ಚಿನ್ನದ ಪದಕ ದೊರಕಿತು. ಬಾರ್ ಕೌನ್ಸಿಲ್ ಪರೀಕ್ಷೆಯ ಸಮಯದಲ್ಲಿ ಇವರು ನ್ಯಾಯಮೂರ್ತಿ ಶ್ರೀ ಕೆ.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ ಪದಕ ಪಡೆದರು.
ಪರಶರನ್ ತಮ್ಮ ಕಾನೂನು ಅಭ್ಯಾಸವನ್ನು ೧೯೫೮ ರಲ್ಲಿ ಸುಪ್ರೀಂಕೋರ್ಟ್ ಮುಂದೆ ಪ್ರಾರಂಭಿಸಿದರು.
ಇವರು ೨೦೧೪ ರಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ರಾಜ್ಯಸಭೆಯ ಸದಸ್ಯರಾಗಿ ಸಮರ್ಥಿಸಿಕೊಂಡರು.
ಆರು ದಶಕಗಳವರೆಗೆ ವೃತ್ತಿಜೀವನದಲ್ಲಿ, ಪರಶರನ್ ಈ ಕೆಳಗಿನ ಹೆಗ್ಗುರುತು ಪ್ರಕರಣಗಳಲ್ಲಿ ನೀಡಿದ ಕೊಡುಗೆಗೆ ಹೆಸರುವಾಸಿಯಾಗಿದ್ದಾರೆ:
ಶಬರಿಮಲೆ ಪ್ರಕರಣದಲ್ಲಿ, ಪರಶರನ್ ಅವರು ನಾಯರ್ ಸರ್ವಿಸ್ ಸೊಸೈಟಿಯನ್ನು ಸಮರ್ಥಿಸಿಕೊಂಡರು, ಶಬರಿಮಲೆ ದೇವಸ್ಥಾನದಲ್ಲಿ ಮುಟ್ಟಿನ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸುವ ನಿಷೇಧ ಸರಿಯಾಗಿದೆ. ನೈಶ್ತಿಕ ಬ್ರಹ್ಮಚಾರ್ಯರ ಪರಿಕಲ್ಪನೆಯನ್ನು ವಿವರಿಸಲು ಅವರು ರಾಮಾಯಣದಿಂದ ಪ್ಯಾರಾಗಳನ್ನು ವಾಚಿಸಿದರು, ಅಂದರೆ ದೇವತೆಯ ಬ್ರಹ್ಮಚಾರಿ ಸ್ವಭಾವ ಅಯ್ಯಪ್ಪನ್.[೪]
೯ ನವೆಂಬರ್ ೨೦೧೯ ರಂದು ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ರಾಮ್ ಲಲ್ಲಾ ಪರವಾಗಿ ತೀರ್ಪು ನೀಡಿತು. ಇದನ್ನು ದೇಶದ ಪ್ರತಿಯೊಬ್ಬ ನಾಗರಿಕರು ಸ್ವಾಗತಿಸಿದರು. ದೀರ್ಘಾವಧಿಯ ಭೂ ವಿವಾದವು ಅಂತಿಮವಾಗಿ ಕೊನೆಗೊಂಡಿತು. ಕೆ.ಪರಶರನ್ ಅವರು ಸುನ್ನಿ ವಕ್ಫ್ ಮಂಡಳಿಯ ವಿರುದ್ಧದ ಮೊಕದ್ದಮೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಮಹತ್ವದ ಪಾತ್ರ ವಹಿಸಿದ್ದಾರೆ.
೧೯೪೯ ರಲ್ಲಿ, ಇವರು ಸರೋಜಾ ಅವರನ್ನು ವಿವಾಹವಾದರು ಮತ್ತು ಇವರಿಗೆ ಮೋಹನ್ ಪರಶರನ್, ಬಾಲಾಜಿ ಪರಶರನ್ ಮತ್ತು ಸತೀಶ್ ಪರಶರನ್ ಮತ್ತು ಇಬ್ಬರು ಪುತ್ರಿಯರಿದ್ದಾರೆ.