Manyakheta ಮಾನ್ಯಖೇಟ
Malkhed ಮಳಖೇಡ | |
---|---|
village | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಕಲಬುರ್ಗಿ |
ತಾಲ್ಲೂಕು | ಸೇಡಂ |
ಲೋಕಸಭಾ ಕ್ಷೇತ್ರ | ಕಲಬುರ್ಗಿ |
Population (2001) | |
• Total | ೧೧,೧೮೦ |
Languages | |
• Official | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
ವಾಹನ ನೋಂದಣಿ | KA 32 |
ಮಾನ್ಯಖೇಟ (ಇಂದಿನ ಮಳಖೇಡ) ಎಂಬುದು ೯ ನೇ ಶತಮಾನದಲ್ಲಿ ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಮಾನ್ಯಖೇಟ ಇಂದಿನ ಗುಲಬರ್ಗಾ ಜಿಲ್ಲೆಯಲ್ಲಿ ಕಾಗಿಣಿ ನದಿಯ ದಡದಲ್ಲಿದೆ.ಇದು ಗುಲಬರ್ಗಾ ದಿ೦ದ ಸುಮಾರು ೪೦ ಕಿಲೊಮೀಟರ್ ದೂರದಲ್ಲಿದೆ.ಇದು ಕ್ರಿ. ಶ. ೮೧೮- ೯೮೨ ಅವಧಿಯಲ್ಲಿ ರಾಷ್ಟ್ರಕೂಟರ ರಾಜಧಾನಿಯಗಿತ್ತು . ರಾಷ್ಟ್ರಕೂಟರ ರಾಜ ಒಂದನೇ ಅಮೋಘವರ್ಷನ ಕಾಲದಲ್ಲಿ ರಾಷ್ಟ್ರಕೂಟರ ರಾಜಧಾನಿಯನ್ನು ಇವತ್ತಿನ ಬೀದರ್ ಜಿಲ್ಲೆಯ ಮಯೂರಖಂಡಿಯಿಂದ ಇಲ್ಲಿಗೆ ಸ್ಥಳಾಂತರಿಸಲಾಯಿತು . ರಾಷ್ಟ್ರಕೂಟರ ಪತನದ ನಂತರವೂ ಅವರ ಉತ್ತರಾಧಿಕಾರಿಗಳಾದ ಕಲ್ಯಾಣದ ಚಾಲುಕ್ಯರ ಆಡಳಿತದಲ್ಲಿ ರಾಜಧಾನಿ ಆಗಿಯೇ ಕ್ರಿ.ಶ. ೧೦೫೦ರ ವರೆಗೂ ಮಾನ್ಯಖೇಟವು ಮುಂದುವರೆಯಿತು .[೧]
ಮಳಖೇಡವು ಎರಡು ಬಹಳ ಹಳೆಯ ಸಂಸ್ಥೆಗಳಿಗೆ ನೆಲೆಯಾಗಿದೆ .
ಒಂಬತ್ತನೇ ಶತಮಾನದಲ್ಲಿ ಇಲ್ಲಿ ಆಚಾರ್ಯ ಜಿನಸೇನ ಮತ್ತು ಶಿಷ್ಯ ಗುಣಭದ್ರರು ಮಹಾಪುರಾಣ( ಆದಿಪುರಾಣ ಮತ್ತು ಉತ್ತರಪುರಾಣ) ವನ್ನು ರಚಿಸಿದರು. ಸೋಮದೇವ ಸೂರಿಯು ಯಶಸ್ತಿಲಕ ಚಂಪೂವನ್ನು ಇಲ್ಲಿಯೇ ರಚಿಸಿದನು. ಮಹಾವೀರಾಚಾರ್ಯನು 'ಗಣಿತಸಾರಸಂಗ್ರಹ' ಎಂಬ ಗಣಿತಗ್ರಂಥವನ್ನು ಇಲ್ಲಿಯೇ ಬರೆದನು. ಪ್ರಸಿದ್ಧ ಅಪಭ್ರಂಶ ಕವಿ ಪುಷ್ಪದಂತನು ಇಲ್ಲಿಯೇ ಬಾಳಿದನು.