ಕಾಲಮಾನ | Medieval philosophy |
---|---|
ಪ್ರದೇಶ | ಭಾರತೀಯ ತತ್ವಶಾಸ್ತ್ರ |
ಪರಂಪರೆ | ವೈಷ್ಣವ ಸಂಪ್ರದಾಯದ ನಿಂಬಾರ್ಕ ಶಾಖೆ |
ನಿಂಬಾರ್ಕ ವೈಷ್ಣವ ದೇವತಾಶಾಸ್ತ್ರವಾದ ದ್ವೈತಾದ್ವೈತವನ್ನು (ಏಕತ್ವದಲ್ಲಿ ಉಭಯತ್ವ) ಪ್ರಚಾರಮಾಡಿದ್ದಕ್ಕಾಗಿ ಪರಿಚಿತನಾಗಿದ್ದಾನೆ. ಇದನ್ನು ಭೀಡಅಭೀಡ ತತ್ವಶಾಸ್ತ್ರಯಂದೂ ಕರೆಯುತ್ತಾರೆ. ಪ್ರೊ. ರೋಮಾ ಬೋಸ್ ನೇತೃತ್ವದ ವಿದ್ವಾಂಸರ ಪ್ರಕಾರ, ಶ್ರೀ ನಿಂಬಾರ್ಕಾಚಾರ್ಯನು ಮಧ್ವಮುಖಮರ್ದನ ಕೃತಿಯ ಲೇಖಕನೆಂಬ ಊಹೆಯ ಮೇಲೆ, ಅವನು ೧೩ನೇ ಶತಮಾನದಲ್ಲಿ ಜೀವಿಸಿದ್ದನು. ಆದರೆ ನಿಂಬಾರ್ಕ ಸಂಪ್ರದಾಯದ ಪ್ರಕಾರ, ಶ್ರೀ ನಿಂಬಾರ್ಕಾಚಾರ್ಯನು ೫೦೦೦ ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದನು, ಕ್ರಿ.ಪೂ. ೩೦೯೬ರಲ್ಲಿ, ಅರ್ಜುನನ ಮೊಮ್ಮಗ ಸಿಂಹಾಸನದ ಮೇಲಿದ್ದಾಗ.