ಪಿಂಗಲಿ ವೆಂಕಯ್ಯ | |
---|---|
![]() | |
ಜನನ | ಪಿಂಗಲಿ ವೆಂಕಯ್ಯ 2 August 1876 ಭಲ್ತಾಪೆನ್ಮುರುರು ಗ್ರಾಮ, ಮೊವ್ವಾ ಮಂಡಲಮ್,ಕೃಷ್ಣ ಜಿಲ್ಲೆ, ಆಂಧ್ರ ಪ್ರದೇಶ. |
ಸಾವು | 4 July 1963 ಭರತ |
ರಾಷ್ಟ್ರೀಯತೆ | ಭಾರತೀಯ |
Known for | ಭಾರತೀಯ ರಾಷ್ಟ್ರೀಯ ಧ್ವಜದ ವಿನ್ಯಾಸ |
ಪಿಂಗಳಿ ವೆಂಕಯ್ಯ ಅವರು ಭಾರತದ ಸ್ವಾತಂತ್ರ ಹೋರಾಟಗಾಗರಲ್ಲದೆ ಭಾರತದೇಶದ ಧ್ವಜವನ್ನು ಸ್ಥೂಲಕಲ್ಪಿಸಿದರು. ಇವರನ್ನು ಪತ್ತಿ ವೆಂಕಯ್ಯ ಅಂತ ಕರೆಯುತ್ತಿದ್ದರು. ಇವರು ೨ನೇ ಆಗಸ್ಟ್, ೧೮೭೬ರಲ್ಲಿ, ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲ್ಲೂಕಿನ ಭಟ್ಲಪೆನ್ನುಮಾರು ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಹನುಮಂತರಾಯುರು, ಇವರ ತಾಯಿಯ ಹೆಸರು ವೆಂಕಟರತ್ನಮ್ಮ. ಪ್ರಾಧಮಿಕ ವಿದ್ಯಾಭ್ಯಾಸವನ್ನು ಚಲ್ಲಪಲ್ಲಿಯಲ್ಲಿ ಮತ್ತು ಮಚಿಲೀಪಟ್ಟನಂಮ್ಮಿನ ಹಿಂದೂ ಶಾಲೆಯಲ್ಲಿ ಮುಗಿಸಿದನಂತರ ಇವರು ಹಿಚ್ಚಿನ ಶಿಕ್ಷಣಕಾಗಿ ಕೊಲೊಂಬೊಗೆ ಹೋದರು. ಭಾರತಕ್ಕೆ ಹಿಂದಿರುಗಿದನಂತರ ಇವರು ರೈಲ್ವೇ ಸಿಬ್ಬಂದಿಯ ಉದ್ಯೋಗ, ಮತ್ತು ಸರ್ಕಾರಿ ಜೀತಗಾರರಾಗಿ ಬಳ್ಳಾರಿಯಲ್ಲಿ ಕೆಲಸ ಮಾಡಿದರು. ದೇಶಭಕ್ತಿಯನ್ನು ನರನರಗಳಲ್ಲು ತುಂಬಿಕೊಂಡಿದ್ದ ಇವರಿಗೆ ಒಂದು ಶಾಶ್ವತ ಕೆಲಸದಲ್ಲಿ ಒಳಗೊಂಡಿರುವುದಕ್ಕೆ ಇಷ್ಟವಾಗಿರಲಿಲ್ಲ, ಸತ್ಯಾನ್ವೇಷಿಯಾಗಿದ್ದ ಇವರು ಲಾಹೋರಿನ ಆಂಗ್ಲೂ-ವೈದಿಕ ಕಲಾಶಾಲೆಯಲ್ಲಿ ಇತಿಹಾಸ, ಸಂಸ್ಕೃತ ಮುಂತಾದ ವಿಷಯಗಳ ಬಗ್ಗೆ ಶೋಧನೆ ಮಾಡಿದರು. ಭೂವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯುಳ್ಳಾವರಾಗಿದ್ದರಿವರು ಅದೇ ವಿಷಯದಲ್ಲಿ ಪದವೀಕೃತರಾದರು.