ಮಂಜಮ್ಮ ಜೋಗತಿ (ಜನನ ಮಂಜುನಾಥ ಶೆಟ್ಟಿ ; 20 ಮೇ 1957), ಉತ್ತರ ಕರ್ನಾಟಕದ ಜಾನಪದ ನೃತ್ಯ ರೂಪವಾದ ಜೋಗತಿ ನೃತ್ಯದ ಭಾರತೀಯ ಕನ್ನಡ ರಂಗಭೂಮಿ ನಟಿ, ಗಾಯಕಿ ಮತ್ತು ನರ್ತಕಿ. 2019 ರಲ್ಲಿ, ಅವರು ಜನಪದ ಕಲೆಗಳ ರಾಜ್ಯದ ಉನ್ನತ ಸಂಸ್ಥೆಯಾದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಟ್ರಾನ್ಸ್ ವುಮನ್ ಆಗಿದ್ದಾರೆ.[೧][೨][೩] ಜನವರಿ 2021 ರಲ್ಲಿ , ಭಾರತ ಸರ್ಕಾರವು ಜನಪದ ಕಲಾಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ.[೪][೫]
ಜೋಗತಿಯವರು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಕಲ್ಲುಕಂಬ ಗ್ರಾಮದಲ್ಲಿ ಮಂಜುನಾಥ ಶೆಟ್ಟಿಯಾಗಿ ಹನುಮಂತಯ್ಯ ಮತ್ತು ಜಯಲಕ್ಷ್ಮಿ ದಂಪತಿಗಳಿಗೆ ಜನಿಸಿದರು. [೬] ಆಕೆ ಧಾರ್ಮಿಕ ವಿಧಿವಿಧಾನದ ಕಾರಣದಿಂದ ಹಿಂದೂ ದೇವತೆಯಾದ ಜೋಗಪ್ಪನನ್ನು ಮದುವೆಯಾಗಿದ್ದಳು ಮತ್ತು ಮನೆಗೆ ಮರಳಲು ಅವಕಾಶವಿರಲಿಲ್ಲ. [೭] ಆಗ ಅವಳನ್ನು ಮಂಜಮ್ಮ ಜೋಗತಿ ಎಂದು ಕರೆಯಲಾಗುತ್ತಿತ್ತು. 15 ವರ್ಷ ವಯಸ್ಸಿನ ತನ್ನ ಮನೆಯನ್ನು ತೊರೆದ ನಂತರ, ಅವಳು ತನ್ನನ್ನು ಮಹಿಳೆ ಎಂದು ಗುರುತಿಸಿಕೊಂಡಳು. 10ನೇ ತರಗತಿವರೆಗೆ ಮಾತ್ರ ಶಿಕ್ಷಣ ಮುಗಿಸಿರುವ ಆಕೆ ಭಿಕ್ಷಾಟನೆಗೆ ಮುಂದಾಗಿದ್ದಳು. ಈ ವೇಳೆ ಆಕೆ ಲೈಂಗಿಕ ಕಿರುಕುಳಕ್ಕೆ ಒಳಗಾದರು. ನಂತರ, ಒಂದು ತಂದೆ ಮತ್ತು ಮಗ ಜೋಡಿಯು ಅವಳನ್ನು ನೃತ್ಯಕ್ಕೆ ಪರಿಚಯಿಸಿ ನೃತ್ಯ ಶಿಕ್ಷಕಿ ಕಾಳವ್ವ ಜೋಗತಿ ಅವರ ಬಳಿಗೆ ಕರೆದೊಯ್ದಿತು, ಅಲ್ಲಿ ಅವರು ಜೋಗತಿ ನೃತ್ಯವನ್ನು ಕಲಿತರು. [೮]
ಮಂಜಮ್ಮ ಕಾಳವ್ವ ಜೋಗತಿಯ ನೃತ್ಯ ತಂಡದಲ್ಲಿ ಖಾಯಂ ನೃತ್ಯಗಾರ್ತಿಯಾದರು, ಭಾರತದ ವಿವಿಧ ಭಾಗಗಳಲ್ಲಿ ಪ್ರದರ್ಶನ ನೀಡಿದರು. [೯] ಕಾಲವ್ವನ ಮರಣಾನಂತರ ಮಂಜಮ್ಮ ತಂಡವನ್ನು ವಹಿಸಿಕೊಂಡು ಜನರಲ್ಲಿ ಕುಣಿತವನ್ನು ಜನಪ್ರಿಯಗೊಳಿಸಿದರು. 2010 ರಲ್ಲಿ, ಅವರು ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದರು. ಅವರು 2021 ರಲ್ಲಿ ಭಾರತ ಗಣರಾಜ್ಯದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.
ಅವರು ಮೊದಲು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾಗಿ ಮತ್ತು ನಂತರ ರಾಜ್ಯ ಸರ್ಕಾರದಿಂದ ಅದೇ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡರು, ಇದು ರಾಜ್ಯದ ಪ್ರದರ್ಶಕ ಕಲೆಗಳ ಉನ್ನತ ಸಂಸ್ಥೆಗೆ ಮುಖ್ಯಸ್ಥರಾದ ಮೊದಲ ಟ್ರಾನ್ಸ್ ಮಹಿಳೆಯಾಗಿದ್ದ್ದಾರೆ. [೧೦]
{{cite news}}
: CS1 maint: unrecognized language (link)
{{cite news}}
: CS1 maint: unrecognized language (link)