ಮಲೆನಾಡು
ಮಲ್ನಾಡ್
| |
---|---|
ದೇಶ | ಭಾರತ |
ರಾಜ್ಯ | ಕರ್ನಾಟಕ |
ಪ್ರದೇಶ | ಮಲೆನಾಡು |
ತಾಲೂಕು | ಖಾನಾಪುರ ಸಿರ್ಸಿ ಜೊಯಿಡಾ ದಾಂಡೇಲಿ ಹಳಿಯಾಳ ಯಲ್ಲಾಪುರ ಮುಂಡಗೋಡ ಸಿದ್ದಾಪುರ ಸಾಗರ ಹೊಸನಗರ ಶಿವಮೊಗ್ಗ ತೀರ್ಥಹಳ್ಳಿ ಚಿಕ್ಕಮಗಳೂರು ಶೃಂಗೇರಿ ಕೊಪ್ಪ ನರಸಿಂಹರಾಜಪುರ ಮೂಡಿಗೆರೆ ಸಕಲೇಶಪುರ ಸೋಮವಾರಪೇಟೆ ಮಡಿಕೇರಿ ವಿರಾಜಪೇಟೆ ಸುಳ್ಯ |
ಭಾಷೆ | |
• ಅಧಿಕೃತ | ಕನ್ನಡ |
• ಪ್ರಾದೇಶಿಕ | ತುಳು,
ಸಿರ್ಸಿ ಕನ್ನಡ ಹವಿಗನ್ನಡ ಕೊಡವ |
Time zone | UTC+5:30 |
ಕರ್ನಾಟಕದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳು ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ.[೧] ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವದರಿಂದ ಮಲೆನಾಡು ಎಂಬ ಹೆಸರು ಬಂದಿದೆ.[೨] [೩] ಶಿವಮೊಗ್ಗ ವನ್ನು ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯುತ್ತಾರೆ.[೪][೫][೬] ಈ ಪ್ರದೇಶದ ಜನರು ಪ್ರಕೃತಿಯನ್ನು ಆರಾಧಿಸುತ್ತಾ, ಹಿಂದುತ್ವವನ್ನು ಅಳವಡಿಸಿಕೊಂಡಿದ್ದಾರೆ.
ಕರಿಮೀನು ಚಟ್ನಿ: ಮಳೆಗಾಲ ಶುರುವಾಗಿ ಜಮೀನಿನ ನೀರು ಹಳ್ಳಕ್ಕೆ ಬಿದ್ದು ಹಳ್ಳದ ನೀರು ಹೊಳೆಗೆ ಸೇರಲು ಶುರುವಾದಾಗ ಹೊಳೆಯಲ್ಲಿರುವ ಮೀನುಗಳು ನೀರಿನ ವಿರುದ್ದ ದಿಕ್ಕಿಗೆ ಈಜುತ್ತಾ ಹೊಳೆಯಿಂದ ಹಳ್ಳಕ್ಕೆ, ಹಳ್ಳದಿಂದ ಜಮೀನಿಗೆ ಮೊಟ್ಟೆ ಇಡಲು ಬಂದು ಸೇರುತ್ತವೆ. ಒಂದೆರಡು ದಿನ ಜೋರು ಮಳೆಯಾದಾಗ ಮಲೆನಾಡಿಗರು ನೀರು ಬೀಳುವ ಜಾಗಗಳಲ್ಲಿ ಇರುಳಿನ ಹೊತ್ತು ಕಾದು ಕುಳಿತು ಈ ರೀತಿ ಬಂದು ಸೇರುವ ಮೀನುಗಳನ್ನು ಬೇಟೆಯಾಡುತ್ತಾರೆ, ಇವುಗಳಿಗೆ ಹತ್ಮೀನು(ಹತ್ತುವ ಮೀನು) ಎಂದು ಕರೆಯುತ್ತಾರೆ.
ಇನ್ನೂ ನಾಟಿಯಾದ ಮೇಲೆ ಬತ್ತದ ಸಸಿಗಳು ಒಂದು ಅಡಿ ಎತ್ತರಕ್ಕೆ ಬೆಳೆದಿರುವಾಗ ಬಂದು ಸೇರುವ ಮೀನುಗಳು ನೀರು ತುಂಬಿದ ಗದ್ದೆಯಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿರುತ್ತವೆ. ಮೂರು ನಾಲ್ಕು ತಿಂಗಳಲ್ಲಿ ಗದ್ದೆಗಳಲ್ಲಿ ಬೆಳೆದು ಸ್ವಲ್ಪ ದಪ್ಪನಾಗುತ್ತವೆ. ಅವು ಮಳೆಗಾಲ ಕಡಿಮೆಯಾಗುವ ಕಾಲ ಅಂದರೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ವಾಪಸು ಹಳ್ಳ ಸೇರಿ ಹೊಳೆಗೆ ಹೋಗುತ್ತವೆ. ಈ ಕಾಲದಲ್ಲಿ ಅವರವರ ಗದ್ದೆಗಳಲ್ಲಿ ಮೀನು ಹಿಡಿಯಲು ಎಲ್ಲಾ ಬಾಗದ ನೀರು ಒಂದೆಡೆಯಿಂದ ಹೊರಹೋಗಲು ಒಂದು ಕಡುವೆ ಮಾಡಿ ಅದಕ್ಕೆ ಒಂದು ಕೂಣಿ(ಮೀನು/ಏಡಿ ಹಿಡಿಯಲು ಬಳಸುವ ಸಾದನ)ವನ್ನು ಇಡುತ್ತಾರೆ. ಆ ಸಮಯದಲ್ಲಿ ಸ್ವಲ್ಪ ಮಳೆ ಬಂದು ನೀರು ಕಡುವೆಯ ಮುಕಾಂತರ ಕೂಣಿಗೆ ಬೀಳುತ್ತದೆ. ಆಗ ರಾಶಿ ರಾಶಿ ಮೀನುಗಳು ಕೂಣಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ. ಇವು ಸಣ್ಣ ಮೀನುಗಳು ಇವುಗಳನ್ನು ಒಣಗಿಸುತ್ತಾರೆ. ಬಿಸಿಲಿದ್ದರೆ ಬಿಸಿಲಿನಲ್ಲಿ, ಇಲ್ಲದಿದ್ದರೆ 3-4 ಅಡಿಗಳಶ್ಟು ಎತ್ತರಕ್ಕೆ ಅಡಿಕೆ ಒಣಗಿಸುವ ತಟ್ಟಿಯಲ್ಲಿ ಮೀನುಗಳನ್ನು ಹರಡಿ, ಅಡಿಗಡೆಯಿಂದ ಬೆಂಕಿಯ ಶಾಕದಿಂದ ಒಣಗಿಸುತ್ತಾರೆ. ಹೀಗೆ ಹೊಗೆಯಲ್ಲಿ ಒಣಗುವುದರಿಂದ ಮೀನುಗಳ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಹಾಗಾಗಿ ಇದಕ್ಕೆ ಕರಿಮೀನು ಎಂದು ಹೆಸರು!
ಒಣಗಿಸಿದ ಕರಿಮೀನುಗಳನ್ನು ಮಣ್ಣಿನ ಗಡಿಗೆಗಳಿಗೆ ತುಂಬಿಸುತ್ತಾರೆ. ಗಡಿಗೆಗೆ ತುಂಬಿಸುವಾಗ ಸ್ವಲ್ಪ ಬಿಳೆಹುಳ್ಳನ್ನು ಸಣ್ಣಗೆ ಕತ್ತರಿಸಿ ಅದರ ಜೊತೆ ಸೇರಿಸಿ ತುಂಬಿಡುತ್ತಾರೆ. ಬಿಳೆಹುಲ್ಲು ಅದನ್ನು ಶಾಕವಾಗಿಡುತ್ತೆ. ಉಪಯೋಗಿಸಲು ಬೇಕಾದಾಗ ಎಶ್ಟು ಬೇಕೋ ಅಶ್ಟು ಮೀನನ್ನು ಆರಿಸಿ ತೆಗೆದು ಚೆನ್ನಾಗಿ ತೊಳೆದು ಹುಳಿ, ಉಪ್ಪು, ಕಾರ, ಸಾಂಬಾರು ಪದಾರ್ತ ಸೇರಿಸಿ ಎಣ್ಣೆಯಲ್ಲಿ ಒಗ್ಗರಣೆ ಹಾಕಿ ಬೇಯಿಸುತ್ತಾರೆ. ಇದನ್ನೇ ಕರಿಮೀನು ಚಟ್ನಿ ಎನ್ನುತ್ತಾರೆ. ರುಚಿಯಾಗೂ ಇರುತ್ತೆ!