ಚಿಟ್ಟಾಣಿ ರಾಮಚಂದ್ರ ಹೆಗಡೆ | |
---|---|
ಚಿಟ್ಟಾಣಿ ರಾಮಚಂದ್ರ ಹೆಗಡೆ | |
ಜನನ | ಹೊನ್ನಾವರ ,ಉತ್ತರಕನ್ನಡ,ಕರ್ನಾಟಕ. | ೧ ಜನವರಿ ೧೯೩೩
ಮರಣ | October 3, 2017 | (aged 84)
ರಾಷ್ಟ್ರೀಯತೆ | ಭಾರತ |
ಇತರೆ ಹೆಸರು | ಚಿಟ್ಟಾಣಿ |
ವೃತ್ತಿ | ಯಕ್ಷಗಾನ ಕಲಾವಿದ |
ಸಕ್ರಿಯ ವರ್ಷಗಳು | 1965–2017 |
ಗಮನಾರ್ಹ ಕೆಲಸಗಳು | ಕೌರವ, ದುಷ್ಟಬುದ್ಧಿ, ಭಸ್ಮಾಸುರ ಪಾತ್ರಗಳು ಯಕ್ಷಗಾನದಲ್ಲಿ |
Title | ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಕಲಾವಿದ |
ಸಂಗಾತಿ | ಸುಶೀಲಾ ಹೆಗಡೆ |
ಪ್ರಶಸ್ತಿಗಳು | ಪದ್ಮಶ್ರೀ (2012),ರಾಜ್ಯೋತ್ಸವ ಪ್ರಶಸ್ತಿ(1991), |
Honours | ಪದ್ಮಶ್ರೀ ಪ್ರಶಸ್ತಿ |
ಚಿಟ್ಟಾಣಿ ರಾಮಚಂದ್ರ ಹೆಗಡೆ (೧೯೩೩ ಜನವರಿ ೧ - ೨೦೧೭ ಅಕ್ಟೋಬರ್ ೦೩) ಯಕ್ಷಗಾನ ಕಲಾವಿದರಾಗಿದ್ದರು. ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.[೧]
ಜನವರಿ ೧, ೧೯೩೩ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಿಟ್ಟಾಣಿಯಲ್ಲಿ ಜನಿಸಿದ್ದ ಅವರು, ೨ನೇ ತರಗತಿಗೆ ಶಾಲೆ ಬಿಟ್ಟು, ೭ನೇ ವರ್ಷದಲ್ಲಿಯೇ ಯಕ್ಷಗಾನ ರಂಗ ಪ್ರವೇಶಿಸಿದ್ದರು. ಬಡಗುತಿಟ್ಟಿನ ಶೈಲಿಯ ಪಾತ್ರಗಳನ್ನು ಹೆಚ್ಚಾಗಿ ನಿರ್ವಹಿಸುತ್ತಿದ್ದರು. ೧೪ ವರ್ಷಕ್ಕೆ ಯಕ್ಷಗಾನದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. [೨]
ಕೌರವ, ದುಷ್ಟಬುದ್ಧಿ, ಭಸ್ಮಾಸುರ ಸೇರಿದಂತೆ ವಿವಿಧ ಪ್ರಮುಖ ಪಾತ್ರಗಳಲ್ಲಿ, ಅದರಲ್ಲಿಯೂ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ವಿಶಿಷ್ಟ ನರ್ತನ, ಲಯಗಾರಿಕೆ, ಅಭಿನಯ ಕೌಶಲಗಳಿಂದ ಅವರು ಪರಿಚಿತರಾಗಿದ್ದರು. ಬಾಳೆಗದ್ದೆ ರಾಮಕೃಷ್ಣ ಭಟ್ಟರ ಶಿಷ್ಯರಾಗಿದ್ದ ಇವರು, ಭಟ್ಟರ ನಿರ್ದೇಶನದಲ್ಲಿ 'ಕೃಷ್ಣ ಪಾರಿಜಾತ' ಪ್ರಸಂಗಕ್ಕೆ ಅಗ್ನಿಪಾತ್ರ ಮಾಡಿದ ಬಳಿಕ ಯಕ್ಷಗಾನದಲ್ಲಿ ಪರಿಚಿತರಾಗಿದ್ದರು.
೮೪ನೆ ವಯಸ್ಸಿನಲ್ಲಿ ನಿಧನರಾದರು.