ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಗಮನಶ್ರಮ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೫೩ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಗಮಕಕ್ರಿಯ ಎಂದು ಹೆಸರಿಸಿದ್ದಾರೆ.[೧][೨]
ಇದು ಒಂಬತ್ತನೆಯ ಬ್ರಹ್ಮ ಚಕ್ರದ ಐದನೆಯ ರಾಗ.ಇದರ ನೆನೆಪಿನ ಹೆಸರು ಬ್ರಹ್ಮ-ಮಾ ನೆನಪಿನ ನುಡಿಕಟ್ಟು:ಸ ರ ಗು ಮಿ ಪ ಧಿ ನು [೧] ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೩ ಮ೨ ಪ ದ೨ ನಿ೩ ಸ
ಅವರೋಹಣ ಸ ನಿ೩ ದ೨ ಪ ಮ೨ ಗ೩ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ 'ಷಡ್ಜ, ಶುದ್ಧ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಚತುಶೃತಿ ಧೈವತಮತ್ತು ಕಾಕಲಿ ನಿಷಾಧ.
ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು, ಹಂಸನಂದಿ ಮತ್ತು ಪೂರ್ವಿ ಕಲ್ಯಾಣಿ ಹೆಚ್ಚು ಜನಪ್ರಿಯವಾಗಿದೆ.
ಕೆಲವು ಜನಪ್ರಿಯ ಕೃತಿಗಳು ಈ ಕೆಳಗಿನಂತಿವೆ. ಮುತ್ತುಸ್ವಾಮಿ ದೀಕ್ಷಿತರುರಚಿಸಿದ ಮೀನಾಕ್ಷಿ ಮೇಮುದಮ್ ಮತ್ತು "ಏಕಾಮ್ರನಾಥ ಭಜೇಹಮ್" ಎರಡು ವ್ಯಾಪಕವಾಗಿ ಬಳಕೆಯಲ್ಲಿರುವ ರಚನೆಗಳು.
ಗ್ರಹಭೇದಮ್ ಸೂತ್ರವನ್ನು ಗಮನಶ್ರಮ ರಾಗಕ್ಕೆ ಅನ್ವಯಿಸಿದಾಗ ಎರಡು ರಾಗಗಳು ದೊರೆಯುತ್ತದೆ.ಅವುಗಳು ಝಂಕಾರವರ್ಧಿನಿ ಮತ್ತು ರತ್ನಾಂಗಿ