ವಿದ್ಯಾ ಭಾರತಿ | |
---|---|
Location | |
ಭಾರತ | |
Information | |
ಬಗೆ | ಶೈಕ್ಷಣಿಕ ಸಂಸ್ಥೆ
established=ಟೆಂಪ್ಲೇಟು:Start date and ge |
ಧ್ಯೇಯ | "ಸ ವಿದ್ಯಾ ಯಾ ವಿಮುಕ್ತಯೇ" ("ಏಲ್ಲಿ ವಿದ್ಯೆ ಇದೆಯೋ ಅಲ್ಲಿ ಬಂಧನವಿಲ್ಲ" ವಿದ್ಯೆ ಕತ್ತಲಿನಿಂದ ಬೆಳಕಿನೆಡೆಗೆ ತರುತ್ತದೆ. ವಿದ್ಯೆ ಬಂಧನಗಳಿಂದ ಮುಕ್ತಗೊಳಿಸುತ್ತದೆ) |
ಸ್ಥಾನಮಾನ | ಸಕ್ರಿಯ |
Publication |
|
Affiliations | ಸಂಘ ಪರಿವಾರ |
Website | vidyabharti |
ವಿದ್ಯಾ ಭಾರತಿ ( ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾಣ ಸಂಸ್ಥಾನ) ರಾಷ್ಟ್ರೀಯ ಸ್ವಯಂಸೇವಕ ಸಂಘದ (ಅರ್ ಎಸ್ ಎಸ್) ಶೈಕ್ಷಣಿಕ ವಿಭಾಗವಾಗಿದೆ. ಇದು ೨೦೧೬ ರ ಹೊತ್ತಿಗೆ ೩೨ ಲಕ್ಶ ವಿದ್ಯಾರ್ಥಿಗಳೊಂದಿಗೆ ೧೨,೦೦೦ ಶಾಲೆಗಳನ್ನು ನಿರ್ವಹಿಸುತ್ತಿರುವ ಭಾರತದಲ್ಲಿನ ಅತಿದೊಡ್ಡ ಖಾಸಗಿ ಶಾಲೆಗಳನ್ನು ನಡೆಸುತ್ತಿದೆ [೧] [೨]. ದೆಹಲಿಯಲ್ಲಿ ಕಾರ್ಯಕಾರಿ ಪ್ರಧಾನ ಕಛೇರಿ, ಲಕ್ನೋದಲ್ಲಿ ಉಪ-ಕಚೇರಿಯೊಂದಿಗೆ , ಕುರುಕ್ಷೇತ್ರ ದಲ್ಲಿ ನೋಂದಾಯಿತ ಪ್ರಧಾನ ಕಛೇರಿಯನ್ನು ಹೊಂದಿದೆ[೩] [೪]. ೨೦೨೦ ರಲ್ಲಿ, "ಮಿಲಿಯನ್ ಲೈಫ್ ಕ್ಲಬ್" ಶಾಲಾ ಶಿಕ್ಷಣಕ್ಕೆ ವಿದ್ಯಾ ಭಾರತಿ ನೀಡಿದ ಕೊಡುಗೆಗಾಗಿ ವ್ಯಾನ್ಗಾರ್ಡ್ ಸಮೂಹದ ಅಧಿಕೃತ ಸದಸ್ಯರನ್ನಾಗಿ ಆಯ್ಕೆ ಮಾಡಿದೆ. [೫]
ಅರ್ ಎಸ್ ಎಸ್ ನ ಎಮ್ ಎಸ್ ಗೋಲ್ವಾಲ್ಕರ್ ಅವರ ಮಾರ್ಗದರ್ಶನದಲ್ಲಿ ೧೯೪೬ ರಲ್ಲಿ ಕುರುಕ್ಷೇತ್ರದಲ್ಲಿ ತನ್ನ ಮೊದಲ ಗೀತಾ ಶಾಲೆಯನ್ನು ಸ್ಥಾಪಿಸಿತು. ಆದರೆ, ೧೯೪೮ರಲ್ಲಿ ಆರ್ಎಸ್ಎಸ್ಮೇಲಿನ ನಿಷೇಧವು ಗೀತಾ ಶಾಲೆಯ ವಿಸ್ತರಣೆಗೆ ಕಡಿವಾಣ ಹಾಕಿತು. ನಿಷೇಧವನ್ನು ತೆಗೆದುಹಾಕಿದ ನಂತರ, ಮೊದಲ ಸರಸ್ವತಿ ಶಿಶು ಮಂದಿರ ಬ್ರಾಂಡ್ ಶಾಲೆಯನ್ನು ೧೯೫೨ ರಲ್ಲಿ ಗೋರಖ್ಪುರದಲ್ಲಿ ನಾನಾಜಿ ದೇಶಮುಖ್ ಅವರು ಸ್ಥಾಪಿಸಿದರು[೪] [೬].
ಸರಸ್ವತಿ ಶಿಶು ಮಂದಿರದ ಮಾದರಿಯುಲ್ಲಿ ಹಲವಾರು ಶಾಲೆಗಳನ್ನ ದೇಶದ ವಿವಿಧ ಭಾಗಗಳಲ್ಲಿ ತೆರೆಯಲಾಯಿತು. ಶಾಲೆಗಳ ಸಂಖ್ಯೆ ಹೆಚ್ಚಾದಂತೆ, ಒಂದು ನಿರ್ದಿಷ್ಟ ನಿರ್ವಹಣಾ ರಚನೆಯ ಅಗತ್ಯ ಉದ್ಭವಿಸಿತು. ಅದರಂತೆ, ರಾಜ್ಯ ಮಟ್ಟದಲ್ಲಿ ಈ ಶಾಲೆಗಳ ನಡುವೆ ಚಟುವಟಿಕೆಗಳನ್ನು ಸಂಘಟಿಸಲು ಶಿಶು ಶಿಕ್ಷಾ ಪ್ರಬಂದಕ್ ಸಮಿತಿಯನ್ನು ದೆಹಲಿ, ಬಿಹಾರ, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದಲ್ಲಿಸ್ಥಾಪಿಸಲಾಯಿತು [೪] [೬].
ಅಖಿಲ ಭಾರತೀಯ ಮಟ್ಟದಲ್ಲಿ ರಾಜ್ಯ ಸಮಿತಿಗಳ ನಡುವಿನ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ವಿದ್ಯಾಭಾರತಿ ಸಂಸ್ಥೆಯನ್ನು ೧೯೭೭-೭೮ ರಲ್ಲಿ ಸ್ಥಾಪಿಸಲಾಯಿತು. ಇದರ ಪ್ರಧಾನ ಕಚೇರಿ ದೆಹಲಿಯಲ್ಲಿದೆ. ವಿದ್ಯಾಭಾರತಿಯು ಶಿಕ್ಷಣತಜ್ಞರೊಂದಿಗೆ ರಾಷ್ಟ್ರೀಯ ಶೈಕ್ಷಣಿಕ ಮಂಡಳಿಯನ್ನು ಹೊಂದಿತ್ತು, ಇದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (NCERT) ವಿಶ್ವಾಸವನ್ನು ಪಡೆಯಿತು[೪] [೬].
೧೯೯೦ ರ ದಶಕದ ಆರಂಭದಲ್ಲಿ ಇದು ೫,೦೦೦ ಶಾಲೆಗಳು ಮತ್ತು ೨೦೦೩ ರ ಹೊತ್ತಿಗೆ ೧೭ ಲಕ್ಷ (೧.೭ ಮಿಲಿಯನ್) ವಿದ್ಯಾರ್ಥಿಗಳೊಂದಿಗೆ ಸುಮಾರು ೧೪,೦೦೦ ಶಾಲೆಗಳಿಗಳನ್ನು ಹೊಂದಿದೆ. ಭಾರತದಲ್ಲಿ ಶಿಕ್ಷಣಕ್ಕಾಗಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಹೆಚ್ಛುತ್ತಿರುವ ರಾಜ್ಯ ಸರ್ಕಾರ ಮತ್ತು ಶಾಲೆಗಳ ವ್ಯವಸ್ಥಾ ಮಂಡಲಿಗಳ ನಡುವಿನ ವ್ಯಮನಸ್ಸಿನಿಂದಾಗಿ ವಿಸ್ತರಣೆಯಹಾದಿ ಸುಗಮವಾಯಿತು[೭]. ಮಾರ್ಚ್ ೨೦೦೨ ರ ಹೊತ್ತಿಗೆ, ಇದು ೧೭,೩೯೬ ಶಾಲೆಗಳು, ೨೨ ಲಕ್ಷ (೨.೨ ಮಿಲಿಯನ್) ವಿದ್ಯಾರ್ಥಿಗಳು, ೯೩,೦೦ ಕ್ಕೂ ಹೆಚ್ಚು ಶಿಕ್ಷಕರು, ೧೫ ಶಿಕ್ಷಕರ ತರಬೇತಿ ಕಾಲೇಜುಗಳು, ೧೨ ಪದವಿ ಕಾಲೇಜುಗಳು ಮತ್ತು ೭ ವೃತ್ತಿಪರ ಮತ್ತು ತರಬೇತಿ ಸಂಸ್ಥೆಗಳನ್ನು ಹೊಂದಿದೆ [೮]. ೨೦೧೯ ರ ಹೊತ್ತಿಗೆ, ೧೨,೮೨೮ ಔಪಚಾರಿಕ ಶಾಲೆಗಳು ಮತ್ತು ೧೧,೩೫೩ ಅನೌಪಚಾರಿಕ ಶಾಲೆಗಳಿವೆ. [೯] ೨೦೧೯ ರಲ್ಲಿ, ಔಪಚಾರಿಕ ಶಾಲೆಗಳು ಒಟ್ಟು ೩೪ ಲಕ್ಷ (೩.೪ ಮಿಲಿಯನ್) ವಿದ್ಯಾರ್ಥಿಗಳನ್ನು ಹೊಂದಿದ್ದಾವೆ.
ಹೆಚ್ಚಿನ ವಿದ್ಯಾಭಾರತಿ ಶಾಲೆಗಳು ಸೆಂಟ್ರಲ್ ಬೋರ್ಡ್ ಫಾರ್ ಸೆಕೆಂಡರಿ ಎಜುಕೇಶನ್ ಅಥವಾ ಅವುಗಳ ಸ್ಥಳೀಯ ರಾಜ್ಯ ಮಂಡಳಿಗಳಿಗೆ ಸಂಯೋಜಿತವಾಗಿವೆ. [೮] ಬಿಜೆಪಿ ಅಧಿಕಾರದಲ್ಲಿದ್ದಾಗ ವಿದ್ಯಾಭಾರತಿ ನಡೆಸುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮಧ್ಯಪ್ರದೇಶದಲ್ಲಿ ಶಿಕ್ಷಣದ ಪರ್ಯಾಯ ಮಾದರಿಯಾಗಿ ಅಳವಡಿಸಿಕೊಳ್ಳಲಾಯಿತು [೧೦].
ಔಪಚಾರಿಕ ಶಾಲೆಗಳ ಜೊತೆಗೆ ( ಆದರ್ಶ ವಿದ್ಯಾ ಮಂದಿರ, ಶಿಶು ವಾಟಿಕಾ, ಸರಸ್ವತಿ ಶಿಶು ಮಂದಿರ, ಸರಸ್ವತಿ ವಿದ್ಯಾ ಮಂದಿರ, ಸರಸ್ವತಿ ವಿದ್ಯಾಲಯ ಇತ್ಯಾದಿ), ವಿದ್ಯಾಭಾರತಿ ಸಂಸ್ಥೆ ಸಂಸ್ಕಾರ ಕೇಂದ್ರಗಳನ್ನು (ಸಾಂಸ್ಕೃತಿಕ ಶಾಲೆ) ಮತ್ತು ಸಾಂಸ್ಕೃತಿಕ ಶಿಕ್ಷಣಕ್ಕಾಗಿ ಏಕ-ಶಿಕ್ಷಕರ ಶಾಲೆಗಳನ್ನು ನಡೆಸುತ್ತದೆ. ಇದು ೨೫೦ ಮಧ್ಯಂತರ ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಮತ್ತು ತರಬೇತಿ ಕಾಲೇಜುಗಳ ಸುಮಾರು ೨೫ ಸಂಸ್ಥೆಗಳನ್ನು ನಿಯಂತ್ರಿಸುತ್ತದೆ[೧೧]
ಇದು ಈಶಾನ್ಯ ರಾಜ್ಯಗಳ ಸಹ ಶಾಲೆಗಳನ್ನು ಹೊಂದಿದೆ ಮತ್ತು ಅರ್ ಎಸ್ ಎಸ್ ಹೆಚ್ಚು ಪ್ರಭಾವ ಬೀರದ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿದೆ[೪]. ಹಿಂದುಳಿದ ಪ್ರದೇಶಗಳು ಮತ್ತು ಬುಡಕಟ್ಟು ಸಮುದಾಯಗಳು ವಾಸಿಸುವ ಪ್ರದೇಶಗಳಿಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ. [೬] ವಿದ್ಯಾಭಾರತಿ ಶಾಲೆಗಳು ಭಾರತದ ಪಶ್ಚಿಮ ಘಟ್ಟಗಳಿಂದ ಹಿಡಿದು ಈಶಾನ್ಯ ಭಾಗಗಳವರೆಗೆ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳವರೆಗೆ ದೇಶದಾದ್ಯಂತ ಹರಡಿಕೊಂಡಿವೆ. ವಿವಿಧ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಶಾಲೆಗಳು ಯಶಸ್ಸಿನ ಮಾರ್ಗವನ್ನು ಒದಗಿಸಿವೆ. ಈಶಾನ್ಯ ಭಾರತದಲ್ಲಿ ವಿದ್ಯಾಭಾರತಿಯ ಅಡಿಯಲ್ಲಿ ನಡೆಯುವ ಶಾಲೆಗಳ ಸಮೂಹವಾಗಿರುವ ಶಂಕರದೇವ್ ಶಿಶು ನಿಕೇತನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಂದ ಬರುವ ವಿದ್ಯಾರ್ಥಿಗಳು ೧೦ ನೇ ತರಗತಿಯಲ್ಲಿಉನ್ನತ ಶ್ರೆಣಿಯಲ್ಲಿ ತೇರ್ಗಡೆಯಾಗಿದ್ದು ಸಂಸ್ಕೃತ ಪ್ರಬಂಧ ಬರವಣಿಗೆ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ[೧೨] [೧೩]. ಶಿಕ್ಶಣ ಸಂಸ್ಥೆಯ ಸರಪಳಿಯು ೨೯ ಕ್ಕೂ ಹೆಚ್ಚು ರಾಜ್ಯ ಮತ್ತು ಪ್ರಾದೇಶಿಕ ಸಮಿತಿಗಳನ್ನು ಹೊಂದಿದ್ದು, ಇದು ಭಾರತದ ಅತಿದೊಡ್ಡ ಸ್ವಯಂಸೇವಾ ಸಂಘವಾಗಿದೆ[೧೪]. ವಿದ್ಯಾಭಾರತಿ ನಡೆಸುತ್ತಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳು ಎಲ್ಲಾ ಧಾರ್ಮಿಕ ಗುಂಪುಗಳಿಂದ ಬರುತ್ತಾರೆ. ಉದಾಹರಣೆಗೆ, ಉತ್ತರ ಪ್ರದೇಶದಲ್ಲಿ, ೧೨,೦೦೦ ಕ್ಕೂ ಹೆಚ್ಚು ಮುಸ್ಲಿಂ ಮತ್ತು ಕ್ರಿಶ್ಚಿಯನ್ ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ಓದುತ್ತಾರೆ[೧೫].
ಪ್ರಪಂಚದಾದ್ಯಂತದ ದತ್ತಿಗಳು ಸೇರಿದಂತೆ ವಿವಿಧ ವಿಧಾನಗಳ ಮೂಲಕ ಈ ಸಂಸ್ಥೆಯ ವಿಸ್ತರಣೆಗಾಗಿ ಹಣವನ್ನು ಸಂಗ್ರಹಿಸಲಾಗಿದೆ. ಲಂಡನ್ ಮೂಲದ ಸಂಘಟನೆಯಾದ ಆವಾಜ್ ಪ್ರಕಾರ, ಗುಜರಾತ್ಗೆ ಸೇವಾ ಇಂಟರ್ನ್ಯಾಶನಲ್ ಭೂಕಂಪದ ನಿಧಿಯ ಗಮನಾರ್ಹ ಭಾಗವನ್ನು ಆರ್ಎಸ್ಎಸ್ ಶಾಲೆಗಳನ್ನು ನಿರ್ಮಿಸಲು ಬಳಸಲಾಗಿದೆ[೧೪]. ಜನಸಂಘ ಮತ್ತು ಬಿಜೆಪಿ ರಾಜಕಾರಣಿಗಳು ಅಧಿಕಾರದಲ್ಲಿ ಇದ್ದಾಗ ಭೂಮಿ ಹಂಚಿಕೆ ಮಾಡಿ ಸಂಸ್ಥೆ ಲಾಭ ಪಡೆದಿದೆ[೪] [೮]. ಇದು ರಾಜ್ಯಗಳಲ್ಲಿ [೮] ಅಥವಾ ಕೇಂದ್ರದಲ್ಲಿ (1೧೯೯೯-೨೦೦೪) ಅಧಿಕಾರದಲ್ಲಿದ್ದಾಗ ಭಾರತೀಯ ಜನತಾ ಪಕ್ಷ (ಬಿಜೆಪಿ) ಯಿಂದ ವಿವಿಧ ಪ್ರೋತ್ಸಾಹದೊಂದಿಗೆ ಸಹಾಯ ಮಾಡಲ್ಪಟ್ಟಿತು[೧೪].
ಆಂದೋಲನವು ಹಂತ ಹಂತವಾಗಿ 'ವ್ಯಾವಹಾರಿಕವಾಗಿ ಮಾರ್ಪಟ್ಟಿದೆ' ಆದರೆ ಉತ್ತಮ ಗುಣಮಟ್ಟದ ಶಿಕ್ಷಕರನ್ನು ನೇಮಿಸಿಕೊಳ್ಳುವಲ್ಲಿ ಸಂಸ್ಥೆ ಸಾಕಷ್ಟು ಗಮನ ಹರಿಸಲಿಲ್ಲ ಎಂದು ನಾನಾಜಿ ದೇಶಮುಖ್ ಅಭಿಪ್ರಾಯ ಪಟ್ಟಿದ್ದಾರೆ[೩]. ಸಂಸ್ಥೆಯ ಶಾಲೆಗಳು ನಗರ, ಗ್ರಾಮೀಣ ಭಾಗದ ಅಂಗಡಿ ವ್ಯಾಪಾರ ಮಾಡುವ ಮತ್ತು ವೃತ್ತಿಪರ ಮತ್ತು ಸರ್ಕಾರಿ ಅಧಿಕೃತ ಕುಟುಂಬಗಳ ಮಕ್ಕಳನ್ನು ಆಕರ್ಷಿಸುತ್ತವೆ[೧೬].
ಮೆಕಾಲೆ, ಮಾರ್ಕ್ಸ್ ಮತ್ತು ಮದ್ರಸವಾದಿಗಳ ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಸುತ್ತಿದ್ದೇವೆ ಎಂದು ವಿದ್ಯಾಭಾರತಿಯ ಮಾಜಿ ಪ್ರಧಾನ ಕಾರ್ಯದರ್ಶಿ ದೀನಾನಾಥ್ ಬಾತ್ರಾ ಹೇಳಿದ್ದಾರೆ. ಇವುಗಳಿಗೆ ಹೋಲಿಸಿದರೆ ವಿದ್ಯಾಭಾರತಿ ಶಿಕ್ಷಣದ "ಭಾರತೀಕರಣ, ರಾಷ್ಟ್ರೀಕರಣ ಮತ್ತು ಆಧ್ಯಾತ್ಮಿಕೀಕರಣ"ವನ್ನು ಪ್ರತಿಪಾದಿಸುತ್ತದೆ. [೧೭] ದೈಹಿಕ ಶಿಕ್ಷಣ, ಸಂಗೀತ ಮತ್ತು ಸಾಂಸ್ಕೃತಿಕ ಶಿಕ್ಷಣದಂತಹ ಮೂಲ ಪಠ್ಯಕ್ರಮಕ್ಕೆ ಬಾಹ್ಯವಾಗಿರುವ ಅಧ್ಯಯನದ ಕ್ಷೇತ್ರಗಳಲ್ಲಿ, ಸಂಸ್ಥೆಯು ತನ್ನದೇ ಆದ ಪಠ್ಯಕ್ರಮವನ್ನು ರೂಪಿಸಿದೆ. [೧೬]
ನಿಗದಿತ ಪಠ್ಯಕ್ರಮದ ಜೊತೆಗೆ, ವಿದ್ಯಾಭಾರತಿ ಶಾಲೆಗಳು ಐದು ಹೆಚ್ಚುವರಿ ವಿಷಯಗಳನ್ನು ಕಲಿಸುತ್ತವೆ: ನೈತಿಕ ಶಿಕ್ಷಣ, ವೀರರ ಕಥೆಗಳು, ಹಾಡುಗಳು, ಪ್ರಾಮಾಣಿಕತೆ ಮತ್ತು ವೈಯಕ್ತಿಕ ನೈರ್ಮಲ್ಯ, ದೈಹಿಕ ಶಿಕ್ಷಣ, ಇದರಲ್ಲಿ ಕೋಲು, ಸಮರ ಕಲೆಗಳು ಮತ್ತು ಯೋಗ, ಸಂಗೀತ ಕಲಿಯುವುದನ್ನು ಒಳಗೊಂಡಿರುತ್ತದೆ. ಸಂಸ್ಕೃತ ಮತ್ತು ವೇದ ಗಣಿತ ಹಾಗು ಹುಡುಗಿಯರಿಗೆ ಕನ್ಯಾ ಭಾರತಿ ಸೆಷನ್ಗಳನ್ನು ನೀಡಲಾಗುತ್ತದೆ, ಅಲ್ಲಿ ಅವರು ನೈಜ-ಪ್ರಪಂಚದ ಸಮಸ್ಯೆಗಳನ್ನು ವಿಶೇಷವಾಗಿ "ಮಹಿಳಾ ಕೇಂದ್ರಿತ" ಸೂಕ್ಷ್ಮ ಸಮಸ್ಯೆಗಳನ್ನು ಚರ್ಚಿಸುತ್ತಾರೆ ಮತ್ತು ಅವುಗಳನ್ನು ಹೇಗೆ ಎದುರಿಸಬೇಕೆಂದು ಕಲಿಯುತ್ತಾರೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಅಹಲ್ಯಾಭಾಯಿ ಹೋಳ್ಕರ್, ರುದ್ರಮಾದೇವಿ ಮತ್ತು ಕಲ್ಪನಾ ಚಾವ್ಲಾ, ಕಿರಣ್ ಬೇಡಿ, ಇಂದ್ರಾ ನೂಯಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿ ಮಹಿಳೆಯರನ್ನು ಆರಾಧಿಸುವ ಪ್ರಬಲ ನಾಯಕರಾಗಲು ಅವರಿಗೆ ತರಬೇತಿ ನೀಡಲಾಗುತ್ತದೆ.
ಬೆಳಿಗ್ಗೆ ಅಸೆಂಬ್ಲಿಯಲ್ಲಿ, ಮಕ್ಕಳಿಗೆ ಸಂಸ್ಕೃತ ಮತ್ತು ದೇಶಭಕ್ತಿಯ ಉತ್ಸಾಹದಲ್ಲಿ ಮುಳುಗಿರುವ ಹಾಡುಗಳನ್ನು ಪ್ರಾರ್ಥಿಸಲು ಮತ್ತು ಹಾಡಲು ಕಲಿಸಲಾಗುತ್ತದೆ. ಹಿಂದೂ ಹಬ್ಬಗಳಂದು ಆಯೋಜಿಸಲಾದ ಅಸೆಂಬ್ಲಿಗಳು ಮತ್ತು ವೇದಿಕೆಯ ಪ್ರದರ್ಶನಗಳು ದೇಶಭಕ್ತಿ ಸಿದ್ಧಾಂತವನ್ನು ತಿಳಿಸಲು ಸಹ ಕಾರ್ಯನಿರ್ವಹಿಸುತ್ತವೆ. ಶಾಲೆಗಳಲ್ಲಿ ಹಿಂದೂಯೇತರ ಮಕ್ಕಳ ವಾಸ್ತವಿಕ ಅನುಪಸ್ಥಿತಿಯು ಹಿಂದೂ ಗುರುತಿನ ಸಾಮೂಹಿಕ ಪ್ರಜ್ಞೆಗೆ ಕಾರಣವಾಗುತ್ತದೆ. ವಿದ್ಯಾಭಾರತಿ ವ್ಯಾಖ್ಯಾನಕಾರರ ಮಾತಿನಲ್ಲಿ "ಆಳವಾದ ಭಾರತೀಯ ಚೈತನ್ಯದೊಂದಿಗೆ ತಾಯ್ನಾಡಿಗೆ ಸಮರ್ಪಿಸುವುದು ಮಗುವಿನಲ್ಲಿ ತನ್ನ ಸ್ವಭಾವವನ್ನು ಬದಲಾಯಿಸುವ [ಮತ್ತು] ತನ್ನ ಸ್ವಭಾವ ಮತ್ತು ಕಾರ್ಯಕ್ರಮವನ್ನು ರಾಷ್ಟ್ರದ ಇಚ್ಛೆ ಮತ್ತು ಅಗತ್ಯವನ್ನು ಪೂರೈಸುವ ಇಚ್ಛೆಯನ್ನು ಉಂಟುಮಾಡುತ್ತದೆ." [೧೬]
ರಾಜ್ಯದಲ್ಲಿನ ಸಾಮಾಜಿಕ-ರಾಜಕೀಯ ಪರಿಸ್ಥಿತಿಯನ್ನು ಅವಲಂಬಿಸಿ ವಿದ್ಯಾಭಾರತಿಯು ರಾಜ್ಯ ಮಟ್ಟದ ಅಂಗ ಸಮಿತಿಗಳು ವಿವಿಧ ಹೆಸರುಗಳಿಂದ ಗುರುತಿಸಿಕೊಳ್ಳುತ್ತದೆ [೬].
{{cite book}}
: |work=
ignored (help)