ಡಾ. ಗೌರೀಶ ಕಾಯ್ಕಿಣಿ ಜನನ (೧೯೧೨-೦೯-೧೨ ) ೧೨ ಸೆಪ್ಟೆಂಬರ್ ೧೯೧೨ಗೋಕರ್ಣ , ಉತ್ತರ ಕನ್ನಡ ಜಿಲ್ಲೆಮರಣ Error: Need valid death date (first date): year, month, day ಗೋಕರ್ಣ , ಉತ್ತರ ಕನ್ನಡ ಜಿಲ್ಲೆಕಾವ್ಯನಾಮ ವೈಶ್ವಾನರ ಗೌರೀಶಂಕರ ಅಡುಗೆ ಭಟ್ಟ ಜಿವಿಕೆ ವೃತ್ತಿ ವಿಚಾರವಾದಿ ಬರಹಗಾರ ಶಿಕ್ಷಕ (೧೯೩೭-೧೭೬) ಪತ್ರಿಕಾ ಪ್ರಧಾನ ಸಂಪಾದಕ ಭಾಷೆ ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ ೧ನೇ ನಂಬರ್ ಶಾಲೆ, ಗೋಕರ್ಣ ಗಿಬ್ಬ ಹೈಸ್ಕೂಲ್, ಕುಮಟಾ ಕರ್ನಾಟಕ ಕಾಲೇಜು,ಧಾರವಾಡ ಪ್ರಕಾರ/ಶೈಲಿ ನಾಟಕ ವಿಮರ್ಶೆ ಕಾವ್ಯ ಗದ್ಯ ಅನುವಾದ ಪ್ರಮುಖ ಕೆಲಸ(ಗಳು) ನವಮಾನವತಾವಾದ ನಾಸ್ತಿಕ ಮತ್ತು ದೇವರು ಸತ್ಯಾರ್ಥಿ ಪ್ರಮುಖ ಪ್ರಶಸ್ತಿ(ಗಳು) ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಾಳ ಸಂಗಾತಿ ಶಾಂತಾಬಾಯಿ ರಾಮಚಂದ್ರ ವೆಂಟೇಕರ್, ತದಡಿ, ಗೋಕರ್ಣ (ಮದುವೆ: ೧೯೫೩) ಮಕ್ಕಳು ಜಯಂತ್ ಕಾಯ್ಕಿಣಿ
ಶ್ರೀರಂಗ (ಆರ್. ವಿ. ಜಹಗೀರದಾರ), ಕಾರ್ಲ್ಮಾರ್ಕ್ಸ್
ತಂದೆ ವಿಠಲರಾವ್ ವೆಂಕಟರಾವ್ ಕಾಯ್ಕಿಣಿ (ಮರಣ: ೧೯೧೨) ತಾಯಿ ಸೀತಾಬಾಯಿ ಕುಲಕರ್ಣಿ(ಬಂಕಿಕೊಡ್ಲು, ಗೋಕರ್ಣ) (ಮರಣ: ೧೯೧೯)
ಡಾ. ಗೌರೀಶ ಕಾಯ್ಕಿಣಿ ಯವರು ೧೯೧೨ ಸಪ್ಟಂಬರ ೧೨ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ದಲ್ಲಿ ಜನಿಸಿದರು.[ ೧] [ ೨]
ಗೌರೀಶ ಕಾಯ್ಕಿಣಿಯವರ ಪ್ರಾಥಮಿಕ ಶಿಕ್ಷಣ ಗೋಕರ್ಣದಲ್ಲಿಯೇ ನಡೆಯಿತು. ಮೆಟ್ರಿಕ್ಯುಲೇಶನ್ ಪರಿಕ್ಷೆಯನ್ನು ಕುಮಟಾದ ಗಿಬ್ಬ ಹಾಯ್ಸ್ಕೂಲಿನಿಂದ ಉತ್ತೀರ್ಣರಾಗಿ, ಧಾರವಾಡ ದ ಕರ್ನಾಟಕ ಕಾಲೇಜಿನಲ್ಲಿ ಕಲಾವಿಭಾಗದಲ್ಲಿ ಪ್ರಥಮ ವರ್ಷವನ್ನು ಅಭ್ಯಸಿಸಿದರು. ಆಬಳಿಕ ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತಕ್ಕೆ ಸರ್ವಪ್ರಥಮರಾಗಿ ತೇರ್ಗಡೆಯಾದರು. ಗೌರೀಶ ಕಾಯ್ಕಿಣಿಯವರು ಹಿಂದಿ ಯಲ್ಲಿ ವಿಶಾರದರೂ ಆಗಿದ್ದಾರೆ. ವಿಜ್ಞಾನದ ಮತ್ತು ವಿಜ್ಞಾನಿಗಳ ಬಗ್ಗೆ ಅಪಾರ ಗೌರವವಿದ್ದ ಇವರು ಮುಂದಿನ ತತ್ವಜ್ಞಾನವೆಂದರೆ ವಿಜ್ಞಾನ ಎಂದು ಹೇಳುತ್ತಿದ್ದರು. ಪರಮ ನಾಸ್ತಿಕರಾದ ಇವರು ವಿಜ್ಞಾನಕ್ಕೆ ನಿಲುಕದ್ದನ್ನೆಲ್ಲ ಖಂಡ - ತುಂಡವಾಗಿ ನಿರಾಕರಿಸುತ್ತಿದ್ದರು.[ ೩]
ಗೌರೀಶ ಕಾಯ್ಕಿಣಿಯವರು ೧೯೩೭ ರಲ್ಲಿ ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿ ೧೯೭೬ ರಲ್ಲಿ ನಿವೃತ್ತರಾದರು.[ ೧] ಇದೇ ಕಾರಣದಿಂದ, 'ಗೌರೀಶ್ ಮಾಸ್ತರರು' ಎಂದೇ ಕರೆಯಲ್ಪಡುತ್ತಿದ್ದರು.
ಗೌರೀಶ ಕಾಯ್ಕಿಣಿಯವರ ವಿವಾಹ ೧೯೫೩ ರಲ್ಲಿ ಶಾಂತಾ ಅವರ ಜೊತೆಗೆ ನೆರವೇರಿತು.[ ೧] ಇವರದು ಅಂತರ್ಜಾತೀಯ ವಿವಾಹ. ೧೯೫೪ ರಲ್ಲಿ ಇವರ ಮಗ, ಈಗ ಪ್ರಸಿದ್ಧ ಸಾಹಿತಿಯಾಗಿರುವ ಜಯಂತ ಜನಿಸಿದರು.
ಗೌರೀಶ ಕಾಯ್ಕಿಣಿಯವರ ಲೇಖನ ವ್ಯವಸಾಯ ೧೯೩೦ ರಿಂದಲೇ ಪ್ರಾರಂಭವಾಯಿತು. ಕನ್ನಡ ಹಾಗು ಮರಾಠಿ ಭಕ್ತಿಗೀತೆಗಳ ಸಂಕಲನವಾದ "ಶಾಂಡಿಲ್ಯ ಪ್ರೇಮಸುಧಾ" ಇವರ ಮೊದಲ ಕವನಸಂಕಲನ.
ಶಾಂಡಿಲ್ಯ ಪ್ರೇಮಸುಧಾ
ಗಂಡು ಹೆಣ್ಣು
ಪ್ರೀತಿ
ಒಲವಿನ ಒಗಟು
ಕ್ರೌಂಚಧ್ವನಿ (ಗೀತರೂಪಕಗಳು)
ಕರ್ಣಾಮೃತ
ಆಕಾಶ ನಾಟಕಗಳು
ಮೇನಕಾ
ತಾರಾ
ದೀಪಾವಳಿ
ನರಕ-ಚತುರ್ದಶಿ
ನೃಸಿಂಹಾವತಾರ
ಅಂಬಾ (ಕೊಂಕಣಿ)
ಶಬರಿ
ಗೋಪಿಕೃಷ್ಣ
ವಿಷಯ ಪತ್ರಲೇಖನ
ಧ್ರುವಕುಮಾರ (ಕೊಂಕಣಿ)
ದೇವತಾತ್ಮ (ಹಿಮಾಲಯ ಪ್ರವಾಸವರ್ಣನೆ)
ಪಶ್ಚಿಮದ ಪ್ರತಿಭೆ -ಭಾಗ-೧
ಪಶ್ಚಿಮದ ಪ್ರತಿಭೆ -ಭಾಗ-೨,
ಸತ್ಯಾರ್ಥಿ
ಭಾರತೀಯ ವಿಜ್ಞಾನಿಗಳು, ಭಾಗ-೧
ಭಾರತೀಯ ವಿಜ್ಞಾನಿಗಳು, ಭಾಗ-೨
ಕೇಶವಸುತ
ನಾನಾಲಾಲ
ಶ್ಯಾಮರಾವ ವಿಠ್ಠಲ ಕಾಯ್ಕಿಣಿ
ಥಾಮಸ್ ಎಡಿಸನ್
ಪಾಂಡೇಶ್ವರ ಗಣಪತಿರಾವ
ಗ್ರೀಕ ದಾರ್ಶನಿಕರು
ಗೋಕರ್ಣದ ಕಥೆ (ಪರಿಚಯ )
ಕರ್ನಾಟಕದ ಸಿಂಡ್ರೆಲ್ಲಾ (ಉತ್ತರ ಕನ್ನಡ ದ ಜನ ಜಾತಿ ಪರಿಚಯ)
ಮನೋವಿಜ್ಞಾನದ ರೂಪರೇಖೆಗಳು
ಮಾರ್ಕ್ಸವಾದ
ಬಾಳಿನ ಗುಟ್ಟು
ವಿಚಾರವಾದ
ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ
ಸಂಪ್ರದಾಯ ಮತ್ತು ಸಣ್ಣ ಕುಟುಂಬ
ಕಟಾಕ್ಷ (ವೈಚಾರಿಕ ಲೇಖನಗಳ ಸಂಕಲನ)
ನವಮಾನವತಾವಾದ
ನಾಸ್ತಿಕನು ಮತ್ತು ದೇವರು
ಆರ್ಕೆಸ್ಟ್ರಾ ಮತ್ತು ತಂಬೂರಿ
ಲೋಕಾಯತ (ಚಾರ್ವಾಕ ದರ್ಶನ)
ಭಾರತೀಯ ತತ್ವಜ್ಞಾನದ ಇತಿಹಾಸ (ಮೂಲ:ಮರಾಠಿ )
ಪಂಜಾಬಿ ಕತೆಗಳು
ಬಿಳಿಯ ಕೊಕ್ಕರೆ
ಮಣ್ಣಿನ ಮನುಷ್ಯ
ಮಲೆನಾಡಿಗರು
ಬರ್ಲಿನ್ ಬಂದಿತು ಗಂಗೆಯ ತಡಿಗೆ
ವ್ಯಾಸಪರ್ವ (ಮೂಲ ಮರಾಠಿ :ದುರ್ಗಾ ಭಾಗವತ)
ಶ್ಯಾಮರಾವ ವಿಠ್ಠಲ ಕಾಯ್ಕಿಣಿ
ನ್ಯಾಷನಲ್ ಇಂಟಗ್ರೇಷನ್ ಇನ್ ಆಕ್ಶನ್
ಸರ್ ಎಂ. ವಿಶ್ವೇಶ್ವರಯ್ಯ
ಸಮಗ್ರ ಸಂಪುಟ ಭಾಗ-೧
ಸಮಗ್ರ ಸಂಪುಟ ಭಾಗ-೨
ಸಮಗ್ರ ಸಂಪುಟ ಭಾಗ-೩
ಸಮಗ್ರ ಸಂಪುಟ ಭಾಗ-೪
ಸಮಗ್ರ ಸಂಪುಟ ಭಾಗ-೫
ಸಮಗ್ರ ಸಂಪುಟ ಭಾಗ-೬
ಸಮಗ್ರ ಸಂಪುಟ ಭಾಗ-೭
ಸಮಗ್ರ ಸಂಪುಟ ಭಾಗ-೮
ಇವಲ್ಲದೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಸಾವಿರಾರು ಬಿಡಿ ಬರಹಗಳು ಹಾಗು ಅಂಕಣಗಳು ಪ್ರಕಟವಾಗಿವೆ.
ಗೌರೀಶ ಕಾಯ್ಕಿಣಿಯವರು ಅನೇಕ ಸಾಮಾಜಿಕ ಹಾಗು ಸಾಂಸ್ಕೃತಿಕ ಹೊಣೆಗಾರಿಕೆಗಳನ್ನು ಹೊತ್ತುಕೊಂಡಿದ್ದರು:
ಪ್ರೊಗ್ರೆಸಿವ್ ಆಫ಼್ ಮೈಸೂರು ಪತ್ರಿಕಾ ಮಂಡಳಿ ಸದಸ್ಯ (೧೯೬೪)
ಕರ್ನಾಟಕ ವಿಶ್ವವಿದ್ಯಾಲಯ ದ ವ್ಯಾಸಂಗ ವಿಸ್ತರಣ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿದ್ದರು (೧೯೬೫ - ೧೯೭೦)
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ (೧೯೭೩ - ೧೯೮೩)
ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ (೧೯೭೩)
ಧಾರವಾಡ ದ ಆಕಾಶವಾಣಿ ನಿಲಯದ ಸಲಹಾ ಸಮಿತಿ ಸದಸ್ಯರಾಗಿದ್ದರು (೧೯೭೪-೭೫)
ಉತ್ತರ ಕನ್ನಡ ಜಿಲ್ಲಾ ಲೇಖಕ, ಪ್ರಕಾಶಕ ಹಾಗು ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದರು
ಗೌರೀಶ ಕಾಯ್ಕಿಣಿಯವರು ನಾಗರಿಕ (ಕಾರವಾರ) ಹಾಗು ಬೆಳಕು (ಧಾರವಾಡ) ಪತ್ರಿಕೆಗಳ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು
ವಾರದ ಉಪ್ಪಿನಕಾಯಿ (ಕಾವ್ಯನಾಮ: 'ಅಡಿಗೆ ಭಟ್ಟ') - ಜನಸೇವಕ ಪತ್ರಿಕೆ(ಅಂಕೋಲಾ)
ವಾರದ ವಿಶ್ವ (ಕಾವ್ಯನಾಮ: 'ವೈಶ್ವಾನರ') - ಜನಸೇವಕ ಪತ್ರಿಕೆ(ಅಂಕೋಲಾ)
ಸಾಹಿತ್ಯ ದರ್ಪಣ (ಕಾವ್ಯನಾಮ: 'ಜಿ. ವಿ. ಕೆ') - ಜನಸೇವಕ ಪತ್ರಿಕೆ(ಅಂಕೋಲಾ)
'ಜನಪ್ರಗತಿ' ಸಾಪ್ತಾಹಿಕದಲ್ಲಿ 'ವೈಶ್ವಾನರ' ಹೆಸರಿನಲ್ಲಿ
'ಸಮನ್ವಯ'ದಲ್ಲಿ(ಸಿರ್ಸಿ) 'ಗೌರೀಶಂಕರ' ಹೆಸರಿನಲ್ಲಿ
ಕಂಡದ್ದು ಆಡದ್ದು - 'ಕರಾವಳಿ ಗ್ರಾಮ ವಿಕಾಸ' (ಹೊನ್ನಾವರ)
ನನಗೆ ನೆನಪಾದಂತೆ - ಕಸ್ತೂರಿ ಮಾಸಿಕ
ಹೊಂಗಿರಣ - ಮಲ್ಲಿಗೆ ಪತ್ರಿಕೆ (೧೯೮೧-೧೯೮೩)
ಮಿಂಚು ಗೊಂಚಲು - ತರಂಗ ವಾರಪತ್ರಿಕೆ
ಗೌರೀಶ ಕಾಯ್ಕಿಣಿಯವರಿಗೆ ಸಂದ ಪ್ರಶಸ್ತಿಗಳು ಅನೇಕ:
ಗೌರೀಶ ಕಾಯ್ಕಿಣಿಯವರು, ೯೦ರ ವಯಸ್ಸಿನಲ್ಲಿ, ೧೪ ನವೆಂಬರ ೨೦೦೨ ರಂದು ಗೋಕರ್ಣದಲ್ಲಿ ನಿಧನರಾದರು.[ ೧] [ ೨]