{{Expand}}
is a disambiguation entry; please do not transclude it. Instead, use a more specific template, such as {{Incomplete}}
, {{Expand list}}
, {{Missing}}
, or {{Expand section}}
.Liver disease | |
---|---|
Classification and external resources | |
![]() Micrograph of non-alcoholic fatty liver disease, demonstrating marked macrovesicular steatosis. Trichrome stain. | |
MeSH | D008107 |
ಯಕೃತ್ತಿನ ರೋಗ (ಪಿತ್ತಜನಕಾಂಗದ ರೋಗವೆಂದು ಕೂಡ ಕರೆಯಲಾಗುತ್ತದೆ.)ವೆಂಬುದು ಯಕೃತ್ತಿನ ಮೇಲೆ ಪರಿಣಾಮ ಬೀರುವ ಯಾವುದೇ ಒಂದು ರೋಗದ ಬಗ್ಗೆ ವಿವರಿಸುವ ವಿಶಾಲ ಅರ್ಥದ ಪದವಾಗಿದೆ. ಅನೇಕರು ಯಕೃತ್ತ್ ನಲ್ಲಿ ಬೈಲಿರುಬಿನ್ ನ (ಸತ್ತ ರಕ್ತಕೋಶಗಳ ಸಂಖ್ಯೆ,ಆ ಭಾಗ ಹಳದಿಗೆ ತಿರುಗುತ್ತದೆ)ಮಟ್ಟವು ಹೆಚ್ಚುವುದರಿಂದ ಉಂಟಾಗುವ ಕಾಮಾಲೆರೋಗಕ್ಕೆ ಒಳಗಾಗಿರುತ್ತಾರೆ. ಸತ್ತ ಕೆಂಪು ರಕ್ತಕಣಗಳ ಹೀಮೋಗ್ಲೋಬಿನ್ ವಿಭಜನೆಯಾಗುವುದರಿಂದಾಗಿ ಬೈಲಿರುಬಿನ್ ಮಟ್ಟವು ಅಧಿಕಗೊಳ್ಳುತ್ತದೆ; ಸಾಮಾನ್ಯವಾಗಿ ಯಕೃತ್ತು ರಕ್ತದಿಂದ ಬೈಲಿರುಬಿನ್ನ್ನು ತೆಗೆದುಹಾಕಿ ಪಿತ್ತರಸದ ಮೂಲಕ ಹೊರದೂಡುತ್ತದೆ.
ಪಿತ್ತದ ನಾಳಬಂಧ, ಆಲ್ಫ್-1 ಆಂಟಿಟ್ರಿಪ್ಸಿನ್ ಡಿಫಿಷಿಯನ್ಸಿ, ಅಲಗಿಲ್ಲೆ ಸಿಂಡ್ರೋಮ್,ಮತ್ತು ಪ್ರೊಗ್ರೆಸಿವ್ ಫ್ಯಮಿಲಿಯಲ್ ಇಂಟ್ರಾಹೆಪ್ಯಾಟಿಕ್ ಕೊಲೆಸ್ಟಾಸಿಸ್ ಗಳನ್ನು ಒಳಗೊಂಡಂತೆ ಮಕ್ಕಳ ಅನೇಕ (ಆನುವಂಶಿಕ)ಯಕೃತ್ತಿನ ರೋಗಗಳಿವೆ.
ಬಾಹ್ಯ ಲಕ್ಷಣಗಳು ಕೆಳಕಂಡವುಗಳನ್ನು ಒಳಗೊಂಡಿವೆ: ಆವೃತವಾದ ನಾಲಿಗೆ, ತುರಿಕೆಯ ಚರ್ಮ, ಅತಿಯಾಗಿ ಬೆವರುವುದು, ಅಸಹ್ಯವಾದ ದೇಹದ ದುರ್ವಾಸನೆ, ಕಣ್ಣುಗಳ ಕೆಳಗೆ ಕಪ್ಪು ಕಲೆ, ತುರಿಸುವ ಕಣ್ಣುಗಳು ಮತ್ತು ಕೆಂಪಾಗಿ ಊದಿರುವ ಕಣ್ಣುಗಳು, ಮೊಡವೆ ರೊಸಾಸಿಯ, ಚರ್ಮದ ಮೇಲೆ ಕಂದು ಬಣ್ಣದ ಚುಕ್ಕೆಗಳು ಮತ್ತು ಕಲೆಗಳು, ಕೆಂಪೇರಿದ ಮುಖಭಾವ ಅಥವಾ ಮಿತಿಮೀರಿದ ಮುಖದ ರಕ್ತನಾಳಗಳು.[೧]
ಇತರ ಲಕ್ಷಣಗಳು ಈ ಕೆಳಕಂಡವುಗಳನ್ನು ಒಳಗೊಂಡಿವೆ: ಕಾಮಾಲೆ, ಗಾಢವರ್ಣದ ಮೂತ್ರ, ಬಿಳಚಿಕೊಂಡ ಮಲ, ಮೂಳೆ ಸವೆತ,ಸುಲಭ ರಕ್ತಸ್ರಾವ,ತುರಿಕೆ, ಚರ್ಮದಲ್ಲಿ ಕಾಣುವ ರಕ್ತನಾಳಗಳಂತಹ ಸಣ್ಣ ಬಲೆ, ದೊಡ್ಡದಾದ ಗುಲ್ಮ , ಕಿಬ್ಬೊಟ್ಟೆಯ ಕುಳಿಯಲ್ಲಿ ಸ್ರಾವ, ಶೀತ, ಪಿತ್ತಜನಕಾಂಗದ ನಾಳದಿಂದ ಅಥವಾ ಮೇದೋಜೀರಕ ಗ್ರಂಥಿಯಿಂದ ಅಥವಾ ಪಿತ್ತಕೋಶದಿಂದ ನೋವು.[೨]
ಯಕೃತ್ತು ಸರಿಯಾಗಿ ಕೆಲಸಮಾಡದಿರುವುದರ ರೋಗಲಕ್ಷಣಗಳು, ದೈಹಿಕ ಲಕ್ಷಣ ಮತ್ತು ಜೀರ್ಣತೆಯ ಸಮಸ್ಯೆಗಳು, ರಕ್ತದ ಸಕ್ಕರೆ ಕಾಯಿಲೆಯ ಸಮಸ್ಯೆಗಳು, ಪ್ರತಿರಕ್ಷಿತ ಕಾಯಿಲೆಗಳು, ಜಿಡ್ಡಿನ ಅಸಹಜವಾದ ಹೀರಿಕೆ, ಮತ್ತು ಚಯಾಪಚಯ ಸಮಸ್ಯೆಗಳಿಗೆ ಸಂಬಂಧಿಸಿದ ಅನೇಕ ರೋಗಲಕ್ಷಣಗಳನ್ನು ಒಳಗೊಂಡಿವೆ.[೧]
ಕೊಬ್ಬಿನ ಅರೆಜೀರ್ಣತೆ ಈ ಕೆಳಕಂಡ ರೋಗಲಕ್ಷಣಗಳಿಗೆ ಕಾರಣವಾಗಿದೆ: ಅಜೀರ್ಣ, ಹಿನ್ ಸುರಿತ, ಕೊಬ್ಬನ್ನು ಕರಗಿಸುವ ಜೀವಸತ್ವಗಳ ಕೊರತೆ, ಮೂಲವ್ಯಾಧಿ, ಪಿತ್ತಕೋಶದ ಕಲ್ಲುಗಳು, ಕೊಬ್ಬುಳ್ಳ ಆಹಾರಗಳ ಅಸಹಿಷ್ಣುತೆ, ಆಲ್ಕಹಾಲ್, ಓಕರಿಕೆ ಮತ್ತು ವಾಂತಿಯ ಅಸಹಿಷ್ಣುತೆ, ಹೊಟ್ಟೆ ಉಬ್ಬುವುದು, ಮತ್ತು ಮಲಬದ್ಧತೆ.
ನರಮಂಡಲದ ಕಾಯಿಲೆಗಳು ಈ ಕೆಳಕಂಡವುಗಳನ್ನು ಒಳಗೊಂಡಿವೆ: ಮಾನಸಿಕ ಕುಸಿತ, ಚಿತ್ತ ಚಂಚಲತೆ, ವಿಶೇಷವಾಗಿ ಕೋಪ ಮತ್ತು ಮುಂಗೋಪ, ಚಿತ್ತೈಕಾಗ್ರತೆಯ ಕೊರತೆ ಮತ್ತು "ಮಾನಸಿಕ ಗೊಂದಲ", ದೇಹವನ್ನು ಅತಿಯಾಗಿ ಬಿಸಿ ಮಾಡುವುದು, ವಿಶೇಷವಾಗಿ ಮುಖ ಮತ್ತು ಮುಂಡವನ್ನು ಬಿಸಿಯಾಗಿಸುವುದು, ಹಾಗು ಓಕರಿಕೆಗೆ ಸಂಬಂಧಿದಂತೆ ಮತ್ತೆ ಮತ್ತೆ ಬರುವ ತಲೆನೋವು (ಅರೆ ತಲೆನೋವನ್ನು ಒಳಗೊಂಡಂತೆ).
ರಕ್ತದಲ್ಲಿರುವ ಸಕ್ಕರೆ ಅಂಶದ ಸಮಸ್ಯೆಗಳು ಈ ಕೆಳಕಂಡಂತಿವೆ: ಸಕ್ಕರೆಗಾಗಿ ಹಾತೊರೆತ, ಹೈಪೊಗ್ಲಿಕ್ಯಾಮಿಯ ಮತ್ತು ರಕ್ತದಲ್ಲಿರುವ ಸಕ್ಕರೆಯ ಅಸ್ಥಿರ ಮಟ್ಟಗಳು,ಮತ್ತು ಮಧುಮೇಹ ಮೆಲ್ಲಿಟಸ್ 2ನೇ ವಿಧದ ಆಕ್ರಮಣ.
ರಕ್ತದ ಹರಿವಿನಲ್ಲಿರುವ ಕೊಬ್ಬಿನ ಮಟ್ಟದಲ್ಲಿ ಉಂಟಾಗುವ ವೈಪರೀತ್ಯ, ಜೀವಿಗಳಲ್ಲಿ ಮೇದಸ್ಸಿನ ಅತ್ಯಂತ ಹೆಚ್ಚಿನ ಮಟ್ಟ ಅಥವಾ ಅತ್ಯಂತ ಕಡಿಮೆ ಮಟ್ಟದಲ್ಲಿರುತ್ತದೆ. ಹೈಪರ್ ಕೊಲೆಸ್ಟ್ರೊಲೇಮಿಯ: LDL ಕೊಲೆಸ್ಟರಾಲ್ ಅನ್ನು ಹೆಚ್ಚಿಸುತ್ತದೆ, HDL ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುತ್ತದೆ,ಟ್ರಿಗ್ಲಿಸರೈಡ್ ಗಳನ್ನು ಹೆಚ್ಚಿಸುತ್ತದೆ,ತಡೆಯೊಡ್ಡಿದ ಅಪಧಮನಿ ಅಧಿಕ ರಕ್ತದ ಒತ್ತಡ , ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ದೇಹದ ಇತರ ಭಾಗಗಳಲ್ಲಿ (ಅಂಗಗಳ ನೆಣ ರೋಗ) ಕೊಬ್ಬನ್ನು ಹೆಚ್ಚಿಸುತ್ತದೆ. ಚರ್ಮದಲ್ಲಿ ಹೆಚ್ಚು ಪ್ರಮಾಣದ ಕೊಬ್ಬನ್ನು ಉಂಟುಮಾಡುವುದು(ಲಿಪೊಮಾಸ್ ಮತ್ತು ಇತರ ಕೊಬ್ಬುಳ್ಳ ದುರ್ಮಾಂಸಗಳು), ಮಿತಿಮೀರಿ ದಪ್ಪವಾಗುವುದು (ಸ್ಥೂಲ ಕಾಯತೆಯನ್ನು ಉಂಟುಮಾಡುತ್ತದೆ). ಪಥ್ಯದಲ್ಲಿದ್ದರೂ ತೂಕವನ್ನು ಇಳಿಸಿಕೊಳ್ಳಲಾಗದಿರುವುದು, ನಿಷ್ಕ್ರಿಯವಾದ ಚಯಾಪಚಯ ಕ್ರಿಯೆ, ಊದಿಕೊಂಡಿರುವ ಹೊಟ್ಟೆ (ಡೊಳ್ಳುಹೊಟ್ಟೆ), ಸೆಲ್ಯುಲೈಟ್, ಕೊಬ್ಬುಳ ಯಕೃತ್ತು, ಮತ್ತು ಮೇಲೊಟ್ಟೆಯ ಸುತ್ತಲಿರುವ ಕೊಬ್ಬಿನ ಸುರುಳಿ(ಯಕೃತ್ತಿನ ಸುರುಳಿ) ಇತ್ಯಾದಿ.[೧] ಅಥವಾ ಅತ್ಯಂತ ಕೆಳಮಟ್ಟದ ಮೇದಸ್ಸುಗಳು: ಹೈಪೊಕೊಲೆಸ್ಟರಾಲೇಮಿಯ: ಒಟ್ಟು ಕೊಲೆಸ್ಟರಾಲ್ ನ ಪ್ರಮಾಣ ಕಡಿಮೆಯಾಗುವುದು, LDL ಮತ್ತು VLDL ಕೊಲೆಸ್ಟರಾಲ್ ನ ಪ್ರಮಾಣ ಕಡಿಮೆಯಾಗುವುದು, ಕಡಿಮೆ ಪ್ರಮಾಣದಲ್ಲಿರುವ ಟ್ರಿಗ್ಲೈಡರೈಡ್ಸ್.
ಯಕೃತ್ತ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರೀಕ್ಷಿಸಲು ಅನೇಕ ಲಿವರ್ ಫಂಕ್ಷನ್ ಟೆಸ್ಟ್ (ಯಕೃತ್ತು ಕಾರ್ಯ ಪರೀಕ್ಷೆ)ಗಳಿವೆ. ಈ ಪರೀಕ್ಷೆಯನ್ನು ರಕ್ತದಲ್ಲಿರುವ ಕಿಣ್ವಗಳಿಗೆ ಮಾಡಲಾಗುತ್ತದೆ. ಇವು ಸಾಮಾನ್ಯವಾಗಿ ಯಕೃತ್ತಿನ ಜೀವಕೋಶಗಳಲ್ಲಿ, ಉಪಾಪಚಯಜ ಅಥವಾ ಉತ್ಪನ್ನಗಳಲ್ಲಿ ಹೇರಳವಾಗಿರುತ್ತವೆ.
ಯಕೃತ್ತ್ ತನ್ನನ್ನು ತಾನೇ ಸಂಪೂರ್ಣವಾಗಿ ಗುಣಪಡಿಸಿಕೊಳ್ಳುವಂತಹ ಏಕಮಾತ್ರ ಅಂಗವಾಗಿದೆ.
![]() | This section is empty. You can help by adding to it. (March 2009) |
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(June 2010) |
ಯಕೃತ್ತಿನ ಕಸಿ ಅಥವಾ ಸ್ಥಳಾಂತರೀಕರಣವು(ಲಿವರ್ ಟ್ರಾನ್ಸ್ ಪ್ಲಾಂಟ್) ದೀರ್ಘಕಾಲದಿಂದ ಬಾಧಿಸುತ್ತಿರುವ ಯಕೃತ್ತಿನ ರೋಗಕ್ಕಿರುವ ನಿಜವಾದ ಚಿಕಿತ್ಸೆಯಾಗಿದೆ. ಆದರೂ, ಸಲ್ಫಸಾಲಸೈನ್ ನಂತಹ ಸದ್ಯದಲ್ಲಿ ಪರೀಕ್ಷಿಸಲಾದ ಕೆಲವೊಂದು ಆಶಾದಾಯಕ ಜೌಷಧಿಗಳಿವೆ. ಈ ಔಷಧಿಗಳು ಯಕೃತ್ತಿನ ಪುನರ್ ಬೆಳವಣಿಗೆಯನ್ನು ನಿಲ್ಲಿಸುವ ವಿಶೇಷ ಪ್ರೋಟೀನ್ ಗಳನ್ನು ತಡೆಗಟ್ಟುವ ಮೂಲಕ ಪುನರ್ ಬೆಳವಣಿಗೆ ಸಹಕರಿಸುವ ಸಾಮರ್ಥ್ಯ ಹೊಂದಿವೆ. ಇದು ಯಕೃತ್ತಿಗೆ ಭಾಗಶಃ ಅಥವಾ ಸಂಪೂರ್ಣವಾಗಿ ಬೆಳೆಯಲು ಅನುಕೂಲ ಮಾಡಿಕೊಡುತ್ತದೆ. ಈ ಔಷಧಿಗಳನ್ನು ವೈದ್ಯಕೀಯವಾಗಿ ಪ್ರಯೋಗಗಳಿಗೆ ಒಳಪಡಿಸಿ ಪರೀಕ್ಷಿಸುತ್ತಿರುವ ಕಾರಣ ದುರದೃಷ್ಟವಶಾತ್ ಪ್ರಸ್ತುತದಲ್ಲಿ ಇವುಗಳನ್ನು ಬಳಸುತ್ತಿಲ್ಲ. ಇತರ ಚಿಕಿತ್ಸೆಗಳು ಕಾಂಡಕೋಶದ ಬಳಕೆಯನ್ನು ಒಳಗೊಂಡಿವೆ. ಇದನ್ನು ರೋಗಿಯ ವಿಫಲವಾದ ಯಕೃತ್ತಿಗೆ, ಇಂಜೆಕ್ಷನ್ ನ ಮೂಲಕ ಸೇರಿಸಿ ಅಂಗವನ್ನು ಮತ್ತೆ ಬೆಳೆಯುವಂತೆ ಮಾಡಲಾಗುತ್ತದೆ. ಆದರೆ ಇದು ಇನ್ನೂ ಆರಂಭದ ಹಂತದಲ್ಲಿದ್ದರೆ ಸಾಧ್ಯವಾಗುತ್ತದೆ.