ಪ್ಯಾರಿಸ್ ಪ್ರಣಯ | |
---|---|
ನಿರ್ದೇಶನ | ನಾಗತಿಹಳ್ಳಿ ಚಂದ್ರಶೇಖರ್ |
ನಿರ್ಮಾಪಕ | ಅಮರನಾಥ್ ಗೌಡ ಹರಿನಾಥ್ ಪೊಲಿಚರ್ಲ ತುಮಕೂರು ದಯಾನಂದ್ ವಿದ್ಯಾಶಂಕರ್ |
ಲೇಖಕ | ನಾಗತಿಹಳ್ಳಿ ಚಂದ್ರಶೇಖರ್ |
ಪಾತ್ರವರ್ಗ | ರಘು ಮುಖರ್ಜಿ ಮಿನಲ್ ಪಾಟಿಲ್ ತಾರಾ |
ಸಂಗೀತ | ಸ್ಟೀಫನ್ ಪ್ರಯೋಗ್ |
ಛಾಯಾಗ್ರಹಣ | ಕೃಷ್ಣ ಕುಮಾರ್ |
ಸಂಕಲನ | ಬಸವರಾಜ್ ಅರಸ್ |
ಸ್ಟುಡಿಯೋ | ಟ್ವೆಂಟಿ ಫ಼ರ್ಸ್ಟ್ ಸೆಂಚುರಿ ಲಯನ್ಸ್ ಸಿನಮಾ |
ಬಿಡುಗಡೆಯಾಗಿದ್ದು |
|
ಅವಧಿ | 151 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಪ್ಯಾರಿಸ್ ಪ್ರಣಯ ೨೦೦೩ರ ಕನ್ನಡ ಪ್ರಣಯಪ್ರಧಾನ ನಾಟಕೀಯ ಚಲನಚಿತ್ರವಾಗಿದೆ. ಇದನ್ನು ನಾಗತಿಹಳ್ಳಿ ಚಂದ್ರಶೇಖರ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಹೊಸಬರಾದ ರಘು ಮುಖರ್ಜಿ ಮತ್ತು ಮಿನಲ್ ಪಾಟಿಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರೆ ರಾಜೇಶ್, ತಾರ ಮತ್ತು ಶರತ್ ಲೋಹಿತಾಶ್ವ ಇತರ ಗಮನಸೆಳೆಯುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.[೧] ಟ್ವೆಂಟಿ ಫ಼ಸ್ಟ್ ಸೆಂಚುರಿ ಲಯನ್ಸ್ ಸಿನಮಾ ಚಿತ್ರವನ್ನು ನಿರ್ಮಿಸಿತು.
ಚಿತ್ರವು ವಿಮರ್ಶಕರಿಂದ ಸಾಮಾನ್ಯವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದು ೧೮ ಎಪ್ರಿಲ್ ೨೦೦೩ರಂದು ಬಿಡುಗಡೆಯಾಯಿತು.[೨] ಪ್ಯಾರಿಸ್, ರೋಮ್, ದಕ್ಷಿಣ ಫ಼್ರಾನ್ಸ್ ಮತ್ತು ಸ್ಪೇನ್ನಂತಹ ಅನೇಕ ಐರೋಪ್ಯ ದೇಶಗಳಲ್ಲಿ ವ್ಯಾಪಕವಾಗಿ ಚಿತ್ರೀಕರಣವಾದ ಈ ಚಿತ್ರವು ಡೆಟ್ರಾಯಿಟ್ನಲ್ಲಿ ನಡೆದ ವಾರ್ಷಿಕ "ವಿಶ್ವ ಕನ್ನಡ ಸಮ್ಮೇಳನ - ೨೦೦೨"ರ ದೃಶ್ಯವನ್ನು ಒಳಗೊಂಡಿದೆ.[೩]. ಇದು ೨೦೦೩ರ ವರ್ಷಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಗೆದ್ದಿತು.
ಚಿತ್ರದ ಸಂಗೀತವನ್ನು ಸ್ಟೀಫನ್ ಪ್ರಯೋಗ್ ಸಂಯೋಜಿಸಿದ್ದಾರೆ.[೪] ಧ್ವನಿವಾಹಿನಿಯು ಮುಖ್ಯವಾಗಿ ಭಾರತೀಯ ಹಾಗೂ ಪಾಶ್ಚಾತ್ಯ ಶೈಲಿಗಳ ಮಿಶ್ರಣ ಸಂಗೀತದ ಮೇಲೆ ಕೇಂದ್ರೀಕರಿಸಿತು. ಹಾಡುಗಳಿಗೆ ಜನಪ್ರಿಯ ಬಾಲಿವುಡ್ ಹಿನ್ನೆಲೆ ಗಾಯಕರಾದ ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಧ್ವನಿ ನೀಡಿದರು. ಇದು ಕನ್ನಡ ಚಿತ್ರರಂಗದಲ್ಲಿ ಘೋಶಾಲ್ರ ಪ್ರಥಮ ಪ್ರವೇಶವಾಗಿತ್ತು. ಧ್ವನಿವಾಹಿನಿಯು ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಮತ್ತು ಮೆಚ್ಚುಗೆ ಪಡೆದ ಕವಿ ಜಿ.ಎಸ್.ಶಿವರುದ್ರಪ್ಪ ಬರೆದ ಶುದ್ಧ ಕನ್ನಡ ಸುಗಮ ಸಂಗೀತ ಹಾಡು "ಎದೆ ತುಂಬಿ ಹಾಡಿದೆನು"ವನ್ನು ಒಳಗೊಂಡಿತ್ತು. ಇನ್ನೊಂದೆಡೆ, ಇದು ಲುಡ್ವಿಗ್ ವಾನ್ ಬೆಟ್ಹೋವನ್ ಮತ್ತು ವುಲ್ಫ್ಗ್ಯಾಂಗ್ ಅಮೆಡಿಯುಸ್ ಮೊಟ್ಜಾರ್ಟ್ರಂತಹ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ದಿಗ್ಗಜರು ನುಡಿಸಿದ ಸಂಗೀತ ತುಣುಕುಗಳನ್ನು ಹೊಂದಿತ್ತು.[೫] "ಕೃಷ್ಣ ನೀ ಬೇಗನೇ ಬಾರೊ" ಹಾಡು ಮೂಲತಃ ಸಂತ ವ್ಯಾಸತೀರ್ಥರು ಬರೆದು ಯಮುನಾ ಕಲ್ಯಾಣಿ ರಾಗದಲ್ಲಿ ಬರೆದು ಸಂಯೋಜಿಸಿದ ಇದೇ ಹೆಸರಿನ ಪ್ರಸಿದ್ಧ ಶಾಸ್ತ್ರೀಯ ಹಾಡಿನ ರೂಪಾಂತರವಾಗಿದೆ.