ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ವಿಭೂತಿ ದೇವರ ಪೂಜೆಯಲ್ಲಿ ಉಪಯೋಗಿಸುವ ಒಂದು ರೀತೆಯ ಭಸ್ಮ.ವಿಭೂತಿಯು ವೈಭವ ಮತ್ತು ಪವಿತ್ರತೆಯನ್ನು ಹೊಂದಿರುವ ಒಂದು ವಸ್ತುವಾಗಿದೆ.ವಿಭೂತಿಯನ್ನು ಸಾಮಾನ್ಯವಾಗಿ ಹಿಂದು ಧರ್ಮದಲ್ಲಿ ಉಪಯೋಗಿಸುತ್ತಾರೆ.ಇದರ ಉಪಯೋಗವು ಬೇರೆಯ ಧರ್ಮಗಳಲ್ಲಿಯು ಇದೆ. ವಿಭೂತಿಯು ಲಿಂಗಾಯುತ ಧರ್ಮದಲ್ಲಿ ಅತ್ಯಂತ ಪವಿತ್ರತೆಯನ್ನುಹೊಂದಿದೆ, ಹಾಗು ಪೂಜೆಗಳಲ್ಲಿ ಹೆಚ್ಛು ಅಂಶದ ಪ್ರಾಮುಖ್ಯತೆಯನ್ನು ಹೊಂದಿರುವ ಪದಾರ್ಥವೆಂದು ಹೇಳಲಾಗಿದೆ.ಹಿಂದು ಧರ್ಮದ ಪರಿಪಾಲಕರು ವಿಭೂತಿಯನ್ನು ಪರಮಾತ್ಮನಾದ ಶಿವನನ್ನು ಮೆಚ್ಛಿಸಲು ಹಚ್ಚಿಕೊಳ್ಳುತ್ತಾರೆ.ತಮ್ಮ ಸಂಪ್ರದಾಯವಾಗಿ ವಿಭೂತಿಯನ್ನು ತಮ್ಮ ಹಣೆಗಳ ಮೇಲೆ ಮೂರು ಗೆರೆಗಳನ್ನು ಹಚ್ಚಿಕೊಳ್ಳುತ್ತಿದ್ದರು.ಇದು ಹುಬ್ಬುಗಳವರೆಗೆ ಹಚ್ಚಿಕೊಳ್ಳುವುದರಿಂದ ತ್ರಿಪುಂದ್ರ ಎಂದು ಕರೆಯಲಾಗುತ್ತದೆ.ಸಾಂಪ್ರದಾಯಕವಾಗಿ ವಿಭೂತಿಯು ದೈವಾತ್ಮಕ ಅರ್ಥವನ್ನು ಹೊಂದಿದೆ ಹಾಗು ವಿಭೂತಿಯು ಶಿವನಿಗೆ ಹೊಂದಿರುವ ವಿಷಯ.ಒಂದು ನಂಬಿಕೆ ಏನೆಂದರೆ ಪರಮಾತ್ಮನಾದ ಶಿವನು ತನ್ನ ಇಡೀ ದೇಹದ ಮೇಲೆ ವಿಭೂತಿಯನ್ನು ಹಚ್ಛಿಕೊಂಡಿರುವುದು.ವಿಭೂತಿಯ ಬಣ್ಣವನ್ನು 'ಸಶಿವರ್ಣಮ್' ಎಂದು ಕರೆಯಲಾಗುತ್ತದೆ, ಎಂದರೆ ಶಿವನು ಪವಿತ್ರತೆ,ಬೆಳಕು,ಕತ್ತಲು ಎರಡನ್ನೂ ಹೊಂದಿರುವ ದೇವರು ಎಂದು.ಇದರ ಅರ್ಥವೇನೆಂದರೆ ಶಿವನಲ್ಲಿ ಅನೇಕ ಶಕ್ತಿಗಳೂ ಇದ್ದು, ಆತನಲ್ಲಿ ಹಲವು ರೀತಿಯ ಮಾಯೆ ಕೂಡ ಇದೆ ಎಂಬುದು ಒಂದು ನಂಬಿಕೆಯಾಗಿದೆ. ವಿಭೂತಿಯ ಬಳಸಿಕೆಯಲ್ಲಿ ಇನ್ನೊಂದು ಮುಖ್ಯವಾದ ಅರ್ಥವಿದೆ.
ಆಗಮಾಚರಣೆ ವ ಸಂಸ್ಕಾರದಲ್ಲಿ ಒಣ ಕಟ್ಟಿಗೆಗಳನ್ನು ಸುಡುವದರಿಂದ ದೊರೆಯುವ ಬೂದಿಗೆ ವಿಭೂತಿಯೆಂದು ಹೆಸರು.
ಸಂಸ್ಕೃತ ಭಾಷೆಯಲ್ಲಿ 1) ವಿಭೂತಿ 2) ಭಸ್ಮ
ಕನ್ನಡ ಭಾಷೆಯಲ್ಲಿ 1) ಅಂಗಾರ 2) ಬೂದಿ
ತಮಿಳು ಭಾಷೆಯಲ್ಲಿ 1) ತಿರುನೀರು
ಮಾನವನು ತನ್ನ ಸಾವಾದ ನಂತರ ತನ್ನ ದೇಹವನ್ನು ಸುಡಲಾಗುತ್ತದೆ.ಕಡೆಗೆ ಅದರಲ್ಲಿ ಉಳಿಯುವುದು ಸ್ವಲ್ಪ ಅಂಶದ ಭಸ್ಮವಷ್ಟೆ.ಮಾನವ ಜನ್ಮ ದೊಡ್ಡದು, ಇಂತಹ ಜನ್ಮ ಹೊಂದಿರುವ ಮಾನವ ಹಾಗು ಅನೇಕ ಅಂಗಗಳು,ಪಂಚೇಂದ್ರಿಯಗಳನ್ನು ಹೊಂದಿರುವ ಆತನು ದೊಡ್ಡ-ದೊಡ್ಡ ಕಾರ್ಯಗಳನ್ನು ನಿರ್ವಹಿಸಿ,ಕೊನೆಗೆ ಸಾವಾದ ನಂತರ ಬೆಂಕಿಯಲ್ಲಿ ಸೌದೆಯಂತೆ ಸುಟ್ಟು ಭಸ್ಮವಾಗುತ್ತಾನೆ.ಬೆಂಕಿಯು ಅಪವಿತ್ರವನ್ನು ಸುಟ್ಟು ಪವಿತ್ರತೆಯನ್ನು ನೀಡುತ್ತದೆ. ಅದು ಕೊನೆಗೆ ಭಸ್ಮವಾಗಿಯೆ ಉಳಿಯುತ್ತದೆ.ಭಸ್ಮವು ಎಂದಿಗು ಶಾಶ್ವತವಾಗಿ ಉಳಿಯುತ್ತದೆ.ವಿಭೂತಿಯು ಪವಿತ್ರವಾದ ಒಂದು ಅಂಶ ಏಕೆಂದರೆ ಅದರ ಬಣ್ಣ ಮತ್ತು ರೀತಿ ಬದಲಾಗುವುದಿಲ್ಲ. ನಾವು ಕಬ್ಬಿಣವನ್ನು,ದೇಹವನ್ನು,ಸೌದೆಯನ್ನು ಸುಟ್ಟರೆ ಕೊನೆಗೆ ಉಳಿಯುವುದು ಭಸ್ಮ.ಯಾವುದೆ ವಸ್ತುವನ್ನು ಸುಟ್ಟರೂ ಅದರಲ್ಲಿ ಕೊನೆಗೆ ಉಳಿಯುವುದೇ ಭಸ್ಮ.
ವಿಭೂತಿ ದೇವರ ಆರಾಧನೆಗೆ ಮಾತ್ರವಲ್ಲದೆ ಅದರಲ್ಲಿ ಬೇರೆಯ ಉಪಯೋಗಗಳಿವೆ.ವಿಭೂತಿಯನ್ನು ಹಚ್ಚಿಕೊಳ್ಳುವುದು ಧನಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ.ಅಷ್ಟೆ ಅಲ್ಲದೆ ವಿಭೂತಿಯನ್ನು ಹಚ್ಛುವುದು ತಲೆನೋವನ್ನು ನಿವಾರಿಸುತ್ತದೆ.ವಿಭೂತಿಯ ಹಚ್ಚುವಿಕೆಯು ದೇಹದ ಏಳು ಚಕ್ರಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಇದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು.ವಿಭೂತಿಯು ಕೆಮ್ಮು,ಶೀತ, ನೆಗಡಿಯನ್ನು ನಿಯಂತ್ರಿಸುತ್ತದೆ.ಸಾಮಾನ್ಯವಾಗಿ ವಿಭೂತಿಯನ್ನು ಅಕ್ಕಿ ಹೊಟ್ಟು, ಸಗಣಿಯಿಂದ ಮಾಡಲಾಗುತ್ತದೆ.ಸಗಣಿಯನ್ನು ಮೊದಲು ಚೆನ್ನಾಗಿ ಒಣಗಿಸಲಾಗುತ್ತದೆ.ನಂತರ ಹುಲ್ಲಿನಲ್ಲಿ ಇಟ್ಟು ಅದಕ್ಕೆ ಬೆಂಕಿ ಕೊಟ್ಟು ವಿಭೂತಿಯನ್ನು ಪಡೆಯಲಾಗುತ್ತದೆ.ಸಾಂಪ್ರದಾಯಕವಾಗಿ ಶಿವರಾತ್ರಿಯಂದು ವಿಭೂತಿಯನ್ನು ತಯಾರಿಸಲಾಗುತ್ತದೆ.ಅನೇಕ ರೀತಿಯ ಭಸ್ಮವನ್ನು ತಯಾರಿಸಲಾಗಿದೆ.ಉದಾಹರಣೆಗೆ ಸ್ವರ್ಣ ಭಸ್ಮವನ್ನು ಚಿನ್ನದಿಂದ ತಯಾರಿಸಲಾಗುತ್ತದೆ,ಶಂಕ ಭಸ್ಮವನ್ನು ಶಂಕದಿಂದ ತಯಾರಿಸಲಾಗುತ್ತದೆ, ಮಂಡೂರು ಭಸ್ಮವನ್ನು ಕಬ್ಬಿಣದ ಆಕ್ಸೈಡ್ ನಿಂದ ತಯಾರಿಸಲಾಗುತ್ತದೆ.ಇವೆಲ್ಲವು ಆಯುರ್ವೇದದಲ್ಲಿ ರೋಗಗಳಿಗೆ ಉಪಯೋಗಿಸಲಾಗುತ್ತದೆ.ಆದರೆ ಇದನ್ನು ಬಹಳ ಸೂಕ್ಷ್ಮತೆಯಿಂದ ಮಾಡಬೇಕು,ಏಕೆಂದರೆ ಇದರಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೆ ದೇಹಕ್ಕೆ ಹಾನಿಯನ್ನು ಉಂಟು ಮಾಡುತ್ತದೆ.ವೈದ್ಯರ ಸಲಹೆಯಂತೆ ಪರಿಪಾಲಿಸುವುದು ಬಹಳ ಅನಿವಾರ್ಯವಾದ ವಿಷಯ.ವಿಭೂತಿಯು ತನ್ನ ಮಹತ್ವವನ್ನು ಪೂಜೆ-ಪುರಸ್ಕಾರಗಳ ಮೂಲಕ ಜೀವನದ ಅನೇಕ ಪಾಠಗಳನ್ನು ಸಾರುತ್ತದೆ. ಬದುಕಿನ್ನಲ್ಲಿ ಎಲ್ಲವು ಶಾಶ್ವತವಲ್ಲ ಎಂಬ ವಿಷಯವನ್ನು ಸಾರುತ್ತದೆ.
ಯಾವುದೇ ವಸ್ತುವನ್ನು ಸುಡುವದರಿಂದ ಅಂತಿಮವಾಗಿ ಮತ್ತು ಭೌತಿಕವಾಗಿ ಸಿಗುವ ವಸ್ತುವೇ ವಿಭೂತಿ ಅಥವಾ ಭಸ್ಮ. ವಿಭೂತಿಯನ್ನು ತಯಾರಿಸಲು ದಹಿಸಲ್ಪಡುವ ವಸ್ತುಗಳ ಆಧಾರದ ಮೇಲೆ ಈ ಕೆಳಗಿನಂತೆ ವಿಭೂತಿಯನ್ದು ವಿಭಾಗಿಸಬಹುದು
ನೈಸರ್ಗಿಕವಾಗಿ ದೊರೆಯುವ ಖನಿಜವನ್ನು ಭಸ್ಮವನ್ನಾಗಿ ಉಪಯೋಗಿಸುತ್ತಾರೆ:
ಸಾಮಾನ್ಯವಾಗಿ ಶಿವನ ಆರಾಧಕರೆಲ್ಲ ವಿಭೂತಿಯನ್ನು ಧರಿಸುತ್ತಾರೆ. ಇವರು ವಿಭೂತಿಯನ್ನು ಅತ್ಯಂತ ಪವಿತ್ರ ವಸ್ತುವೆಂದು ಪರಿಗಣಿಸುತ್ತಾರೆ. ಇದನ್ನು ಅಲಂಕಾರಿಕ ಕೆತ್ತನೆಯುಳ್ಳ ಮರ ಅಥವಾ ಲೋಹದಿಂದ ಮಾಡಿದ ಪೆಟ್ಟಿಗೆಯಲ್ಲಿ ಇಟ್ಟು, ಉಪಯೋಗಿಸುವರು. ಈ ಪೆಟ್ಟಿಗೆಗೆ ವಿಭೂತಿ ಕರಂಡಕ ಅಥವಾ ವಿಭೂತಿ ಪೆಟ್ಟಿಗೆ ಎಂದು ಕರೆಯಲಾಗುತ್ತಿದೆ. ಇವು ಸಾಮಾನ್ಯವಾಗಿ ಲಿಂಗಾಯತ ರಾಜ ಮನೆತನದವರ, ಗಣ್ಯ ವೀರಶೈವ ಕುಟುಂಬಗಳಲ್ಲಿ, ಮಠ ಮತ್ತು ದೇವಸ್ಥಾನಗಳಲ್ಲಿ ಈಗಲೂ ನೋಡಲು ಸಿಗುತ್ತವೆ. ಸಾಮಾನ್ಯವಾಗಿ ಶ್ರೀಗಂಧ, ತೇಗು (ಸಾಗವಾನಿ), ಹೊನ್ನೆ, ಹಲಸು, ಬೀಟೆ ಮರದಿಂದ ಈ ಪೆಟ್ಟಿಗೆಗಳನ್ನು ತಯಾರಿಸಲಾಗುತ್ತಿದ್ದು, ಅವು ರಥ, ಲಿಂಗ, ನಂದಿ, ನವಿಲು, ಕಮಲದ ಆಕಾರದಲ್ಲಿ ರೂಪಿಸಲಾಗುತ್ತದೆ ಮತ್ತು ಅದರ ಹೊರಮೈಯಲ್ಲಿ ಸೂಕ್ಷ್ಮ ಕಲಾತ್ಮಕ ಧಾರ್ಮಿಕ ಕೆತ್ತನೆ ಮತ್ತು ಪವಿತ್ರವೆಂದು ಪರಿಗಣಿಸಲಾದ ಮಂತ್ರಗಳ ಉಕ್ತಿಗಳನ್ನು ಕೆತ್ತಿರುವದು ಕಂಡುಬರುತ್ತದೆ. ಅದರಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಕೋಶಗಳು ಇರಬಹುದು. ಲೋಹದಿಂದಲೂ ಈ ಪೆಟ್ಟಿಗೆಗಳನ್ನು ತಯಾರಿಸುತ್ತಿದ್ದು ಚಿನ್ನ, ಬೆಳ್ಳಿ, ಕಂಚು, ಪಂಚ ಲೋಹ, ಹಿತ್ತಾಳೆ ಇತ್ಯಾದಿ ಲೋಹದ ಬಳಕೆಯನ್ನು ಗಮನಿಸಬಹುದಾಗಿದೆ. ಸಾಮಾನ್ಯವಾಗಿ ವಿಭೂತಿಯನ್ನು ಸಾಮೂಹಿಕ ಪೂಜೆಯ ಸಂದರ್ಭದಲ್ಲಿ ಮತ್ತು ಪ್ರಸಾದ ಸೇವನೆಯ ಸಂದರ್ಭದಲ್ಲಿ ಉಪಯೋಗಿಸುತ್ತಿದ್ದು, ಇಂಥ ಪೆಟ್ಟಿಗೆಗಳಿಗೆ ನಾಲ್ಕು ಚಕ್ರಗಳನ್ನು ಅಳವಡಿಸಿರುವದು ಕಂಡು ಬರುತ್ತದೆ. ಪಂಕ್ತಿಯಲ್ಲಿ ಕುಳಿತು ಪೂಜೆ ಮಾಡುವವರು ಅಥವಾ ಪ್ರಸಾದ ಸೇವನೆ ಮಾಡುವವರು, ತಾವು ಭಸ್ಮವನ್ನು ಧಾರಣ ಮಾಡಿಕೊಂಡ ನಂತರ ಈ ಚಕ್ರಗಳನ್ನೊಳಗೊಂಡ ಈ ಕರಂಡಕವನ್ನು ನಂತರದ ವ್ಯಕ್ತಿಗೆ ಸಾಗಿಸುತ್ತಾರೆ.
ವಿಭೂತಿಗಿಡವು ರಸ್ತೆಯ ಬದಿಯಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ಈ ಸಸ್ಯಕ್ಕೆ ಆಯುರ್ವೇದೀಯ ಮಹತ್ವವಿದೆ.